ಇಂದು ರೇಷನ್ ಕಾರ್ಡ್ (Ration Card) ಎಂಬುದು ಅತೀ ಅಗತ್ಯವಾಗಿದ್ದು ಬಡವರ್ಗದ ಜನತೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ (BPL Card) ಆಹಾರ ಧಾನ್ಯ ವನ್ನು ಉಚಿತವಾಗಿ ನೀಡ ಲಾಗು ತ್ತದೆ. ಹಾಗೆಯೇ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಸೌಲಭ್ಯ ಪಡೆಯಲು ಕೂಡ ಇದರ ಅನುಷ್ಠಾನಕ್ಕೆ ಬಿಪಿಎಲ್ ಕಾರ್ಡ್ ಬಹುಮುಖ್ಯವಾಗಿದೆ. ಸರಕಾರದ ಹಲವು ರೀತಿಯ ಸೌಲಭ್ಯ ಪಡೆ ಯಲು ಇಂದು ರೇಷನ್ ಕಾರ್ಡ್ ಅತೀ ಅಗತ್ಯವಾಗಿ ಬೇಕಾಗಿದೆ.
ಈ ಸೂಚನೆ ನೀಡಿದೆ!
ಇದೀಗ ಬಿಪಿಎಲ್ ಕಾರ್ಡು (BPL Ration Card) ದಾರರಿಗೆ ಆಹಾರ ಇಲಾಖೆಯು ಇದೀಗ ಈ ಸೂಚನೆಯನ್ನು ನೀಡಿದ್ದು ಆಹಾರ ಧಾನ್ಯ ವಿತರಿಸುವ ಕಾರ್ಯ ಪ್ರಕ್ರಿಯೆ ಈ ತಿಂಗಳು ವಿಳಂಬವಾಗಲಿದೆ ಎನ್ನಲಾಗ್ತ ಇದೆ. ಹೌದು ಪಡಿತರ ವಿತರಣೆ ಕಾರ್ಯವನ್ನು ಈ ಹಿಂದೆ ಎನ್ಐಸಿ ತಂತ್ರಾಂಶ ಮೂಲಕ ನೀಡಲಾಗುತ್ತಿತ್ತು. ಆದರೆ ರಾಜ್ಯಾ ದ್ಯಂತ ಅಕ್ಟೋಬರ್ ಮಾಹೆಯಿಂದ ಎನ್ಐಸಿ ತಂತ್ರಾಂಶದಿಂದ ಬೇರ್ಪ ಡಿಸಿ ಕರ್ನಾಟಕ ಸ್ಟೇಟ್ ಡೆಟಾ ಸೆಂಟರ್ ನಿಂದ ಪಡಿತರ ವಿತರಣೆ ಕಾರ್ಯವನ್ನು ನಿರ್ವಹಿಸು ತ್ತಿರುವು ದರಿಂದ ಸರ್ವರ್ ನಿಧಾನ ವಾಗಲಿದೆ.
ಸೂಕ್ತ ಸಮಯದಲ್ಲಿ ವಿತರಣೆ!
ಫಲಾನುಭವಿಗಳು ಆಂತಕಪಡುವ ಅಗತ್ಯವಿಲ್ಲ. ಎಲ್ಲ ಕಾರ್ಡು ದಾರರಿ ಗೂ ಆಹಾರ ಧಾನ್ಯಗಳ ವಿತರಣೆ ಯಾಗಲಿದೆ. ಅಕ್ಟೋಬರ್-2024ನೇ ಮಾಹೆಯ ಪಡಿತರ ವಿತರಣೆಯನ್ನು ನಿಗದಿತ ಅವಧಿಯೊಳಗಾಗಿ ಕಾರ್ಡು ದಾರರಿಗೆ ವಿತರಿಸಲಾಗುವುದು ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರು ಹೇಳಿದ್ದಾರೆ.
ಈ ಆಹಾರ ಧಾನ್ಯಗಳ ವಿತರಣೆ!
ಇನ್ನು ಈ ಅಕ್ಟೋಬರ್ ತಿಂಗಳಲ್ಲಿ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ ಅಕ್ಕಿ 21 ಕೆಜಿ, ಜೋಳ 14 ಕೆಜಿ ಉಚಿತ ನೀಡಲಾಗುತ್ತದೆ. ಬಿಪಿಎಲ್ ಪಡಿತರ ಚೀಟಿದಾರರ (BPL Ration Card) ಕುಟುಂಬ ಪ್ರತಿ ಸದಸ್ಯರಿಗೆ ತಲಾ 3ಕೆ.ಜಿ. ಅಕ್ಕಿ, ಎರಡು ಕೆ.ಜಿ. ಜೋಳ ಉಚಿತವಾಗಿ ನೀಡಲಾಗುತ್ತಿದೆ..ಇನ್ನು ಈ ಸೌಲಭ್ಯ ಪಡೆಯಲು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಗೆ ತೆರಳಿ ಇ-ಕೆವೈಸಿ ಮಾಡಿಸಿ ಕೊಳ್ಳುವುದು ಕಡ್ಡಾಯ ಮಾಡ ಲಾಗಿದ್ದು ಕೆವೈಸಿ ಮಾಡದೇ ಇದ್ದವರು ಈಗಲೇ ಮಾಡಿ.
ಇನ್ನು ಸರ್ವರ್ ಸಮಸ್ಯೆ ನಿವಾರಿಸಲು ಈಗಾಗಲೇ ಈ ಬಗ್ಗೆ ಈಗಾಗಲೇ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದ್ದು, ಪಡಿತರ ಚೀಟಿದಾರರು ಆಂತಕಪಡುವ ಅಗತ್ಯ ಇಲ್ಲ. ಇದೇ ಅಕ್ಟೋಬರ್ ತಿಂಗಳ ಪಡಿತರ ವಿತರಣೆಯನ್ನು ನಿಗದಿತ ಅವಧಿಯೊಳಗಾಗಿ ಕಾರ್ಡುದಾರರಿಗೆ ಆಹಾರ ಧಾನ್ಯ ವಿತರಿಸುವ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.