ಅಕ್ರಮ ಸಕ್ರಮ ವಿಲೇವಾರಿಗೆ ಸಂಬಂಧಪಟ್ಟ ಹಾಗೆ ಆಯಾ ಜಿಲ್ಲೆಯ ತಹಶೀಲ್ದಾರರಿಗೆ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಖಡಕ್ ವಾರ್ನಿಂಗ್ ನೀಡಿದ್ದಾರೆ. ಅರ್ಹ ರೈತರಿಗೆ ಸಲ್ಲಬೇಕಾದ ಜಮೀನು ವಿತರಣೆ ಶೀಘ್ರದಲ್ಲಿ ಆಗಬೇಕು ಅನಗತ್ಯವಾಗಿ ವಿಳಂಬ ಮಾಡಬಾರದು ಎಂಬುದಾಗಿ ತಿಳಿಸಿದ್ದಾರೆ.
ಬಗೆರ್ ಹುಕುಂ ಅರ್ಜಿಗಳ ವಿಲೇವಾರಿ!
ಅರ್ಹ ಭೂ ರಹಿತ ರೈತರಿಗೆ ಅವರ ಅರ್ಜಿ ಪರಿಶೀಲನೆ ಮಾಡಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಂತ್ಯದ ಒಳಗೆ ತಹಶೀಲ್ದಾರರು ಭೂ ವಿತರಣೆ ಮಾಡಬೇಕು ಇಲ್ಲವಾದಲ್ಲಿ ಅಂತಹ ತಹಶೀಲ್ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ (Krishna Byre Gowda) ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಆಲಸ್ಯ ಮಾಡಿ ತಹಶೀಲ್ದಾರರು ವಿಳಂಬ ಮಾಡುವಂತಿಲ್ಲ.
ಈಗಾಗಲೇ 14 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದೆ. ಅದರಲ್ಲಿ ಸಾಕಷ್ಟು ಅರ್ಜಿಗಳು ಬಂದಿವೆ. ಅವುಗಳಲ್ಲಿ ಹೆಚ್ಚಿನವು ಅನಾರ್ಹವಾಗಿವೆ. ಅಂತಹ ಅರ್ಜಿಗಳನ್ನು ಹೊರತುಪಡಿಸಿ ಸಮರ್ಪಕ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಂಡು ಭೂಮಿ ಇಲ್ಲದ ರೈತರಿಗೆ ಭೂಮಿ ವಿತರಣೆ ಕಾರ್ಯ ಶೀಘ್ರದಲ್ಲಿಯೇ ನಡೆಯಬೇಕು ಎಂದು ಹೇಳಿದ್ದಾರೆ.
ಬಗೇರ್ ಹುಕುಂ ಯೋಜನೆ (Bagar Hukum Scheme) ಯಯಲ್ಲಿ ನಮೂನೆ 50 53 ಮತ್ತು 57ರ ಅಡಿಯಲ್ಲಿ 14 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ ಸಂದಾಯ ಆಗಿದೆ. ಸರ್ಕಾರಿ ಅಧಿಕಾರಿಗಳು ಇನ್ನು ವಿಳಂಬ ಮಾಡದೆ ಸಮರ್ಪಕ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ರೈತರಿಗೆ ಅವರ ಭೂಮಿ ವಿತರಣೆ ಮಾಡಬೇಕು ಎಂದು ಸಚಿವರು ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಈ ಕೆಲಸ ಸಂಪೂರ್ಣವಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳನ್ನು ಅನಗತ್ಯವಾಗಿ ಫೀಲ್ಡ್ ಗೆ ಕಳುಹಿಸಬೇಡಿ!
ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ಕೆಲಸದ ಒತ್ತಡ ಜಾಸ್ತಿ ಇದೆ. ಹಾಗಾಗಿ ತಹಶೀಲ್ದಾರರು ಅನಗತ್ಯವಾಗಿ ಅವರನ್ನು ಫೀಲ್ಡ್ ಗೆ ಕಳುಹಿಸುವ ಅಗತ್ಯವಲ್ಲ. ಯಾವ ಅರ್ಜಿ ಅನರ್ಹವಾಗಿದೆ ಎನ್ನುವುದು ಮೊದಲ ಹಂತದಲ್ಲಿಯೇ ತಹಶೀಲ್ದಾರರಿಗೆ ಗೊತ್ತಾಗುತ್ತದೆ. ಹಾಗಾಗಿ ಆಫೀಸ್ ಹಂತದಲ್ಲಿಯೇ ಅವುಗಳ ಪರಿಶೀಲನೆಯನ್ನು ಮುಗಿಸಿ, ಹೊರತಾಗಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಅನಗತ್ಯವಾಗಿ ಫೀಲ್ಡ್ ಗೆ ಕಳುಹಿಸಿ ಟೈಮ್ ವೇಸ್ಟ್ ಮಾಡಬೇಡಿ ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಈಗಾಗಲೇ ಯಾವ ಅರ್ಜಿ ಅರ್ಹ ಎಂಬುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಅಂತವರ ಸಾಗುವಳಿ ಚೀಟಿಯನ್ನು ಕೇವಲ ಎರಡು ವಾರದ ಒಳಗೆ ತರಿಸಿಕೊಂಡು ಭೂಮಿ ವಿಲೇವಾರಿ ಮಾಡಬೇಕು ಎಂಬುದಾಗಿಯೂ ವಾರ್ನ್ ಮಾಡಿದ್ದಾರೆ. ಹೀಗಾಗಿ ಸದ್ಯದಲ್ಲಿಯೇ ಅರ್ಹ ಭೂ ರಹಿತ ರೈತರಿಗೆ ಸಾಗುವಳಿ ಜಮೀನು ಸಿಗಲಿದೆ.