Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Ganesh Pooja: ಚೌತಿ ಹಾಗೂ ಗಣೇಶ ಪೂಜೆಗೆ ಈ ತಪ್ಪು ಖಂಡಿತಾ ಮಾಡಲೇಬೇಡಿ
AstrologyInformation

Ganesh Pooja: ಚೌತಿ ಹಾಗೂ ಗಣೇಶ ಪೂಜೆಗೆ ಈ ತಪ್ಪು ಖಂಡಿತಾ ಮಾಡಲೇಬೇಡಿ

Chetan Yedve
Last updated: April 15, 2025 6:11 pm
By Chetan Yedve

ಈ ಬಾರಿ ಸೆ.07 ರಿಂದ ಆರಂಭವಾದ ಗಣೇಶ ಚತುರ್ಥಿ (Ganesh Chaturthi) ಗೆ ಗಲ್ಲಿಗಲ್ಲಿಗಳಲ್ಲೂ ವಿಘ್ನನಾಶಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಪುನಸ್ಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ನಂತರ ವಿಗ್ರಹ ವಿಸರ್ಜನೆ ಮಾಡುವ ಅದ್ದೂರಿ ಹಬ್ಬಕ್ಕೆ ತೈಯಾರಿ ನಡೆದಿದೆ. ಈ ನಡುವೆ, ಗಣೇಶನನ್ನು ಆರಾಧಿಸುವ (Ganesh Pooja) ಈ ಹಬ್ಬದ ಸಮಯದಲ್ಲಿ ಎಲ್ಲರೂ ಅನುಸರಿಸಬೇಕಾದ ನಡೆಗಳು (Rituals) ಹಾಗೂ ಚೌತಿಯ ಸಮಯದಲ್ಲಿ ಮಾಡಲೇಬಾರದ ತಪ್ಪು (Mistakes) ಗಳನ್ನು ವಿವರಿಸ್ತೀವಿ ನೋಡಿ.

Ganesh Pooja: ನೀವು ಗಣಪತಿ ಪೂಜೆ ಮಾಡುವಾಗ ಇದೆಲ್ಲಾ ಗಮನದಲ್ಲಿರಲಿ

ಗಣೇಶ ಚತುರ್ಥಿಯಂದು ಗಣೇಶನಿಗೆ ಇಷ್ಟವಾದ ಮೋದಕ, ಕಡುಬು, ಪಂಚಕಜ್ಜಾಯ ಮುಂತಾದ ಖಾದ್ಯಗಳನ್ನು ಅರ್ಪಿಸಿ ಗರಿಕೆಯೊಂದಿಗೆ ಪೂಜಿಸಲಾಗುತ್ತದೆ. ಎಲ್ಲಾ ಕಾರ್ಯಗಳೂ ವಿಘ್ನವಿಲ್ಲದೆ ನೆರವೇರಲು ಗಣೇಶನ ಆಶೀರ್ವಾದವೇ ಬೇಕು ಎನ್ನುವ ಕಾರಣಕ್ಕೆ ಪ್ರಥಮವಂದಿತ ಗಣಪನಿಗೆ ಪೂಜೆ ಮಾಡಲಾಗುತ್ತದೆ. ಗಣೇಶನ ಪೂಜೆಗೆ ಅಥವಾ ಗಣೇಶ ಚತುರ್ಥಿಯಂದು ನೀವು ಅನುಸರಿಸಲೇಬೇಕಾದ ಕೆಲವು ಅಂಶಗಳನ್ನು ಗಮನವಿಟ್ಟು ಓದಿ.

