ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗ ಳು ಬಹಳಷ್ಟು ಪ್ರಚಲಿತ ದಲ್ಲಿದ್ದು ಅದರಲ್ಲಿ ಅನ್ನಭಾಗ್ಯ ಯೋಜನೆ (Anna Bhagya Yojana) ಕೂಡ ಒಂದು. ಹೌದು ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಪಡಿತರ ಚೀಟಿ ದಾರರಿಗೆ ಅಕ್ಕಿ ಜೊತೆಗೆ ಇಂದು ಹಣವೂ ಕೂಡ ಖಾತೆಗೆ ಜಮೆಯಾಗುತ್ತಿದ್ದು ಇದೀಗ ಅನ್ನ ಭಾಗ್ಯ ಯೋಜನೆ ಕುರಿತಂತೆ ಅಪ್ಡೇಟ್ ಮಾಹಿತಿಯೊಂದು ಬಂದಿದೆ.
ಅಕ್ಕಿ ಕೊರತೆಯಿಂದಾಗಿ ರಾಜ್ಯ ಸರಕಾರ ಹಣ ಹಾಕಲು ನಿರ್ಧಾರ ಮಾಡಿದ್ದು ಆದರೆ ಅಕ್ಕಿ ಸಮಸ್ಯೆ ನಿವಾರಣೆ ಆದರೆ ಅಕ್ಕಿಯೇ ನೀಡುದಾಗಿ ಸರಕಾರ ತಿಳಿ ಸಿತ್ತು. ಆದರೆ ಆಹಾರ ಧಾನ್ಯ ಅಗತ್ಯತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಶೇ.93 ರಷ್ಟು ಫಲಾನುಭವಿಗಳು ಹೆಚ್ಚು ವರಿಯಾಗಿ 5 ಕೆಜಿ ಅಕ್ಕಿಯ ಬದಲಿಗೆ ಇತರೆ ಅಗತ್ಯ ವಸ್ತುಗಳನ್ನು ಪಡೆ ಯಲು ಆಸಕ್ತಿ ಹೊಂದಿದ್ದಾರೆ. ಹಾಗಾ ಗಿ ಹಣದ ಬದಲಿಗೆ ಬೇಳೆ, ಎಣ್ಣೆ ಹಾಗೂ ಸಕ್ಕರೆ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (K. H. Muniyappa) ತಿಳಿಸಿದ್ದಾರೆ.
ಹಣ ಜಮೆಯಾಗಿಲ್ಲ!
ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಕುಟುಂಬಕ್ಕೆ ಸರಕಾರವು ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ಖಾತೆಗೆ ಜಮೆ ಮಾಡು ತ್ತಿದೆ. ಸರಕಾರವು ಪ್ರತಿ ಕೆಜಿ ಅಕ್ಕಿಗೆ ತಲಾ 34ರೂ.ನಂತೆ ಒಟ್ಟು 5 ಕೆಜಿ ಅಕ್ಕಿಗೆ 170ರೂ ಹಣ ಜಮೆ ಮಾಡುತ್ತಿದ್ದು ಆದರೆ ಕೆಲವು ತಿಂಗಳಿನಿಂದ ಈ ಹಣ ಬಂದಿಲ್ಲ. ಇದೀಗ ಈ ಬಗ್ಗೆ ಆಹಾರ ಸಚಿವರು ಸ್ಪಷ್ಟನೆ ಕೂಡ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವರು ಅನ್ನಭಾಗ್ಯ ಹಣ (Anna Bhagya Money) ವನ್ನು ಪ್ರತಿ ತಿಂಗಳು 10ರಂದು ಬಿಡುಗಡೆ ಮಾಡ್ತಾ ಇದ್ದು ಸರ್ವರ್ ಸಮಸ್ಯೆಯಿಂದ ಹಣ ಬಂದಿಲ್ಲ. ಆದರೆ ಇದನ್ನು ಸರಿ ಪಡಿಸಿ ಶೀಘ್ರದಲ್ಲೇ ಹಣ ಖಾತೆಗೆ ಜಮೆ ಮಾಡು ತ್ತೇವೆ ಎನ್ನುವ ಸ್ಪಷ್ಟನೆ ಯನ್ನು ನೀಡಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಈಗಾಗಲೇ ನಕಲಿ ಬಿಪಿಎಲ್ ಕಾರ್ಡ್ ಮಾಡಿಸಿರುವ ಸಂಖ್ಯೆಯು ಹೆಚ್ಚಾಗಿದ್ದು ನಕಲಿ ದಾಖಲೆ ಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದ ಅನರ್ಹರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆ!
ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ (BPL Card) ಮಾಡಿಸಿಕೊಂಡರೆ ಅವರನ್ನು ಎಪಿಎಲ್ ಕಾರ್ಡ್ (APL Card) ಗೆ ವರ್ಗಾವಣೆ ಮಾಡುವುದಾಗಿ ಆಹಾರ ಸಚಿವ ವಿ.ಮುನಿಯಪ್ಪ (K. H. Muniyappa) ತಿಳಿಸಿದ್ದಾರೆ. ಅಂತಹ ಕುಟುಂಬಗಳ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗಿದ್ದು ಶೀಘ್ರದಲ್ಲಿಯೇ ಅಂತಹವರ ಹೆಸರ ನ್ನು ಬಿಪಿಎಲ್ ಪಡಿತರ ಚೀಟಿ ಯಿಂದ ತೆಗೆದು ಹಾಕ ಲಾಗುತ್ತದೆ. ಹಾಗಾಗಿ ಇಂತವರಿಗೂ ಇನ್ಮುಂದೆ ಈ ಅನ್ನಭಾಗ್ಯ ಹಣ ಬರಲ್ಲ.