Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadgets
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadgets
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Tirupati Laddu: ತಿರುಪತಿ ಭಕ್ತರಿಗೆ ಶಾಕ್, ಲಡ್ಡು ತಯಾರಿಕೆ ಬಗ್ಗೆ ಚಂದ್ರಬಾಬು ನಾಯ್ಡು ಗಂಭೀರ ಆರೋಪ!
NewsPoliticsViral

Tirupati Laddu: ತಿರುಪತಿ ಭಕ್ತರಿಗೆ ಶಾಕ್, ಲಡ್ಡು ತಯಾರಿಕೆ ಬಗ್ಗೆ ಚಂದ್ರಬಾಬು ನಾಯ್ಡು ಗಂಭೀರ ಆರೋಪ!

Chetan Yedve
Last updated: April 15, 2025 6:10 pm
By Chetan Yedve

ಕಲಿಯುಗದ ಪಾಪ ತೊಳೆಯುವ ಪಾಪವಿನಾಶಕ ಕ್ಷೇತ್ರವಾದ ತಿರುಪತಿ ಶ್ರೀ ತಿಮಪ್ಪನ (Tirupathi) ದರ್ಶನ ಪಡೆಯಲು ಅದೆಷ್ಟೋ ಸಮಯಗಳಿಂದ ಜನ ಬರುತ್ತಾರೆ . ಪ್ರತ್ಯಕ್ಷ ವೆಂಕಟೇಶ ದೇವರನ್ನೇ ನೋಡಿದ ಅನುಭವ ನೀಡುವ ತಿರುಪತಿಗೆ ದಿನೇ ದಿನೇ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯೇ ಆಗುತ್ತಿದೆ. ಪಾದಯಾತ್ರೆ, ವಿಶೇಷ ದರ್ಶನ, ಆನ್‌ಲೈನ್ ಬುಕಿಂಗ್, ಕ್ಯೂ ದರ್ಶನ ಹೀಗೆ ಹಲವು ರೀತಿಯ ದರ್ಶನಗಳನ್ನು ಪಡೆಯುವ ಎಲ್ಲಾ ಭಕ್ತರಿಗೆ ತಿರುಪತಿಯಲ್ಲಿ ಸಿಗುವ ಅತ್ಯುತ್ತಮ ಪ್ರಸಾದ ತಿರುಪತಿ ಲಡ್ಡು (Tirupati Laddu). ಇದೀಗ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ತಿರುಪತಿ ಲಡ್ಡು ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನೆಂದು ನೋಡೋಣ ಬನ್ನಿ.

ಲಕ್ಷಾನುಗಟ್ಟಲೆ ಭಕ್ತರು ಕೋಣೆಯಂತಹ ಕ್ಯೂನಲ್ಲಿ ಕಾದು ಕಾದು ನಂತರ ರಾತ್ರೋರಾತ್ರಿ ಅಥವಾ ನಸುಬೆಳಕಿನ ಜಾವವೇ ಒಮ್ಮೆಗೇ ಕ್ಯೂ ಬಾಗಿಲು ತೆರೆದಾಗ, ನೂಕುನುಗ್ಗಲಿನ ನಡುವೆಯೇ ಶ್ರೀ ವಾರಿ ವೆಂಕಟೇಶನ ದರ್ಶನ ಪಡೆಯಲು ಮುಗಿಬಿದ್ದು ದೇವರ ದರ್ಶನ ಪಡೆದಾಗ ವ್ಯಕ್ತಪಡಿಸುವ ಆನಂದವೇ ಬೇರೆ. ಅದರೊಂದಿಗೆ, ದರ್ಶನದ ನಂತರ ತಮ್ಮ ತಮ್ಮ ಕಾಣಿಕೆಗಳನ್ನು ದೇವರಿಗೆ ಅರ್ಪಿಸಿ ಪಾಪ ತೊಳೆದುಕೊಳ್ಳುವ ಜನರಿಗೆ ಲಡ್ಡು ಪ್ರಸಾದ (Tirupati Laddu) ಅತ್ಯಂತ ಖುಷಿ ಕೊಡುತ್ತದೆ. ಆದರೆ, ಅದೇ ಲಡ್ಡುಪ್ರಸಾದದ ಬಗ್ಗೆ ಆಂಧ್ರ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಇಡೀ ಭಕ್ತ ವಲಯದಲ್ಲಿ ಭಯ ಹುಟ್ಟುಹಾಕಿದೆ.

