Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Ganesh Temple: ಭಾರತದಲ್ಲಿರುವ ಗಣೇಶನ 10 ಪ್ರಸಿದ್ಧ ದೇವಸ್ಥಾನಗಳಿವು!
InformationNews

Ganesh Temple: ಭಾರತದಲ್ಲಿರುವ ಗಣೇಶನ 10 ಪ್ರಸಿದ್ಧ ದೇವಸ್ಥಾನಗಳಿವು!

Chetan Yedve
Last updated: April 15, 2025 6:29 pm
By Chetan Yedve

ದೇಶದಾದ್ಯಂತ ಗಣೇಶ ಚತುರ್ಥಿ(Ganesh Chaturthi) ಯನ್ನು ವಿಜೃಂಭಣೆಯಿಂದ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಗಣೇಶ ದೇವಾಲಯ (Ganesh Temple) ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿಯಂದು ಗಣಪತಿಯನ್ನು ಕೂರಿಸಿ ಪೂಜಿಸುವ ಆಚರಣೆ ಬಹು ವಿಸ್ತಾರವಾಗಿದೆ.

 

 

ಗೌರಿಮಾತೆ ಹಾಗೂ ಪರಶಿವನ ಪುತ್ರ ಗಣೇಶನು ವಿಘ್ನನಿವಾರಕನಾಗಿ, ಬುದ್ಧಿವಂತಿಕೆಯ ಅಧಿಪತಿಯಾಗಿ ಹಾಗೂ ಪ್ರಥಮವಂದ್ಯನಾಗಿ ಜನಮಾನಸದಲ್ಲಿ ಬೇರೂರಿದ್ದಾನೆ. ಗಜಾನನನ ಹುಟ್ಟಿನಿಂದ ಹಿಡಿದು  ಗಣಪತಿಗೆ ಆನೆ ತಲೆ, ಹೊಟ್ಟೆಗೆ ಹಾವಿನ ಗಂಟು ಸೇರಿದಂತೆ ನೂರಾರು ಪವಾಡಗಳ ಮಾತುಗಳಿವೆ. ಇಂತಹ ಭೂಪತಿಯು ದೇಶಾದ್ಯಂತ ಲಕ್ಷಾಂತರ ದೇವಾಲಯಗಳಲ್ಲಿ ನೆಲೆಸಿ ಆರಾಧನೆಗೆ ಒಳಗಾಗುತ್ತಿದ್ದಾನೆ. ಈ ದೇವಾಲಯಗಳಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದ ಹಲವು ವಿಶೇಷತೆಗಳನ್ನೊಳಗೊಂಡ ದೇಶದ ಅತಿ ಪ್ರಮುಖ 10 ಗಣೇಶನ ದೇವಾಲಯಗಳ (Ganesh Temple) ಪಟ್ಟಿಯನ್ನು ನೋಡೋಣ ಬನ್ನಿ.

1. ಶ್ರೀ ಲಕ್ಷ್ಮಿ ಗಣಪತಿ ದೇವಸ್ಥಾನ (Shri Lakshmi Ganesh Temple) ಬಿಕ್ಕವೋಲು.

 

ಆಂಧ್ರಪ್ರದೇಶದ ಪೂರ್ವ ಗೋದಾವರಿಯ ಬಿಕ್ಕವೋಲು ಗ್ರಾಮದಲ್ಲಿ ಉದ್ಭವ ವಿನಾಯಕ ದೇವಸ್ಥಾನವಿದೆ. ಈ ದೇವಸ್ಥಾನವನ್ನು 9-10ನೇ ಶತಮಾನದಲ್ಲಿ ಚಾಳುಕ್ಯರು ನಿರ್ಮಾಣ ಮಾಡಿದ್ದಾರೆ. ಈ ದೇವಸ್ಥಾನದಲ್ಲಿ ಗಣೇಶನ ಕಲ್ಲಿನ ವಿಗ್ರಹ 7 ಅಡಿ ಇದ್ದು, ಪ್ರತಿ ವರ್ಷವೂ ಕ್ರಮೇಣವಾಗಿ ಗಾತ್ರದಲ್ಲಿ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.

2. ಸಿದ್ಧಿವಿನಾಯಕ ಮಂದಿರ, ಮುಂಬೈ.

