Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Bigg Boss Season 11: ಬಿಗ್ ಬಾಸ್ ಮನೆ ಪ್ರವೇಶಿಸಲಿರುವ ಖ್ಯಾತ ಟಿವಿ ಆ್ಯಂಕರ್ಸ್ ಇವರು!
Bigg Boss KannadaEntertainment

Bigg Boss Season 11: ಬಿಗ್ ಬಾಸ್ ಮನೆ ಪ್ರವೇಶಿಸಲಿರುವ ಖ್ಯಾತ ಟಿವಿ ಆ್ಯಂಕರ್ಸ್ ಇವರು!

Chetan Yedve
Last updated: April 15, 2025 6:14 pm
By Chetan Yedve

ಕನ್ನಡದ ಬಿಗ್ ಬಾಸ್ ಸೀಸನ್ ಬರೋಬ್ಬರಿ 10 ಸೀಸನ್ʼಗಳನ್ನು ಪೂರೈಸಿ, ದಶಮಾನದ ಯಶಸ್ಸು ಗಳಿಸಿ ಇದೀಗ, 11ನೇ ಸೀಸನ್ʼಗೆ (Bigg Boss Season 11) ಕಾಲಿಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯು ಈಗಾಗಲೇ ಎರಡು ಪ್ರೋಮೋಗಳನ್ನು ಬಿಡುಗಡೆ ಮಾಡಿ ವೀಕ್ಷಕರಲ್ಲಿ ಕುತೂಹಲ ಗೋಡೆ ಕಟ್ಟುವ ಪ್ರಯತ್ನ ಮಾಡಿದೆ. ಅಲ್ಲದೇ, ಬಿಗ್ ಬಾಸ್ ನಿರೂಪಕರ ವಿಷಯದಲ್ಲೂ ದ್ವಂದ್ವಗಳನ್ನು ಸೃಷ್ಠಿಸಿದೆ.

 

ಕಳೆದ 10 ಸೀಸನ್ ಗಳನ್ನು ನಟ ಕಿಚ್ಚ ಸುದೀಪ್ ಅವರು ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಸೀಸನ್ ನಲ್ಲಿ ಕಿಚ್ಚ ಸುದೀಪ್ ಗೆ (Kichcha Sudeep) ಕೊಕ್ ಕೊಡಲಾಗಿದೆಯಾ ಎನ್ನುವಂತಹ ಅನುಮಾನಗಳು ನೂತನ ಪ್ರೋಮೋದಿಂದ ಸೃಷ್ಠಿಯಾಗಿದೆ. ಆದಾಗ್ಯೂ, ಇದು ಕಲರ್ಸ್ ಕನ್ನಡ ವಾಹಿನಿಯ ಗಿಮಿಕ್, ಕಿಚ್ಚ ಸುದೀಪ್ (Kichcha Sudeep) ಅವರೇ ಮತ್ತೊಮ್ಮೆ ನೀರೂಪಕರಾಗಲಿದ್ದಾರೆ ಎನ್ನುವ ಮಾಹಿತಿಯೂ ತಿಳಿದುಬಂದಿದೆ.