  • ಚೌತಿಯ ಹುಣ್ಣಿಮೆಯ ಚಂದ್ರನನ್ನು ತಪ್ಪಿಯೂ ನೋಡಬೇಡಿ. ಚೌತಿಯ ಚಂದ್ರನನ್ನು ನೋಡುವುದರಿಂದ ಕಷ್ಟಗಳು ಹಾಗೂ ಅಪವಾದಗಳು ಹೆಚ್ಚಾಗುತ್ತವೆ ಎಂಬ ಪ್ರತೀತಿಯಿದೆ.
  • ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸುವರು, ಮೂರ್ತಿ ಪ್ರತಿಷ್ಟಾಪಿಸಿದ ದಿನವೇ ವಿಸರ್ಜಿಸುವವರೂ ಇದ್ದಾರೆ ಅಥವಾ 10-15 ದಿನಗಳ ಕಾಲ ಪೂಜಿಸಿ ನಂತರ ವಿಸರ್ಜಿಸುವವರೂ ಇದ್ದಾರೆ. ಹಾಗಾಗಿ ಆಯಾಯ ದಿನಗಳ ಪೂಜೆಯನ್ನು ಸಮರ್ಪಕವಾಗಿ ಮಾಡಬೇಕಾದದ್ದು ಅತ್ಯವಶ್ಯ.
  • ಗಣೇಶನ ಮೂರ್ತಿಯನ್ನು ಕೂರಿಸುವುದು ಎಷ್ಟು ಪುಣ್ಯಪ್ರದವೋ, ಪೂಜೆಯ ವಿಧಾನದಲ್ಲಿ ತಪ್ಪಾಗಿ ನಡೆದುಕೊಂಡರೆ ಗಣೇಶನ ಅವಕೃಪೆಗೆ ತುತ್ತಾಗುವುದೂ ಅಷ್ಟೇ ಖಚಿತ. ಹಾಗಾಗಿ ಕೆಲವೊಂದು ನೀತಿ ನಿಯಮಗಳನ್ನು ದಯವಿಟ್ಟು ಅನುಸರಿಸಿ.
  • ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೆ ಹಿಂದಿನ ವರ್ಷದ ಮೂರ್ತಿಗಳನ್ನು ಬಳಸುವಂತಿಲ್ಲ. ಹೊಸ ಮೂರ್ತಿಯನ್ನೇ ತಂದು ಪ್ರತಿಷ್ಠಾಪಿಸಿ ಪೂಜಿಸಬೇಕು.
  • ಗಣಪತಿ ದೇವರಿಗೆ ಗರಿಕೆ ಹುಲ್ಲು (Bermuda Grass or Durva grass) ಎಂದರೆ ಅತ್ಯಂತ ಪ್ರಿಯ. ಗರಿಕೆ ಹೂ ಅರ್ಪಿಸಿ ಪೂಜೆಗೈದರೆ ಗಣಪತಿ ಬೇಗ ಒಲಿಯುತ್ತಾನೆ.
  • ಗಣಪತಿಗೆ ತುಳಸಿ (Holy Basil) ಹಾರ ಅಥವಾ ತುಳಸಿ ಎಲೆಯನ್ನು ಸಲ್ಲಿಸುವುದು ನಿಷಿದ್ಧ. ತುಳಸಿಗೂ ಹಾಗೂ ಗಣಪತಿಗೂ ವಿವಾಹದ ವಿಚಾರಕ್ಕೆ ಪರಸ್ಪರ ಸಂಘರ್ಷವಿತ್ತು ಎನ್ನುವ ಪ್ರತೀತಿಯಿದೆ.
  • ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಕಟ್ಟುನಿಟ್ಟಾದ ವೃತದಲ್ಲಿರಬೇಕು. ಯಾವುದೇ ಕಾರಣಕ್ಕೆ ವೃತನಿಯಮಗಳನ್ನು ಮೀರಬಾರದು. ಹಾಗೊಮ್ಮೆ ಮೀರಿದಲ್ಲಿ, ಅದರಿಂದ ಉಂಟಾಗುವ ದೋಷವು ಅವರಿಗಷ್ಟೇ ಅಲ್ಲದೇ, ಎಲ್ಲರಿಗೂ ಸುತ್ತಿಕೊಳ್ಳುತ್ತದೆ.
  • ಗಣಪತಿ ಪೂಜೆಗೆ ಸಾತ್ವಿಕವಾದಂತಹ ಸಸ್ಯಾಹಾರ (Veg food) ಅಥವಾ ಫಲಾಹಾರ (Fruits) ವನ್ನು ಸೇವಿಸಬೇಕು. ಗಣಪತಿ ಪೂಜೆಯ ಸಮಯದಲ್ಲಿ ಮಾಂಸಾಹಾರ (Non-Veg) ಅಥವಾ ಮೀನು ಮುಂತಾದವು ನಿಷಿದ್ಧ.
  • ಗಣಪತಿ ಪ್ರತಿಷ್ಠಾಪನೆ ಮಾಡುವಾಗ ಎಂದಿಗೂ ದಕ್ಷಿಣ (South) ಕ್ಕೆ ಮುಖಮಾಡಿ ಪ್ರತಿಷ್ಠಾಪಿಸಬಾರದು. ಇದರಿಂದ ಹಲವು ದೋಷಗಳು ಉಂಟಾಗುತ್ತವೆ. ದಕ್ಷಿಣಾಭಿಮುಖವಾದ ಮೂರ್ತಿ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವ ಕ್ರಮ ಕೂಡ ಶಾಸ್ತ್ರದಲ್ಲಿ ನಿಷಿದ್ಧ.
  • ಮೂರ್ತಿ ಪ್ರತಿಷ್ಠಾಪನೆಯಾದ ನಂತರ ಪ್ರತಿಷ್ಠಾಪಿಸಿದ ಜಾಗದಿಂದ ಒಬ್ಬರೂ ಇಲ್ಲದಂತೆ ಮೂರ್ತಿಯನ್ನು ಬಿಟ್ಟು ಹೀಗಬಾರದು. ಸ್ಥಾಪಿಸಿದಾಗಿನಿಂದ ವಿಸರ್ಜಿಸುವ ತನಕ ಕನಿಷ್ಠ ಒಬ್ಬರಾದರೂ ವಿಗ್ರಹದ ಬಳಿಯಲ್ಲಿರಬೇಕು.