ತಿರುಪತಿ ಲಡ್ಡು ಬಗ್ಗೆ ಚಂದ್ರಬಾಬು ನಾಯ್ಡು ಆರೋಪವೇನು?

ಹೌದು. ಕೋಟ್ಯಾಂತರ ಭಕ್ತರಿಗೆ ಪ್ರಸಾದವಾಗಿದ್ದ ತಿರುಪತಿ ಲಡ್ಡುವಿನ ತಯಾರಿಕೆಗೆ ಹಿಂದೆ ವೈಎಸ್ ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) ಅವರ ಆಡಳಿತದಲ್ಲಿ ಪ್ರಾಣಿಗಳ ಕೊಬ್ಬು (Animal Fat) ಬಳಸಲಾಗುತ್ತಿತ್ತು ಎನ್ನುವ ಗಂಭೀರ ಆರೋಪವನ್ನು ಚಂದ್ರಬಾಬು ನಾಯ್ಡು ಮಾಡಿದ್ದಾರೆ. ಈ ಆರೋಪ ಸಾರ್ವಜನಿಕ ವಲಯದಲ್ಲಿ ಬಹಳ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ನಿನ್ನೆ ಬುಧವಾರ ನಡೆದ ಎನ್‌ಡಿ‌ಎ (NDA) ಶಾಸಕಾಂಗ ಪಕ್ಷದ ಸಭೆಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಹೊಸ ಬಾಂಬ್ ಸಿಡಿಸಿದ್ದು, ಹಿಂದಿನ ಸಿಎಂ ಜಗನ್ ಆಡಳಿತದಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಿಂದೆ  ಜಗನ್ ಮೋಹನ್ ರೆಡ್ಡಿ ಆಡಳಿತಾವಧಿಯಲ್ಲಿ ಇಡೀ ತಿರುಮಲ ದೇವಾಲಯ ಪಾವಿತ್ರ್ಯತೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅವರು ಅನ್ನದಾನದ ಸಂಪೂರ್ಣ ಗುಣಮಟ್ಟ ಕೆಡಿಸಿದ್ದಲ್ಲದೇ, ಲಡ್ಡು (Tirupati Laddu) ತಯಾರಿಕೆಗೆ ಶುದ್ಧ ತುಪ್ಪದ ಬದಲಿಗೆ ಹಸುವಿನ ಅಥವಾ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದರು. ನಾವು ಅದನ್ನು ಸಂಪೂರ್ಣವಾಗಿ ಬಂದ್ ಮಾಡಿ, ಶುದ್ಧ ತುಪ್ಪವನ್ನಷ್ಟೇ ಬಳಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

 

ನಾಯ್ಡು ಆರೋಪಕ್ಕೆ ಪುಷ್ಟಿ ನೀಡಿದ ಕೆ.ಎಂ.ಎಫ್ ಅಧ್ಯಕ್ಷರ ಹೇಳಿಕೆ?

ಚಂದ್ರಬಾಬು ನಾಯ್ಡು ಅವರ ಈ ಹೇಳಿಕೆಗೆ ಪುಷ್ಟಿ ನೀಡುವಂತೆ, ಕೆ.ಎಂ.ಎಫ್ (KMF) ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಅವರ ಹೇಳಿಕೆಯೂ ಆ ಆರೋಪಕ್ಕೆ ಸರಿಹೊಂದುವಂತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ನಾವು ಕೆ.ಎಂ.ಎಫ್‌‌‌‌‌ನಿಂದ ತುಪ್ಪ ಪೂರೈಕೆ ಮಾಡಿಲ್ಲ. ಕಳೆದ ವರ್ಷ ತುಪ್ಪ ಪೂರೈಕೆಯನ್ನು ನಾವು ಮರು ಆರಂಭಿಸಿದ್ದು, ಅಲ್ಲಿ ನಡೆದಿದೆ ಎನ್ನಲಾದ ಅಕ್ರಮ ಅಥವಾ ವಿವಾದಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಕೇವಲ ತುಪ್ಪವನ್ನಷ್ಟೇ ಪೂರೈಕೆ ಮಾಡುತ್ತೇವೆ ಎಂದಿದ್ದಾರೆ.

