ಇಂದು ರೇಷನ್ ಕಾರ್ಡ್ ಎಂಬುದು ಬಹು ಮುಖ್ಯವಾದ ದಾಖಲೆಯಾಗಿದ್ದು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ಕಾರ್ಡ್ ಮುಖ್ಯವಾಗಿ ಬೇಕು. ಈಗಾಗಲೇ ಈ ಪಡಿತರ ಕಾರ್ಡ್ ಅನ್ನು ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದು ಬಿಪಿಎಲ್, ಅಂತ್ಯೋ ದಯ ಎಪಿಎಲ್ ಎಂಬುದಾಗಿ ವಿಂಗಡಣೆ ಮಾಡಿದೆ. ಅದರಲ್ಲಿ ಬಿಪಿಎಲ್ ಕಾರ್ಡ್ (BPL Card) ಬಡವರ್ಗದ ಜನತೆಗಾಗಿಯೇ ಜಾರಿ ಮಾಡಿದ್ದು ಈ ಕಾರ್ಡ್ ಮೂಲಕ ಸರಕಾರದ ಹಲವು ರೀತಿಯ ಸೌಲಭ್ಯ ಗಳು ಜನತೆಗೆ ಸಿಗ್ತಾ ಇದೆ.
ಈಗಾಗಲೇ ಬಿಪಿಎಲ್ ಕಾರ್ಡ್ ದಾರರಿಗೆ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಯನ್ನು ಜಾರಿ ಮಾಡಿದೆ.ಹೌದು ಕಾಂಗ್ರೆಸ್ ಸರಕಾರವು ಬಿಪಿಎಲ್ ಕಾರ್ಡ್ (BPL Card) ದಾರರ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುದಾಗಿ ತಿಳಿಸಿತ್ತು.ಆದರೆ ಕೇಂದ್ರ ಸರಕಾರ ಇದಕ್ಕೆ ಒಪ್ಪದ ಕಾರಣ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ಪ್ರತಿ ಕೆಜಿ ಅಕ್ಕಿಗೆ ತಲಾ 34ರೂ.ನಂತೆ ಒಟ್ಟು 5 ಕೆಜಿ ಅಕ್ಕಿಗೆ 170ರೂ ಜಮೆ ಮಾಡುತ್ತಿದೆ
ಮುಂದಿನ ವಾರ ಹಣ ಜಮೆ!
ಅಕ್ಕಿ ಜೊತೆಗೆ ಹಣವೂ ಕೂಡ ಫಲಾನುಭವಿಗಳ ಖಾತೆಗೆ ಜಮೆ ಯಾಗ್ತಾ ಇದೆ. ಆದರೆ ಕೆಲವು ತಿಂಗಳಿನಿಂದ ಈ ಹಣ ಬಂದಿಲ್ಲ ಅಂತ ಹೆಚ್ಚಿನ ಜನರು ಹೇಳ್ತಾ ಇದ್ದಾರೆ. ಇದೀಗ ಬಿಪಿಎಲ್ ಕಾರ್ಡ್ (BPL Card) ದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಅನ್ನ ಭಾಗ್ಯ ಯೋಜನೆ (Anna Bhagya Yojana) ಯಡಿ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬಾಬ್ತು ಫಲಾನುಭವಿಗಳ ಖಾತೆಗೆ ನೇರವಾಗಿ ಮುಂದಿನ ವಾರ ಹಣ ಜಮೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಸಚಿವರ ಸ್ಪಷ್ಟನೆ!
ಈಗಾಗಲೇ ಸರ್ವರ್ ಸಮಸ್ಯೆ ಯಿಂದಾಗಿ ಅನ್ನಭಾಗ್ಯ ಹಣ ಖಾತೆಗೆ ಬಂದಿಲ್ಲ. ಮುಂದಿನ ವಾರದಿಂದ ಫಲಾನುಭವಿಗಳ ಖಾತೆಗೆ ಇದುವರೆಗೆ ಬಾರದೇ ಇರುವ ಹಣ ಸೇರಿಸಿ ಖಾತೆಗೆ ಹಾಕುದಾಗಿ ಸಚಿವ ಮುನಿಯಪ್ಪ (K. H. Muniyappa) ಅವರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಸರಿಯಾದ ಸಮಯಕ್ಕೆ ಹಣ ಖಾತೆಗೆ ಹಾಕುದಾಗಿ ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಹಣದ ಬದಲಾಗಿ ಐದು ಕೆಜಿ ಅಕ್ಕಿ ಜೊತೆಗೆ ಬೇಳೆ, ಎಣ್ಣೆ ,ಸಕ್ಕರೆ ಮುಂತಾದ ಆಹಾರ ಸಾಮಗ್ರಿ ಗಳನ್ನು ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಾಜ್ಯದ 93 ಪರ್ಸೆಂಟ್ ಜನ ಅಭಿಪ್ರಾಯಪಟ್ಟಿದ್ದು ಈ ಬಗ್ಗೆ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳ ಬೇಕಾಗುತ್ತದೆ. ಇನ್ನು ಈ ಬಗ್ಗೆ ನಿರ್ಧಾರ ಕೈ ಗೊಂಡಿಲ್ಲ ಎಂದಿದ್ದಾರೆ.