 

 

ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನವು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ದೇವಸ್ಥಾನದಲ್ಲಿನ ಗಣೇಶನ ವಿಗ್ರಹವು ಹೆಚ್ಚಿನ ವೈಶಿಷ್ಟ್ಯ ಹೊಂದಿದ್ದು, ಮೂರ್ತಿಯನ್ನು ಏಕಶಿಲಾ ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ಮೂರ್ತಿಯ ಕಾಂಡವನ್ನು ಬಲಕ್ಕೆ ಬಾಗಿಸಿ, ಅಪರೂಪದ ಮತ್ತು ಶಕ್ತಿಯುತ ರೂಪವನ್ನು ನೀಡಲಾಗಿದೆ. ದೇವಸ್ಥಾನದ ಒಳಗಡೆ ಮಂದಿರದ ಚಿನ್ನದ ಛಾವಣಿಯು ಸ್ವರ್ಣ ಲೇಪಿತವಾಗಿದ್ದು, ಸಮೃದ್ಧಿಯ ಪ್ರತೀಕವಾಗಿದೆ.

3. ದಗ್ದುಶೇತ್ ಹಲ್ವಾಯಿ ಗಣೇಶ ದೇವಸ್ಥಾನ (Dagdusheth Halwayi Ganesh Temple), ಪುಣೆ.

 

 

ದಗ್ದುಶೇತ್ ಹಲ್ವಾಯಿ ಗಣೇಶ ದೇವಸ್ಥಾನ (Ganesh Temple)ವು ದೇಶದಲ್ಲಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಸ್ಥಾನಕ್ಕೆ 100 ವರ್ಷಗಳಷ್ಟು ಇತಿಹಾಸವಿದ್ದು, ಸಿಹಿ ತಯಾರಕ ವ್ಯಾಪಾರಿಗಳು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇಂದು ಪ್ರತಿವರ್ಷ 1 ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳು ಈ ಗಣೇಶನ ದರ್ಶನ ಪಡೆಯುತ್ತಾರೆ. ಗಣೇಶ ಚೌತಿಯ ಸಂದರ್ಭದಲ್ಲಿ ವಿನಾಯಕ ವಿಗ್ರಹಕ್ಕೆ ಸರಿಸುಮಾರು 40 ಕೆಜಿ ಚಿನ್ನದಿಂದ ಅಲಂಕರಿಸಲಾಗುತ್ತದೆ. ಈ ದೇವಸ್ಥಾನದ ಟ್ರಸ್ಟ್ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ವೃದ್ಧಾಶ್ರಮ ಹಾಗೂ ಅನಾಥ ಮಕ್ಕಳ ಆಶ್ರಮಗಳನ್ನು ನಡೆಸುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ಉಚಿತ ಶಿಕ್ಷಣ ನೀಡುವ ಅಪರೂಪದ ಕೆಲಸ ಮಾಡುತ್ತಿದೆ. ಈ ದೇವಸ್ಥಾನದ ಆವರಣದಲ್ಲಿ ಹಲವು ವರ್ಷಗಳ ಹಿಂದೆ ಬಾಂಬ್ ಹಾಕಲಾಗಿತ್ತು, ಅದೃಷ್ಟವಶಾತ್ ಈ ಬಾಂಬ್ ಸ್ಪೋಟಗೊಂಡಿರುವುದಿಲ್ಲ.

4. ತ್ರಿನೇತ್ರ ಗಣೇಶ ಮಂದಿರ (Trinetra Ganesh Temple), ರಣಥಂಬೋರ್.

 

 

ರಾಜಸ್ಥಾನದ ರಣಥಂಬೋರ್ ನಲ್ಲಿರುವ ತ್ರಿನೇತ್ರ ದೇವಸ್ಥಾನವು ಅಪಾರ ಭಕ್ತರನ್ನು ಹೊಂದಿದೆ. ಇಲ್ಲಿ ಗಣೇಶನು ಕುಟುಂಬದೊಂದಿಗೆ ಇರುವುದು ವಿಶೇಷವಾಗಿದೆ. ಈ ದೇವಸ್ಥಾನವು ಕೋಟೆಯ ಒಳಗಡೆ ಇದ್ದು, ಭಕ್ತರು ದೇವರ ಆಶೀರ್ವಾದಕ್ಕೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಇಲ್ಲಿಗೆ ಕಳುಹಿಸುವುದಕ್ಕೆ ಈ ದೇವಸ್ಥಾನ ಹೆಸರುವಾಸಿಯಾಗಿದೆ.

5. ಗಣಪತಿಪುಲೆ ಮಂದಿರ, ರತ್ನಗಿರಿ.

