ರಾಜ್ಯದ ಸರಕಾರಿ ನೌಕರರಿಗೆ (Govt Employees) ಇದೀಗ ಗುಡ್ ನ್ಯೂಸ್ ಮಾಹಿತಿಯೊಂದು ಬಂದಿದೆ. ಹೌದು ರಾಜ್ಯ ಸರಕಾರವು ಆಗಸ್ಟ್ 1 ರಿಂದ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಮಾಡಿದ್ದು, ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆ ಆಗಲಿದೆ.ದೀಪಾವಳಿಗೂ ಮುನ್ನವೇ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿ ದಾರರ ಡಿಆರ್ ಅನ್ನು ಜುಲೈ 1ರಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.
ಹೌದು ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗ (Govt Employees) 3ರಷ್ಟು ಹೆಚ್ಚುವರಿ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ (Pensioners) ತುಟ್ಟಿ ಭತ್ಯೆ ಪರಿಹಾರಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. ಪ್ರತಿ ಬಾರಿಯು ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ.
ಇದೀಗ ರಾಜ್ಯ ಸರ್ಕಾರಿ ಸಿಬ್ಬಂದಿ ಗಳಿಗೆ ಗೃಹನಿರ್ಮಾಣ ಮುಂಗಡವನ್ನು ಎ ವೃಂದಕ್ಕೆ 65.00 ಲಕ್ಷ ಮತ್ತು ಇತರೆ ವೃಂದದ ನೌಕರರಿಗೆ ರೂ. 40.00 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದ್ದು, ನಾಲ್ಕು ಚಕ್ರ ವಾಹನ ಖರೀದಿ ಮುಂಗಡವನ್ನು ರೂ. 3.00 ಲಕ್ಷದಿಂದ ರೂ. 6.00 ಲಕ್ಷಕ್ಕೆ ಹಾಗೂ ದ್ವಿ-ಚಕ್ರ ವಾಹನಕ್ಕೆ ರೂ. 50,000-00 ರಿಂದ ರೂ. 80,000-00 ಗಳಿಗೆ ಹೆಚ್ಚಳ ಮಾಡಿದ್ದು ಈ ವಿಚಾರ ರಾಜ್ಯ ಸರಕಾರಿ ನೌಕರರಿಗೆ ಖುಷಿಯಾಗಿದೆ.
ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಲಿದ್ದು 2024ರ ಮಾರ್ಚ್ನಲ್ಲಿ ಶೇ 4ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಅಕ್ಟೋಬರ್ನಲ್ಲಿ ಡಿಎ ಹೆಚ್ಚಿಸಲಾಗಿದೆ. ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುಲಿದ್ದು ಬರುವ ಆದೇಶದಲ್ಲಿ ಈ ಕುರಿತು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ.ಇದರಿಂದಾಗಿ ಸರ್ಕಾರಿ ನೌಕರರ, ಪಿಂಚಣಿದಾರರ ಮೂಲ ವೇತನದ ಡಿಎ ಶೇ 42 ರಿಂದ ಶೇ 45ಕ್ಕೆ ಏರಿಕೆಯಾಗಲಿದೆ.
ಈಗಾಗಲೇ ರಾಜ್ಯದಲ್ಲಿ ಹಣ ದುಬ್ಬರ, ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಇತ್ಯಾದಿ ಕಂಡು ಬಂದಿದ್ದು ಸರ್ಕಾರಿ ನೌಕರರಿಗೆ ಹೆಚ್ಚು ಸಹಕಾರಿ ಯಾಗಲಿದೆ.ಶೇ 3ರಷ್ಟು ಡಿಎ ಹೆಚ್ಚಳದ ಬಳಿಕ ಮಾಸಿಕ 18,000 ರೂ. ವೇತನ ಪಡೆಯುವ ಮೊದಲ ಹಂತದ ಕೇಂದ್ರ ಸರ್ಕಾರಿ ನೌಕರರ ವೇತನ 540 ರೂ. ಹೆಚ್ಚಾಗಲಿದ್ದು ಈ ವಿಚಾರ ಕೇಂದ್ರ ಮತ್ತು ರಾಜ್ಯ ನೌಕರರಿಗೂ ಖುಷಿಯ ವಿಚಾರವಾಗಿದೆ.