ರಾಜ್ಯದಲ್ಲಿ ರೈತರು ಅಭಿವೃದ್ಧಿ ಯಾಗಬೇಕು, ಕೃಷಿಯಲ್ಲಿ ರೈತರು ಹೆಚ್ಚು ಅಭಿವೃದ್ಧಿ ಯಾಗಬೇಕು ಎಂದು ಸರಕಾರ ಹಲವು ರೀತಿಯ ರೈತಪರ ಯೋಜನೆಗಳನ್ನು ಜಾರಿ ಮಾಡ್ತಾ ಬಂದಿದೆ. ಆರ್ಥಿಕವಾಗಿ ಹಿಂದುಳಿದ ರೈತರಿಗೆ ನೀರಿನ ವ್ಯವಸ್ಥೆ, ಕೃಷಿ ಸಲಕರಣೆಗಳ ವಿತರ ಣೆ, ಕೃಷಿ ತರಬೇತಿ ಇತ್ಯಾದಿಯನ್ನು ಸರಕಾರ ನೀಡ್ತಾ ಇದೆ. ಇದೀಗ ರೈತರ ಭೂಮಿ ಸಕ್ರಮ ಗೊಳಿಸಲು ಪಹಣಿ ತಿದ್ದುಪಡಿ ಇದ್ದಲ್ಲಿ ಅದನ್ನು ಶೀಘ್ರ ದಲ್ಲೇ ನೀಡಲು ಸರಕಾರ ಹೊಸ ಕ್ರಮ ಕೈಗೊಂಡಿದೆ.
ಒಂದು ಸರ್ವೆ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ರೈತರಿಗೆ ಸರಕಾರದ ಸೌಲಭ್ಯ ಸಿಗುವುದಿಲ್ಲ. ಅದನ್ನು ತೆಗೆದುಹಾಕಿ ಪ್ರತ್ಯೇಕವಾಗಿ ಅವರ ಭೂಮಿ ಯನ್ನು ಪೋಡಿ ಮಾಡಿ ಕೊಳ್ಳಬೇಕು. ಅಂದರೆ ಬಹುಮಾಲಿಕತ್ವದಿಂದ ಏಕ ಮಾಲಿಕತ್ವ ಮಾಡಿಸಿ ಪಹಣಿ ಒಬ್ಬ ರೈತನ ಹೆಸರಿಗೆ ಮಾಡಿಸಬೇಕು. ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹಲವು ವರ್ಷದಿಂದ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂ ರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಇದರಿಂದ ರೈತರಿಗೆ ಬಹಳಷ್ಟು ಸಮಸ್ಯೆ ಯಾಗಿ ದೆ.ರೈತರು ಪ್ರಯತ್ನ ಮಾಡುತ್ತಿದ್ದ. ರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹು ತೇಕ ರೈತರಿಗೆ ಆಗಿಲ್ಲ.
ಹೀಗಾಗಿ ರೈತರಿಗೆ ಅತೀ ಶೀಘ್ರದಲ್ಲೇ ಪಹಣಿ ನೀಡಬೇಕು. ಅಧಿಕಾರಿಗಳೂ ದೀರ್ಘ ಕಾಲದ ಸಮಸ್ಯೆಗಳನ್ನು ಪರಿಹರಿಸಲು ತಮ್ಮಿಂದಾದ ಸಹಕಾರ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಅಧಿಕಾರಿ ಗಳಿಗೆ ತಿಳಿಸಿದ್ದಾರೆ.ಇನ್ನು ಡಿಜಿಟಲ್ ಆ್ಯಪ್ ಮೂಲಕವು ಇಂದು ಸುಲಭ ವಾಗಿ ಮಾಡ ಬಹುದಾಗಿದ್ದು ಇದರಿಂದ ಸರಳ, ವೇಗವಾಗಿ ಕಡತಗಳನ್ನು ತಯಾರಿಸಬಹುದು.
ಡಿಜಿಟಲ್ ಆ್ಯಪ್ ಜಾರಿ!
ಹಾಗಾಗಿ ರೈತರಿಗೆ ಕೆಲಸ ಸುಲಭ ವಾಗಲು ರಾಜ್ಯ ಸರ್ಕಾರವು ಮೊಬೈಲ್ ನಲ್ಲೇ ಪೋಡಿ ನಕ್ಷೆ ಪಡೆಯುವ ಹೊಸ ತಂತ್ರಾಂಶವನ್ನು ಇದೀಗ ಜಾರಿ ಮಾಡಿದೆ.ಇದರಿಂದ ಪೋಡಿ ನಕ್ಷೆ ಮಾಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯು ವುದನ್ನು ತಪ್ಪಿಸಿ ಅತೀ ಬೇಗನೆ ಕೆಲಸ ವಾಗಲಿದೆ. ಹಾಗಾಗಿ ರೈತರು https://bhoomojini.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಿ ಭೂ ಸಕ್ರಿಯ ಮಾಡಲು ಅವಕಾಶ ಇರಲಿದೆ.