ಗಣೇಶ ಪೂಜೆಯ ಸಮಯದಲ್ಲಿ ಈ ವಿಚಾರಗಳೂ ಗಮನದಲ್ಲಿರಲಿ!

  • ಗಣಪತಿ ಪ್ರತಿಷ್ಠಾಪಿಸಿದ ನಂತರ ಗಲಾಟೆ, ವಿವಾದ, ಜಗಳ ಇವುಗಳನ್ನೆಲ್ಲಾ ಮಾಡದೆ, ದೇವರ ಸ್ಮರಣೆ ಮಾಡುತ್ತಿರಬೇಕು. ಗಣೇಶನಿಗೆ ಭಕ್ತಿಯೇ ಮುಖ್ಯ. ಅವನ ಕೋಪಕ್ಕೆ ತುತ್ತಾದಲ್ಲಿ ಪರಿಹಾರವೂ ಕಷ್ಟಸಾಧ್ಯ ಎನ್ನುವುದು ನೆನಪಿರಲಿ.
  • ಗಣೇಶ ಮೂರ್ತಿ ಸ್ಥಾಪನೆಗೆ ಮತ್ತು ವಿಸರ್ಜನೆಗೆ ಸರಿಯಾದ ಮುಹೂರ್ತ (Muhurtha) ನೋಡಿಕೊಳ್ಳಬೇಕು. ನಮಗೆ ಸಮಯವಾದಾಗ ಸ್ಥಾಪಿಸುವುದು ಅಥವಾ ವಿಸರ್ಜಿಸುವುದು ಗಣಪತಿಯ ಅವಕೃಪೆಗೆ ತುತ್ತಾಗುವಂತೆ ಮಾಡುತ್ತದೆ.
  • ಗಣಪತಿಗೆ ಕೆಂಪು (Red) ಮತ್ತೆ ಹಳದಿ (Yellow) ಬಹಳ ಇಷ್ಟವಾದ ಬಣ್ಣಗಳು. ಆ ಬಣ್ಣದ ಹೂವುಗಳನ್ನು ಅರ್ಪಿಸಿ ಹಾಗೂ ಆ ಬಣ್ಣದ ಹೊಸ ಬಟ್ಟೆ ಧರಿಸಿದರೆ ಗಣಪತಿಗೂ ಪ್ರಿಯ.
  • ಗಣಪತಿಗೆ ಆರತಿ ಎತ್ತಿ, ನೈವೇದ್ಯಗಳನ್ನು ಅರ್ಪಿಸಿ ನಂತರ ಮೂರ್ತಿಯನ್ನು ವಿಸರ್ಜಿಸಬೇಕು. ಮೂರ್ತಿ ವಿಸರ್ಜನೆಯ ಸಮಯ ಮೂರ್ತಿ ಕೂರಿಸಿದ ಸ್ಥಳ ಅಥವಾ ಮನೆಯಲ್ಲಿ ಯಾರಾದರೂ ಒಬ್ಬರು ಇರಲೇಬೇಕು.
  • ಗಣೇಶ ಚತುರ್ಥಿಯ ಸಮಯದಲ್ಲಿ ಯಾವುದೇ ರೀತಿಯ ದಾಂಪತ್ಯ ಜೀವನದ ಚಟುವಟಿಕೆಗಳು ಅಥವಾ ಇತರ ಕ್ರಿಯೆಗಳನ್ನು ಮಾಡದೇ, ಕೇವಲ ಭಕ್ತಿಯಿಂದ ದೇವರ ಪೂಜೆಯಲ್ಲಿ ತೊಡಗಿಸಿಕೊಂಡರೆ ಗಣಪತಿ ಒಲುಮೆ ಖಂಡಿತ.
  • ಗಣಪತಿಗೆ ಹರಕೆಗಳು ಪ್ರಿಯವಾದುದು. ಆದರೆ, ಆ ಹರಕೆ ಚಿಕ್ಕ ಪಂಚಕಜ್ಜಾಯವಾದರೂ ಸಹ ಅವನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಹರಕೆ ಸಲ್ಲಿಸಿದ ನಂತರ ಅಹಂಕಾರಪಡಬೇಡಿ.