ಕುತೂಹಲ ಹೆಚ್ಚಿಸಿದ ಪ್ರೋಮೋ ರಿಲೀಸ್

ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ, ಈ ಬಾರಿ ಯಾವೆಲ್ಲ ಅಭ್ಯರ್ಥಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಬಹುದು ಎಂಬ ಚರ್ಚೆಗಳು ಶುರುವಾಗಿವೆ. ಪ್ರತಿ ಸೀಸನ್ ಅಲ್ಲೂ ಮಾಧ್ಯಮ ಕ್ಷೇತ್ರದಿಂದಲೂ ಓರ್ವರನ್ನು ಆಯ್ಕೆ ಮಾಡುವುದರಿಂದ ಈ ಬಾರಿ ಯಾವ ಸ್ಪರ್ಧಿ ಬಿಗ್ ಬಾಸ್ಗೆ (Bigg Boss Season 11) ಆಯ್ಕೆಯಾಗಿದ್ದಾರೆ ಎನ್ನುವ ಕುತೂಹಲವೂ ಮೂಡಿದೆ. ಈ ಹಿಂದೆ ನಿರೂಪಕರಾಗಿದ್ದ ಕಿರಿಕ್ ಕೀರ್ತಿಯವರು (Kirik Keerti), ರೆಹಮಾನ್ ಅವರು (Rehaman Hassan), ಗೌರೀಶ್ ಅಕ್ಕಿಯವರು (Gourish Akki), ಸೋಮಣ್ಣ ಮಾಚಿಮಾಡ (Somanna Machimada) ಅವರು ಹಾಗೂ ಪತ್ರಕರ್ತರಾದ ರವಿ ಬೆಳೆಗೆರೆ (Ravi Belegere), ಭಾವನಾ ಬೆಳೆಗೆರೆ (Bhavana Belegere) ಹಾಗೂ ಚಕ್ರವರ್ತಿ ಚಂದ್ರಚೂಡ್ (Chakravarthy Chandrachood) ಅವರೂ ಬಿಗ್ ಬಾಸ್ ಮನೆಯ ಅನುಭವ ಪಡೆದಿದ್ದಾರೆ.

ಬಿಗ್ ಬಾಸ್ ಮನೆ ಪ್ರವೇಶಿಸಬಹುದಾದ ನ್ಯೂಸ್ ನಿರೂಪಕರು ಇವರೇ!

ಅದ್ದರಿಂದ, ಈ ಬಾರಿ ಯಾವ ಪತ್ರಕರ್ತರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದ್ದು, ಬಿಗ್ ಬಾಸ್ ಮನೆಗೆ ಹೋಗಬಹುದಾದ ಪ್ರಮುಖರ ಲಿಸ್ಟ್ ಅನ್ನು ಮಾಡಲಾಗಿದೆ. ಈ ಕೆಳಗಿನವರಲ್ಲಿ ಯಾರಾದರೊಬ್ಬರು ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆಯಿದೆ.

1) ಸುಕನ್ಯಾ ಸಂಪತ್ (Sukanya Sampath)

ಕನ್ನಡದ ಖ್ಯಾತ ವಾಹಿನಿಯಾದ ಟಿವಿ 9 ಅಲ್ಲಿ ಸುದೀರ್ಘ ವರ್ಷಗಳ ಕಾಲ ನಿರೂಪಕಿಯಾಗಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಮನೆಯಲ್ಲಿದ್ದಾರೆ. ಈ ಸಲ ಇವರು Bigg Boss ಮನೆ ಪ್ರವೇಶಿಸಬಹುದಾದ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

2) ದಿವ್ಯಾ ವಸಂತ್ (Divya Vasanth)

ಕನ್ನಡದ ಬಿಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ದಿವ್ಯಾ ವಸಂತ್ ಅವರೂ ಬಿಗ್ ಬಾಸ್ ಸೀಸನ್ 11ಕ್ಕೆ ಪ್ರವೇಶ ಮಾಡುವ ಸಾಧ್ಯತೆಯಿದೆ. ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಕೊಡುವ ಮೂಲಕ ಇವರು ಪ್ರಸಿದ್ಧರಾಗಿದ್ದರು. ಇತ್ತೀಚಿನ ದಿನಗಳವರೆಗೂ ಇವರೂ ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದ್ದರು.

3) ರಾಧಾ ಹಿರೇಗೌಡರ್ (Radha Hiregowdar)

ರಾಜ್ಯದ ಫೈರ್ ಬ್ರ್ಯಾಂಡ್ ಪತ್ರಕರ್ತೆ, ನಿರೂಪಕಿ ಎಂದೇ ಖ್ಯಾತರಾಗಿರುವ ರಾಧಾ  ಹಿರೇಗೌಡರ್ ಅವರು Bigg Boss ಮನೆ ಪ್ರವೇಶಿಸುವ ಸಂಭವವಿದೆ. ಈ ಹಿಂದೆ ಹಲವು ಭಾರಿ ಇವರಿಗೆ ಆಫರ್ ಬಂದಿದ್ದರೂ, ಆ ಮನವಿಗಳನ್ನು ತಿರಸ್ಕರಿಸಿದ್ದರು. ಪ್ರಸ್ತುತ ಗ್ಯಾರೇಂಟಿ ನ್ಯೂಸ್ ಕನ್ನಡ ವಾಹಿನಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

