Actor Yash: ಚಿತ್ರರಂಗದ ಕ್ರಿಕೆಟ್ ಪಂದ್ಯಗಳಿಗೆ ಯಶ್ ಏಕೆ ಭಾಗವಹಿಸಲ್ಲ? ಸತ್ಯ ಹೊರಕ್ಕೆ

Advertisement
ಕಿಚ್ಚ ಸುದೀಪ್ ಇದ್ದಾರೆ ಅನ್ನುವ ಕಾರಣಕ್ಕೆ ದರ್ಶನ್, ಯಶ್ ಕೆಸಿಸಿ ಕ್ರಿಕೆಟ್ ಆಡಲು ಬರಲ್ವಾ?
ನಟ ಕಿಚ್ಚ ಸುದೀಪ್ (Kiccha Sudeep) ನಟ ದರ್ಶನ್ (Darshan) ಕನ್ನಡ ಚಿತ್ರಂಗದ ಶ್ರೇಷ್ಠ ನಟರು, ಇವರ ಚಿತ್ರ ಕ್ಕಾಗಿ ಫ್ಯಾನ್ಸ್ ಕಾಯುತ್ತಲೇ ಇರುತ್ತಾರೆ, ಅದರ ಜೊತೆಗೆ ದರ್ಶನ್ ಸುದೀಪ್ ಓಂದಾಗಲಿ ಎಂಬುದು ಫ್ಯಾನ್ಸ್ ಗಳು ಕಾಯುತ್ತಿದ್ದಾರೆ, ಅದ್ರೆ ಕೊನೆಗೂ ಒಂದಾಗಲೇಇಲ್ಲ, ಕನ್ನಡ ಚಿತ್ರರಂಗದ ಆರಂಭದ ದಿನಗಳಿಂದಲೂ ಈ ನಟರ ನಡುವೆ ಉತ್ತಮ ಬಾಂಧವ್ಯ ಬಾಂಧವ್ಯ ಇತ್ತು. ದರ್ಶನ್ ಅವರನ್ನು ಚಿತ್ರರಂಗದಲ್ಲಿ ಬೆಳೆಸಿದ್ದು ನಾನು ಎಂದು ಸುದೀಪ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದಾದ ನಂತರ ಕಿಚ್ಚನ ಜೊತೆಗಿನ ಗೆಳೆತನವನ್ನು ದರ್ಶನ್ ಕಳೆದುಕೊಂಡಿರುವ ವಿಚಾರ ಗೊತ್ತೆ ಇದೆ.
ದರ್ಶನ್, ಯಶ್ ಕೆಸಿಸಿ ಕ್ರಿಕೆಟ್ ಆಡಲು ಬರ್ತಿಲ್ವಾ
ಸ್ಟಾರ್ ಗಳ ಕ್ರಿಕೆಟ್ ಆಟಕ್ಕಾದರೂ ದರ್ಶನ್ ಬರ್ತಾರೆ ಯಶ್ ಬರ್ತಾರೆ ಎಂದು ಅಭಿಮಾನಿ ಗಳು ಕಾಯ್ತಾ ಇದ್ದರು, ಇದೀಗ ಸುದೀಪ್ ಉತ್ತರ ನೀಡಿದ್ದಾರೆ, ಯಾಕೆ ದರ್ಶನ್ ಬರಲ್ಲ,ಯಶ್ ಬರಲ್ಲ ಉತ್ತರ ನೀಡಿದ್ದಾರೆ.
ಏನಂದ್ರು ಸುದೀಪ್
ಕೆಲವರಿಗೆ ಅವರ ಬ್ಯುಸಿ ಕೆಲಸಗಳಿಂದಲೂ ಅಥವಾ ಇನ್ನಿತರ ಒತ್ತಡಗಳಿಂದ ಬರಲಾಗುವುದಿಲ್ಲ, ಅವರು ಫ್ರೀ ಇರುವ ಸಮಯದಲ್ಲಿ ಬಂದು ಗ್ರೌಂಡ್ ನಲ್ಲಿ ಆಡಬಹುದು ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ ಎಂದಿದ್ದಾರೆ, ಬರುವುದು ಬಿಡುವುದು ಅವರಿಗೆ ಬಿಟ್ಟದ್ದು, ಪ್ರತಿಯೊಬ್ಬರಿಗೂ ಆಹ್ವಾನ ಮಾಡಿದ್ದೇವೆ ಎಂದಿದ್ದಾರೆ. ಕೆಸಿಸಿ ಸೀಸನ್ 3 (KCC Season 3)ಆರಂಭವಾಗುವ ದಿನ ಪ್ರೆಸ್ ಮೀಟ್ ನಲ್ಲಿ ಅನುಭವ ಹೇಳಿಕೊಂಡ ಸುದೀಪ್ ಸಿನಿಮಾ ರಂಗ ನಮ್ಮೆಲ್ಲರದ್ದು, ನನ್ನೊಬ್ಬನದ್ದೇ ಅಲ್ಲ. ಎಲ್ಲರಿಗೂ ಅವರದೇ ಆದ ಹಕ್ಕಿದೆ ಅದರಂತೆ ನಾವು ಕರಿಬೇಕು ಎಲ್ಲರನ್ನೂ ಕರೆದಿದ್ದೇವೆ ಬರುವುದು ಬಿಡುವುದು ಅವರಿಗೆ ಬಿಟ್ಟದ್ದು ಎಂದಿದ್ದಾರೆ.
ದಚ್ಚು-ಕಿಚ್ಚ ಒಂದಾಗಲಿ ಎನ್ನುವ ಫ್ಯಾನ್ಸ್
ಸೋಷಿಯಲ್ ಮೀಡಿಯಾದಲ್ಲಿ(Social Media) ಇಂದಿಗೂ ದರ್ಶನ್(Darshan) ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ಆಗಾಗ ಮಾತುಗಳು ಕೇಳಿ ಬರುತ್ತವೆ, ಅದರ ನಡುವೆಯೂ ಅಭಿಮಾನಿಗಳು ಈ ಸ್ಟಾರ್ ಕಲಾವಿದರಿಬ್ಬರೂ ಒಂದಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ
ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಗೆ ಟ್ಯಾಗ್ ಮಾಡಿ, ಧನ್ಯವಾದ ತಿಳಿಸಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದಚ್ಚು ವಿಚಾರವಾಗಿ ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಕಿಚ್ಚ ಸುದೀಪ್ ಪತ್ರ ಬರೆದು ಖಂಡಿಸಿದ್ದರು. ಆ ಬಗ್ಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಗೆ ಟ್ಯಾಗ್ ಮಾಡಿ, ಕಿಚ್ಚ ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದರು ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.