ಕೆಲವೊಂದು ಖಾಸಗಿ ಜಮೀನಿನಲ್ಲಿ (Private Land) ಮನೆ ನಿರ್ಮಿಸಿಕೊಂಡು ಇದ್ದಂತಹ ಜನರಿಗೆ ಅಲ್ಲಿನ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಲು ಭೂ ಸಕ್ರಮ ಮಾಡಿಕೊಂಡ ಫಲಾನು ಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆ ಮುಂದಾಗಿದೆ. ಹೌದು ಖಾಸಗಿ ಜಮೀನು (Private Land) ಗಳಲ್ಲಿ ಕೆಲವು ಜನರು ಭೂ ದಾಖಲೆ ಇಲ್ಲದೆ ನೆಲೆ ಸಿದ್ದಾರೆ. ಅಲ್ಲಿಕೃಷಿ ಮಾಡಿಕೊಂಡಿಯೂ ಜೀವನ ನಡೆಸುತ್ತಿದ್ದಾರೆ.ಹಾಗಾಗಿ ಖಾಸಗಿ ಜಮೀನಿನಲ್ಲಿ ನೆಲೆಸಿ ಭೂ ದಾಖಲೆ ಇಲ್ಲದೆ ಕೆಲವೊಂದು ಸೌಲಭ್ಯ ದಿಂದಲೂ ವಂಚಿತ ರಾಗಿದ್ದಾರೆ.
ಹಾಗಾಗಿ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗವಾಗಿ ಪರಿ ವರ್ತಿಸಿ, ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲು ಸರ್ಕಾ ರ ಆದೇಶ ನೀಡಿದೆ. ಈ ಮೂಲಕ ಖಾಸಗಿ ಜಮೀನು (Private Land) ಗಳಲ್ಲಿ ವಾಸಿ ಸುತ್ತಾ, ದಾಖಲೆ ರಹಿತರಾಗಿದ್ದಂತ ಜನತೆಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಇವರಿಗೆ ಗುಡ್ ನ್ಯೂಸ್!
ಇದರಲ್ಲಿ ಹಲವಾರು ಜನ ವಸತಿಗಳು ಇರಲಿದ್ದು ವಿಶೇಷವಾಗಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರ ಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಇತ್ಯಾದಿ ಹೆಸರುಗಳಿಂದ ಇರು ವಂತಹ ಜನವಸತಿಗಳು ದಾಖಲೆ ರಹಿತವಾಗಿಯೇ ಭೂ ಹೊಂದಿದ್ದು ಬಹಳಷ್ಟು ಸಮಸ್ಯೆಗೆ ಕಾರಣ ವಾಗಿದ್ದು ಸರಕಾರದ ಸೌಲಭ್ಯ ಗಳು ಕೂಡ ಸಿಕ್ತಾ ಇಲ್ಲ.
ಇದೀಗ ಸರ್ಕಾರವು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಕಲಂ 38ಎ ಮತ್ತು ನಿಯಮ 9ಸಿ ಮೂಲಕ ಖಾಸಗಿ ಜಮೀನಿನಲ್ಲಿ ಇರುವಂತಹ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿ ಗಳಿಗೆ ಹಕ್ಕುಪತ್ರ ನೀಡಲು ಮುಂದಾ ಗಿದೆ. ಈ ಯೋಜನೆಯನ್ನು ಮತ್ತಷ್ಟು ಅನುಷ್ಠಾನ ಮಾಡಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38ಎ ಮತ್ತು ನಿಯಮ 9ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆ ಗೊಂಡಿ ರುವ ದಾಖಲೆರಹಿತ ಜನ ವಸತಿ ಪ್ರದೇಶಗಳಲ್ಲಿನ ನಿವಾಸಿ ಗಳಿಗೆ ಹಕ್ಕುಪತ್ರ ನೀಡಲು ಮುಂದಾಗಿದೆ.