ಬಿಗ್ ಬಾಸ್ ಸೀಸನ್ 11 (Bigg Boss S11) ಆರಂಭ ವಾಗಿದ್ದು ಈಗಾಗಲೇ ಎರಡು ವಾರ ಕಳೆದಿದೆ. ಕನ್ನಡದ ಬಿಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ಒಂದಾಗಿದ್ದು ಈ ಶೋ ಗೆ ಹೆಚ್ಚಿನ ಅಭಿಮಾನಿಗಳು ಕೂಡ ಇದ್ದಾರೆ.ಆದರೆ ಇದೀಗ ಎರಡೇ ವಾರಕ್ಕೆ ಬಿಗ್ ಬಾಸ್ ಗೆ ಸಂಕಷ್ಟ ಎದುರಾಗಿದೆ. ಹೌದು ಬಿಗ್ ಬಾಸ್ ಕನ್ನಡ 11 (Bigg Boss Kannada S11) ಅನ್ನು ಹೊಸ ಅಧ್ಯಾಯ ಎಂದು ಟ್ಯಾಗ್ ನೀಡಿ ಸ್ವರ್ಗ, ನರಕದ ಕಾನ್ಸೆಪ್ಟ್ ತರಲಾಗಿತ್ತು. ಸ್ಪರ್ಧಿಗಳನ್ನು ಸ್ವರ್ಗವಾಸಿಗಳು ಹಾಗೂ ನರಕವಾಸಿಗಳು ಎಂದು ವಿಂಗಡಣೆ ಮಾಡಲಾಗಿತ್ತು.
ಆದರೆ ಇದೇ ವಿಚಾರವಾಗಿ ಇದೀಗ ಬಿಗ್ ಬಾಸ್ ಗೆ ಸಂಕಷ್ಟ ಎದುರಾಗಿದೆ. ಹೌದು ಮಹಿಳಾ ಸ್ಪರ್ಧಿಗಳನ್ನು ನರಕದಲ್ಲಿ ಇಟ್ಟಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತ ವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ದೂರು ಕೊಡಲಾಗಿದೆ.
ಬಿಗ್ ಬಾಸ್ ಸ್ವರ್ಗ- ನರಕ ಡಿವೈಡ್ ಮಹಿಳಾ ಆಯೋಗದ ಕೋಪಕ್ಕೆ ಗುರಿಯಾಗಿದೆ. ಸ್ವರ್ಗ ನರಕ ಹೆಸರಿನಲ್ಲಿ ಸ್ಪರ್ಧಿಗಳ ಸಾಮಾಜಿಕ ನ್ಯಾಯಕ್ಕೆ ತೊಂದರೆ, ಮೂಲ ಭೂತ ಸೌಕರ್ಯ ದ ಕೊರತೆ ಆಗುತ್ತಿದೆ ಎಂದು ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಹಿಳೆಯರ ಖಾಸಗಿ ತನ್ನಕ್ಕೆ ಧಕ್ಕೆಯಾಗುತ್ತಿದೆ. ಊಟ ಹಾಗೂ ಶೌಚಾಲಯದ ವಿಚಾರವಾಗಿ ನರಕ ವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದು ಕಲರ್ಸ್ ವಾಹಿನಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು
ಈಗ ನೋಟಿಸ್ ಬಂದ ಹಿನ್ನೆಲೆಯಲ್ಲಿ ಸ್ವರ್ಗ ನರಕದ ಕಾನ್ಸೆಪ್ಟ್ ಕ್ಯಾನ್ಸಲ್ ಮಾಡಲಾಗಿದ್ದು ಕ್ರೇನ್ ಮೂಲಕ ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಪೂರ್ಣಗೊಂಡಿದೆ. ನೋಟೀಸ್ನ ಬಳಿಕವೇ ಭಾನುವಾರದ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್ ನರಕ ಟೀಮ್ ಗೆ ಆಯ್ಕೆ ಯಾಗಿದ್ದ ಮಹಿಳಾ ಸ್ಪರ್ಧಿಗಳ ಮುಂದೆ ಈ ಪ್ರಶ್ನೆ ಇಟ್ಟಿದ್ದಾರೆ.
ನರಕದ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಎಲ್ಲ ಮೂಲಭೂತ ಸೌಕರ್ಯ ಸಿಗುತ್ತಿದೆಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಮಹಿಳಾ ಸ್ಪರ್ಧಿ ಗಳು ನರಕದ ಮನೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದಿದ್ದಾರೆ. ಚೈತ್ರಾ ಕುಂದಾಪುರ ಅವರು ನಮಗೆ ನರಕದಲ್ಲಿ ಅಂಥ ಸಮಸ್ಯೆಗಳೇನೂ ಕಾಣಿಸಿಲ್ಲ. ನೀರಿನ ಸಮಸ್ಯೆಯು ಬಂದಿಲ್ಲ. ವಾಷ್ ರೂಮ್ ಬಳಕೆ ಮಾಡುವುದರಲ್ಲಿಯೂ ಸಮಸ್ಯೆ ಆಗಿಲ್ಲ. ಹೆಣ್ಣುಮಕ್ಕಳಿಗೆ ನೀರು ಮತ್ತು ಟಾಯ್ಲೆಟ್ನ ಅವಶ್ಯಕತೆ ಚೆನ್ನಾಗಿರಬೇಕು. ನಮಗೆ ಯಾವುದೇ ತೊಂದರೆ ಯಾಗಿಲ್ಲ ಎಂದಿದ್ದಾರೆ.