4) ಹರೀಶ್ ನಾಗರಾಜ್ (Harish Nagaraj)

ದಿಗ್ವಿಜಯ ನ್ಯೂಸ್ ವಾಹಿನಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಹರೀಶ್ ನಾಗರಾಜ್ ಅವರು ಈ ಸಲ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಗುಸುಗುಸು ಮಾಧ್ಯಮ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

5) ಅಜಿತ್ ಹನುಮಕ್ಕನವರ್

ಪ್ರಸ್ತುತ, ಏಷಿಯಾನೆಟ್ ಸುವರ್ಣ ವಾಹಿನಿಯ ಸಂಪಾದಕರಾಗಿರುವ ಅಜಿತ್ ಹನುಮಕ್ಕನವರ್ (Ajit Hanumakkanavar) ರಾಜ್ಯದ ಮಾಧ್ಯಮ ಕ್ಷೇತ್ರದ ಹಿರಿಯರಾಗಿದ್ದು, ತಮ್ಮ ವಸ್ತುನಿಷ್ಠ ನಿರೂಪಣೆಯಿಂದಲೇ ಇವರು ರಾಜ್ಯದಾದ್ಯಂತ ಮನೆಮಾತಾಗಿದ್ದಾರೆ. ಇವರು, ಇತ್ತೀಚೆಗೆ ನಟ ದರ್ಶನ್ ಅವರ ಕೊಲೆ ಕೇಸ್ ನಲ್ಲಿ ಆರೋಪಿತರ ಮೇಲೆ ವಸ್ತುನಿಷ್ಠ ವರದಿಯ ಕಾರಣಕ್ಕೆ ದರ್ಶನ್ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ, ಅವಮಾನಕರ ಭಾಷೆಯ ಬಳಕೆಯನ್ನು ಇವರು ಅನುಭವಿಸುತ್ತಿದ್ದು, ಪ್ರಸ್ತುತ ರಾಜ್ಯದ ಸಾಮಾಜಿಕ ಜಾಲತಾಣಗಳಲ್ಲಿ ಇವರು ಟ್ರೆಂಡಿಂಗ್ ನಲ್ಲಿರುವ ಕಾರಣಕ್ಕೆ ಇವರಿಗೂ ಕಲರ್ಸ್ ಕನ್ನಡ ವಾಹಿನಿ ಮನವಿ ಮಾಡಿಕೊಂಡಿದ್ದು, ಇವರೂ ಬಿಗ್ ಬಾಸ್ ಸೀಸನ್ 11 ಕ್ಕೆ (Bigg Boss Season 11) ಎಂಟ್ರಿ ಕೊಟ್ಟರೆ ಅಚ್ಚರಿಯಿಲ್ಲ.

Bigg Boss Kannada: ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ಕಲರ್ಸ್ ಕನ್ನಡ, ಈ ಬಾರಿ ಸುದೀಪ್ ಡೌಟು!

Jayam Ravi Divorce: 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಜಯಂ ರವಿ-ಆರತಿ.

TAGGED:Big Boss Kannada Season 11Big Boss Kannada Season 11 ContestantsBigBoss Kannada HostKiccha Sudeepa
Previous Article GST Council: ಜಿಎಸ್‌ಟಿ ಕೌನ್ಸಿಲ್‌ನಿಂದ ದೇಶದ ಜನತೆಗೆ ಶುಭಸುದ್ದಿ, ರಾತ್ರೋರಾತ್ರಿ ಈ ಉತ್ಪನ್ನಗಳ ಬೆಲೆಯಲ್ಲಿ ಧಿಡೀರ್ ಇಳಿಕೆ
Next Article ChatGPT: ನೀವು ಚಾಟ್ ಜಿಪಿಟಿ ಬಳಸುತ್ತಿದ್ದೀರಾ? ಹಾಗಿದ್ದರೆ ನೀವಿದನ್ನು ತಪ್ಪದೇ ನೋಡಲೇಬೇಕು
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use