 

 

ತಮಿಳುನಾಡಿನ ರತ್ನಗಿರಿ ಜಿಲ್ಲೆಯಲ್ಲಿರುವ ಗಣಪತಿಪುಲೆ ದೇವಸ್ಥಾನವು ಆ ರಾಜ್ಯದಲ್ಲಿಯೇ ಹೆಚ್ಚು ಪ್ರಸಿದ್ಧ ಪಡೆದ ದೇವಾಲಯ. ಈ ದೇವಾಲಯದಲ್ಲಿ ಭಗವಾನ್ ಶ್ರೀ ಗಣೇಶನು ಏಕಶಿಲೆಯಲ್ಲಿ ಸ್ವಯಂ ಉದ್ಭವಿಸಿದ್ದಾನೆ ಎಂದು ನಂಬಲಾಗುತ್ತದೆ. ವಿಗ್ರಹವು ಸಮುದ್ರದೆಡೆಗೆ ಮುಖಮಾಡಿದ್ದು, ಸಮುದ್ರ ತೀರದ ಪ್ರಶಾಂತ ಸೌಂದರ್ಯದೊಂದಿಗೆ ಆಧ್ಯಾತ್ಮಿಕತೆಯನ್ನು ಬೆಸೆಯುತ್ತದೆ.

6. ರಾಕ್‌ಫೋರ್ಟ್ ಉಚ್ಚಿ ಪಿಳ್ಳ್ಯಾರ್ ಮಂದಿರ, ತಿರುಚಿರಾಪಳ್ಳಿ.

 

 

ತಿರುಚರಾಪಳ್ಳಿಯಲ್ಲಿರುವ ಗಣೇಶ ದೇವಸ್ಥಾನ (Ganesh Temple)ವು ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ದಂತ ಕಥೆಯನ್ನು ಹೊಂದಿದೆ. ಈ ದಂತಕಥೆಯ ಪ್ರಕಾರ, ಭಗವಾನ್ ಗಣೇಶನು ವಿಭೀಷಣನನ್ನು ಮೋಸಗೊಳಿಸಿದ ಸ್ಥಳವಾಗಿದೆ. ಬೃಹತ್ ಕಲ್ಲಿನ ಬೆಟ್ಟದ ಮೇಲಿರುವ ಮಂದಿರವು 7 ನೇ ಶತಮಾನದಷ್ಟು ಹಿಂದಿನದಾಗಿದೆ.

7. ಕಾಣಿಪಾಕಂ ವಿನಾಯಕ ಮಂದಿರ, ಆಂಧ್ರಪ್ರದೇಶ.

 

ಆಂಧ್ರಪ್ರದೇಶದ ಕಾಣಿಪಾಕಂ ವಿನಾಯಕ ದೇವಸ್ಥಾನವು ಅತ್ಯಂತ ಪ್ರಸಿದ್ಧಿ ಹೊಂದಿದ್ದ ದೇವಸ್ಥಾನವಾಗಿದ್ದು, ಪರಿಶುದ್ಧತೆಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನದಲ್ಲಿರುವ ಗಣೇಶನ ಮೂರ್ತಿಯು ಗಾತ್ರದಲ್ಲಿ ಬೆಳೆಯುತ್ತದೆ ಎಂದು ನಂಬಲಾಗಿದೆ. ವಿಗ್ರಹದ ಸುತ್ತಲೂ ವರ್ಷಪೂರ್ತಿ ಶುದ್ಧ ನೀರು ಹರಿಯುತ್ತದೆ.

8. ಮೋರ್ಗಾಂವ್ ಮಯೂರೇಶ್ವರ ಗಣಪತಿ ಮಂದಿರ, ಮಹಾರಾಷ್ಟ್ರ.

 

 

ಈ ದೇವಸ್ಥಾನವನ್ನು ನವಿಲು ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ಇದು ಪ್ರಮುಖ ಅಷ್ಟವಿನಾಯಕ ಮಂದಿರವಾಗಿದೆ. ದಂತಕಥೆಯ ಪ್ರಕಾರ ಗಣೇಶನು ಮಯೂರೇಶ್ವರನಾಗಿ ರಾಕ್ಷಸ ಸಿಂಧುವನ್ನು ವಧಿಸಿದ ಸ್ಥಳವೆಂದು ಹೇಳಲಾಗುತ್ತದೆ.

9. ಕರ್ಪಕ ವಿನಾಯಕ ಮಂದಿರ, ಪಿಳ್ಳ್ಯಾರಪಟ್ಟಿ, ತಮಿಳುನಾಡು.

