ಆಗಸ್ಟ್ (August) ತಿಂಗಳು ಇನ್ನೇನು ಕೊನೆ ಗೊಳ್ಳಲಿದ್ದು, ಸೆಪ್ಟೆಂಬರ್ ತಿಂಗಳು ಆರಂಭವಾಗಲಿದೆ. ಈಗಾಗಲೇ ಆಗಸ್ಟ್ ತಿಂಗಳ ಆರಂಭ ದಲ್ಲಿ ಹಲವು ಹೊಸ ರೂಲ್ಸ್ ಗಳು ಬಂದಿತ್ತು, ಇನ್ನು ಬರುವ ಹೊಸ ತಿಂಗಳ ಆರಂಭದಲ್ಲೇ ಹಲವಾರು ಬದಲಾವಣೆ ಆಗಲಿದೆ, ಕೆಲವು ವಸ್ತುಗಳ ದರ, ನಿಯಮ ಬದಲಾವಣೆ ಆಗಲಿದೆ.
ಏನೆಲ್ಲಾ ಬದಲಾವಣೆ:
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗುತ್ತದೆ, ಈ ಯೋಜನೆಯಲ್ಲಿ ಹಣವನ್ನು ಸಂಗ್ರಹಿಸುವವರು ತಮ್ಮ ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್ (PAN Card) ವಿವರಗಳನ್ನು ನೀಡುವುದು ಕಡ್ಡಾಯ ವಾಗಿದೆ, ಅದರಲ್ಲು ಆಧಾರ್ ಪ್ಯಾನ್ ಅಪ್ಡೇಟ್ ಮಾಡಿದ ಮಾಹಿತಿಗಳನ್ನೆ ನೀಡುವುದು.
ಇನ್ನು ಪಡಿತರ ಚೀಟಿ (Ration Card) ಇದ್ದವರು ಆಧಾರ್ ಕಾರ್ಡ್ (Aadhaar Card) ನೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು.ಒಂದು ವೇಳೆ ಲಿಂಕ್ ಮಾಡದೇ ಇದ್ದರೆ ಅವರಿಗೆ ಗ್ಯಾರಂಟಿ ಹಣ ದೊರೆಯುದಿಲ್ಲ, ಇದೀಗ ಕೇಂದ್ರ ಸರ್ಕಾರವು (Central Govt) ಲಿಂಕ್ ಮಾಡುವ ಸಮಯವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಿದ್ದು, ಪಡಿತರ ಚೀಟಿ (Ration Card) ಇದ್ದವರು ಆಧಾರ್ ಕಾರ್ಡ್ (Aadhaar Card) ನೊಂದಿಗೆ ಲಿಂಕ್ ಮಾಡದೇ ಇರುವವರು ಸೆಪ್ಟೆಂಬರ್ ಒಳಗೆ ಲಿಂಕ್ ಮಾಡಿಸಿ.
ಆದಾಯ ತೆರಿಗೆ ಪಾವತಿ ಮಾಡುವವರು ಕಂತು ಪಾವತಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ ಅಗಿದೆ, ಎರಡನೇ ಕಂತನ್ನು ಸೆಪ್ಟೆಂಬರ್ ೧೫ ರೊಳಗೆ ಪಾವತಿ ಮಾಡಿ, ಸರ್ಕಾರವು ಬಡತನ ರೇಖೆಯಲ್ಲಿ ಕೆಳಗಿರುವ ಜನರಿಗೆ ಪಡಿತರ ನೀಡಲಿದೆ, ಇದೀಗ ಕೆಲವೊಂದು ಅನ್ವಯ ಮಾನದಂಡಗಳನ್ನು ಬದಲಾಯಿಸಲು ಹೊರಟಿದೆ. ಈ ಮೂಲಕ, ಈಗ ಅನೇಕ ಪಡಿತರ ಚೀಟಿದಾರರನ್ನು ಬಡತನ ರೇಖೆಯ ಪಟ್ಟಿಯಿಂದ ಹೊರಗಿಡಲಾಗುವುದು ಎನ್ನಲಾಗಿದೆ. ಶೀಘ್ರದಲ್ಲೇ ಹೊಸ ಅರ್ಹತಾ ಮಾನದಂಡಗಳನ್ನು ಹೊರಡಿಸುವ ಮೂಲಕ, ನಕಲಿ ಪಡಿತರ ಪತ್ತೆ ಹಚ್ಚಬಹುದು
ಅದೇ ರೀತಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Cylinder) ಬೆಲೆಯು ಬದಲಾವಣೆ ಅಗುತ್ತ ಇರುತ್ತದೆ, ಸೆಪ್ಟೆಂಬರ್ ತಿಂಗಳಲಿನಲ್ಲಿಯು ಗ್ಯಾಸ್ ಬೆಲೆ ಬದಲಾಗಲಿದೆ ಎನ್ನಲಾಗಿದೆ, ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆ ಬದಲಾವಣೆ ಮಾಡಿ, ಸೆಪ್ಟೆಂಬರ್ 1 ರಂದು ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.