ಮೊಹಮ್ಮದ್ ಸಿರಾಜ್ (Mohammed Siraj) ಎಂತಹ ಬಡ ಕುಟುಂಬದಿಂದ ತಮ್ಮ ಜೀವನವನ್ನು ಆರಂಭಿಸಿ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಸ್ಟಾರ್ ಕ್ರಿಕೆಟಿಗನಾಗಿ ಈಗ ತೆಲಂಗಾಣ ರಾಜ್ಯ ಸರ್ಕಾರದಲ್ಲಿ DSP ಹುದ್ದೆಯನ್ನು ಕೂಡ ಪಡೆದುಕೊಳ್ಳುವ ಮೂಲಕ, ಒಬ್ಬ ಬಡ ಮಾಧ್ಯಮ ವರ್ಗದ ಹುಡುಗ ತನ್ನ ಕನಸುಗಾಗಿ ಕಷ್ಟಪಟ್ಟರೆ ಯಾವ ಹಂತವನ್ನು ಬೇಕಾದರೂ ಕೂಡ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಮ್ಮೆಯ ವಿಚಾರ ಅಂದ್ರೆ ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಇವರು ತಮ್ಮ ಕ್ರಿಕೆಟ್ ಜರ್ನಿಯನ್ನು ಗಮನಾರ್ಹವಾಗಿ ಇಂಪ್ರೂವ್ ಮಾಡಿಕೊಂಡ್ರು ಅನ್ನೋದೇ ಖುಷಿಯ ವಿಚಾರ.
30 ವರ್ಷದ ಸಿರಾಜ್ (Mohammed Siraj) ರವರಿಗೆ ನ್ಯೂಜಿಲ್ಯಾಂಡ್ ಟೂರ್ ಪ್ರಾರಂಭ ಆಗುವುದಕ್ಕಿಂತ ಮುಂಚೆ ತೆಲಂಗಾಣ ಸರ್ಕಾರ ಡಿಎಸ್ಪಿ ಹುದ್ದೆಯನ್ನು ನೀಡಿ ಗೌರವಿಸಿದೆ. ತಂದೆ ಆಟೋ ಚಾಲಕರಾಗಿದ್ದರೂ ಕೂಡ ಸಿರಾಜ್ ಅಂತಹ ಪರಿಸ್ಥಿತಿಯಲ್ಲೂ ತಾವು ಅಂದುಕೊಂಡಿದ್ದ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಇದು ಇಂದಿನ ಯುವ ಜನತೆಗೆ ಒಂದು ಸ್ಫೂರ್ತಿಯ ಕಥೆ ಅಂದ್ರು ಕೂಡ ತಪ್ಪಾಗಲ್ಲ. ಇನ್ನು DSP ಹುದ್ದೆಯಲ್ಲಿ ಸಿರಾಜ್ ರವರು ಪಡೆದುಕೊಳ್ಳುವಂತಹ ಸಂಬಳ ಎಷ್ಟು ಗೊತ್ತಾ?
ತೆಲಂಗಾಣ ಪೊಲೀಸ್ರವರ ಸ್ಯಾಲರಿ 58,850 ರೂಪಾಯಿಗಳಿಂದ ಪ್ರಾರಂಭಿಸಿ 1,37,050 ರೂಪಾಯಿಗಳವರೆಗು ಕೂಡ ಇದೆ. ಸಂಬಳದ ಜೊತೆಗೆ ಸಿರಾಜ್ (Mohammed Siraj) ರವರಿಗೆ ಮನೆಯ ಬಾಡಿಗೆ ನಿರ್ವಹಣೆ ಖರ್ಚು, ಟ್ರಾವೆಲ್ ಖರ್ಚು ಹಾಗೂ ಮೆಡಿಕಲ್ ಖರ್ಚುಗಳನ್ನು ಕೂಡ ಸರ್ಕಾರದ ಕಡೆಯಿಂದಲೇ ನೀಡಲಾಗುತ್ತದೆ. ಮನೆ ಕಟ್ಟಿಸುವುದಕ್ಕಾಗಿ ತೆಲಂಗಾಣ ಕ್ಯಾಬಿನೆಟ್ನಿಂದ ಸಿರಾಜ್ ರವರಿಗೆ 600 ಸ್ಕ್ವೇರ್ ಫೀಟ್ಗಳ ಜಾಗವನ್ನು ಕೂಡ ನೀಡಲಾಗಿದೆ. ಇನ್ನು ಸಿರಾಜ್ ಎಲ್ಲಾ ಸಮಯದಲ್ಲಿ ಡ್ಯೂಟಿ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ ಇದು ಗೌರವಯುತವಾಗಿ ನೀಡಿರುವ ಹುದ್ದೆ ಹೀಗಾಗಿ ಸಿರಾಜ್ ಕ್ರಿಕೆಟ್ ನಲ್ಲೂ ಕೂಡ ಮುಂದುವರಿಯಲಿದ್ದಾರೆ.
ಕ್ರಿಕೆಟಿಗನಾಗಿ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಖಾಯಂ ಸದಸ್ಯರಲ್ಲಿ ಒಬ್ಬರಾಗಿರುವಂತಹ ಸಿರಾಜ್ 2017ರಲ್ಲಿ ಟಿ ಟ್ವೆಂಟಿ ಇಂಟರ್ನ್ಯಾಷನಲ್, 2019 ರಲ್ಲಿ ಏಕದಿನ ಹಾಗೂ 2020ರಲ್ಲಿ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. 29 ಟೆಸ್ಟ್ ಪಂದ್ಯಗಳಲ್ಲಿ 78 ವಿಕೆಟ್ಗಳನ್ನು ಕಬಳಿಸಿದ್ದಾರೆ. 44 ಏಕದಿನ ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ 71 ವಿಕೆಟ್ ಕಿತ್ತಿದ್ದಾರೆ. 16 ಟಿ 20 ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಸಿರಾಜ್ ಪಡೆದುಕೊಂಡಿದ್ದಾರೆ. ವಿಶೇಷವಾಗಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಗಮನಾರ್ಹ ಪ್ರದರ್ಶನವನ್ನು ನೀಡಿರುವಂತಹ ಮೊಹಮ್ಮದ್ ಸಿರಾಜ್ ಸಾಕಷ್ಟು ಬಾರಿ ಭಾರತೀಯ ಕ್ರಿಕೆಟ್ ತಂಡವನ್ನು ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ ಸೇರಿಸುವ ಕೆಲಸವನ್ನು ಮಾಡಿದ್ದಾರೆ. ಈಗ ಅವರಿಗೆ ಸರ್ಕಾರಿ ಗೌರವಗಳು ಸಿಕ್ಕಿರುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕ ಎಂದು ಹೇಳಬಹುದಾಗಿದೆ.