 

 

ಅಪರೂಪದ ಎರಡು ತೋಳುಗಳ ಗಣೇಶ ಮೂರ್ತಿಯನ್ನು ಗುಹೆಯೊಳಗೆ ಕೆತ್ತಲಾಗಿದೆ. ಈ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸಿ ಗಜಾನನನ ಆಶೀರ್ವಾದ ಪಡೆಯುತ್ತಾರೆ.

10. ಇಡಗುಂಜಿ ಮಹಾಗಣಪತಿ ದೇವಸ್ಥಾನ, ಕರ್ನಾಟಕ.

 

ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯಲ್ಲಿರುವ ಗಣಪತಿ ದೇವಾಲಯವು ರಾಜ್ಯದಲ್ಲಿಯೇ ಅತಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಅಲ್ಲದೇ, ವಿವಿಧ ಚಿತ್ರರಂಗಗಳ ಖ್ಯಾತ ನಟರು , ಪ್ರಮುಖ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳೂ ಇಲ್ಲಿನ ಗಣೇಶನ ಆಶೀರ್ವಾದಕ್ಕಾಗಿ ಆಗಮಿಸುತ್ತಾರೆ. ಈ ದೇವಸ್ಥಾನವು 1500 ವರ್ಷಗಳಷ್ಟು ಪುರಾತನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಕಪ್ಪುಶಿಲೆಯಲ್ಲಿದ್ದು, ನಿಂತ ಭಂಗಿಯಲ್ಲಿದೆ.

ಭಾರತದ ಈ ಪ್ರಸಿದ್ಧ ದೇವಾಲಯಗಳಷ್ಟೇ (Ganesh Temple) ಅಲ್ಲದೇ, ಇನ್ನೂ ಹತ್ತಾರು ದೇವಾಲಯಗಳಿವೆ. ಕರ್ನಾಟಕದಲ್ಲಿಯೇ 7ಕ್ಕೂ ಹೆಚ್ಚಿನ ಪ್ರಸಿದ್ಧ ದೇವಾಲಯಗಳಿವೆ. ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ ವಿನಾಯಕನನ್ನು ಸ್ಮರಿಸೋಣ, ನಮಿಸೋಣ.

Sim Cards: ನಿಮ್ಮ ಹೆಸರಿನಲ್ಲಿ ನೋಂದಣಿಯಾದ ಯಾದ ಫೇಕ್ ಸಿಮ್ಗಳನ್ನು ಈಗೆಲ್ ಡಿಯಾಕ್ಟಿವೇಟ್ ಮಾಡಿ, ಇಲ್ಲಿದೆ ಸಿಂಪಲ್ ವಿಧಾನ.

Affordable Recharge: ಬಜೆಟ್ ಗ್ರಾಹಕರಿಗೆ ಟ್ರಾಯ್ ಸಿಹಿ: ಕೇವಲ ₹10ರಲ್ಲಿ ವರ್ಷಪೂರ್ತಿ ಸಿಮ್ ಆಕ್ಟಿವ್!

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ

Tirupati Laddu: ಸಮಸ್ತ ಹಿಂದೂ ಭಕ್ತರಿಗೆ ಬಿಗ್ ಶಾಕ್, ತಿರುಪತಿ ಲಡ್ಡುವಿನಲ್ಲಿ ಈ ಅಂಶ ಇರೋದು ವರದಿಯಲ್ಲಿ ದೃಢ!

SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?

TAGGED:Famous Ganesh TemplesLord Ganesha
Previous Article Menstrual Leave: ರಾಜ್ಯದ ಮಹಿಳೆಯರಿಗೆ ಸಂತಸದ ಸುದ್ದಿ, ಇನ್ನು ಮುಂದೆ 6 ದಿನ ಮುಟ್ಟಿನ ರಜೆ!
Next Article Atishi Marlena: ದೆಹಲಿ CM ಆಗಿ ಪ್ರಮಾಣವಚನ ಸ್ವೀಕರಿಸಿದ ಅತಿಶಿ, ಈಕೆಯ ಸಾಧನೆಗಳೇನು ಗೊತ್ತೇ?
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
RBI ದರ ಇಳಿಕೆ: ಗೃಹ ಸಾಲದ EMI ಕಡಿಮೆಯಾದ ಪ್ರಮುಖ ಬ್ಯಾಂಕ್‌ಗಳ ಪಟ್ಟಿ!
Finance
Income Tax: ಆದಾಯ ತೆರಿಗೆ ನೋಟಿಸ್ ಇಲ್ಲದೆ ದಿನಕ್ಕೆ ಎಷ್ಟು ನಗದು ಹಣ ಪಡೆಯಬಹುದು?
Finance Information
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use