 ಈ ಕ್ರಮಗಳು ಎಲ್ಲಾ ಪೂಜೆಗೂ ಅನ್ವಯ

ಈ ಎಲ್ಲಾ ಕ್ರಮಗಳು ಕೇವಲ ಗಣೇಶ ಚತುರ್ಥಿ (Ganesh Chaturthi) ಗೆ ಅಥವಾ ಗಣೇಶನ ಪೂಜೆಗೆ ಮಾತ್ರ ಅನ್ವಯವಾಗುವುದಲ್ಲ, ಎಲ್ಲಾ ದೇವರ ಪೂಜೆಗೂ ಅದರದ್ದೇ ಆದ ಕ್ರಮಗಳಿದ್ದು, ಅವುಗಳನ್ನು ಅನುಸರಿಸಿದರೆ ಮಾತ್ರ ಫಲ ದೊರಕುತ್ತದೆ. ಶಾಸ್ತ್ರೋಕ್ತವಾದ ಪೂಜಾವಿಧಾನಗಳು ಕೇವಲ ಶಾಸ್ತ್ರಕ್ಕಲ್ಲದೇ, ಅತ್ಯಂತ ಶ್ರದ್ಧೆಯಿಂದ ಆಚರಿಸಿದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾದಂತಹ ಫಲವನ್ನು ಖಂಡಿತಾ ಪಡೆಯಬಹುದು.

ತಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳೊಂದಿಗೆ, ದೇವ ಶ್ರೀ ಗಣೇಶನು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಲಿ ಎಂದು ಪ್ರಾರ್ಥಿಸಿಕೊಳ್ಳೋಣ.

Ganesh Temple: ಭಾರತದಲ್ಲಿರುವ ಗಣೇಶನ 10 ಪ್ರಸಿದ್ಧ ದೇವಸ್ಥಾನಗಳಿವು!

Income Tax: ಆದಾಯ ತೆರಿಗೆ ನೋಟಿಸ್ ಇಲ್ಲದೆ ದಿನಕ್ಕೆ ಎಷ್ಟು ನಗದು ಹಣ ಪಡೆಯಬಹುದು?

ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.

Daughter Rights: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿರಲಿದೆ ಗೊತ್ತಾ?

Shani Effect (Horoscope): ದೀಪಾವಳಿಯ ನಂತರ ಈ 5 ರಾಶಿಯವರಿಗೆ ಅದೃಷ್ಟ

TAGGED:Common mistakes to avoid in Ganesh poojaGanesh ChaturthiGanesh PoojaGanesh Pooja method
Previous Article Paris Paralympics 2024: ದಾಖಲೆಯ ಪದಕಗಳೊಂದಿಗೆ ಜಗತ್ತು ಗೆದ್ದ ಭಾರತದ ಪ್ಯಾರಾಲಿಂಪಿಕ್ಸ್ ಪಟುಗಳ ಲಿಸ್ಟ್ ಇಲ್ಲಿದೆ ನೋಡಿ.
Next Article Tirupati Laddu: ತಿರುಪತಿ ಭಕ್ತರಿಗೆ ಶಾಕ್, ಲಡ್ಡು ತಯಾರಿಕೆ ಬಗ್ಗೆ ಚಂದ್ರಬಾಬು ನಾಯ್ಡು ಗಂಭೀರ ಆರೋಪ!
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
RBI ದರ ಇಳಿಕೆ: ಗೃಹ ಸಾಲದ EMI ಕಡಿಮೆಯಾದ ಪ್ರಮುಖ ಬ್ಯಾಂಕ್‌ಗಳ ಪಟ್ಟಿ!
Finance
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use