ಆರೋಪ ಸಾಬೀತಾದರೆ ಮುಂದಿನ ಗತಿ?

ಲಡ್ಡು (Tirupati Laddu) ತಯಾರಿಕೆಗಾಗಿ 3 ಲಕ್ಷದ 50 ಸಾವಿರ ಕೆ.ಜಿ ತುಪ್ಪ ಪೂರೈಕೆಗೆ ಕೆ.ಎಂ.ಎಫ್‌ಗೆ ಟೆಂಡರ್ ನೀಡಲಾಗಿದ್ದು, ಸಾಕಷ್ಟು ಮೊತ್ತದ ತುಪ್ಪವನ್ನು ತಿರುಪತಿಗೆ ನಂದಿನಿ ಬ್ರಾಂಡ್ ಪೂರೈಸುತ್ತಿದೆ. ಆದರೆ, ಚಂದ್ರಬಾಬು ನಾಯ್ಡು ಅವರ ಈ ಆರೋಪ ಯಾವ ಸ್ವರೂಪ ಪಡೆದುಕೊಳ್ಳಲಿದೆ ಅಥವಾ ಹಿಂದೆ ಇದ್ದ ಜಗನ್ ಸರ್ಕಾರದ ಅವಧಿಯಲ್ಲಿ ಈ ಅಕ್ರಮ ನಡೆದಿದ್ದು ಸಾಬೀತಾದರೆ, ಅದರ ವಿರುದ್ದ ಏನೇನು ಕ್ರಮಗಳಾಗಬಹುದು ಎನ್ನುವುದನ್ನು ಕಾದುನೋಡಬೇಕಿದೆ.

 

ಆದರೆ, ಈ ಆರೋಪ ನಿಜವೇ ಆದಲ್ಲಿ, ತಿರುಪತಿಯ ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆಯಾಗುವುದಂತೂ ಖಂಡಿತ.

Jayam Ravi Divorce: 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಜಯಂ ರವಿ-ಆರತಿ.

Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು

Tirupati Laddu: ಸಮಸ್ತ ಹಿಂದೂ ಭಕ್ತರಿಗೆ ಬಿಗ್ ಶಾಕ್, ತಿರುಪತಿ ಲಡ್ಡುವಿನಲ್ಲಿ ಈ ಅಂಶ ಇರೋದು ವರದಿಯಲ್ಲಿ ದೃಢ!

Hebbal Traffic Police: ಹೆಬ್ಬಾಳದಲ್ಲಿ ಪೊಲೀಸ್‌ಗೆ ಹೆಲ್ಮೆಟ್ ಇಲ್ಲದ ಕಾರಣ ಚಲನ್

ನೀರಜ್ ಚೋಪ್ರಾ ಗೆ ಮನು ಭಕ್ರ್ ಸ್ಪೆಷಲ್ ವಿಶ್, ಮಾಡುವೆ ವದಂತಿಗಳು ಮತ್ತೆ ವೈರಲ್.

TAGGED:Animal Fat in Tirupati LadduCM Chandrababu NaiduTirupati LadduTirupati Laddu MakingTirupati Temple
Previous Article Ganesh Pooja: ಚೌತಿ ಹಾಗೂ ಗಣೇಶ ಪೂಜೆಗೆ ಈ ತಪ್ಪು ಖಂಡಿತಾ ಮಾಡಲೇಬೇಡಿ
Next Article R. Ashwin: ಸೂಪರ್ ಸೆಂಚುರಿ ಬಾರಿಸಿದ ಆರ್. ಅಶ್ವಿನ್, ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ.
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
RBI ದರ ಇಳಿಕೆ: ಗೃಹ ಸಾಲದ EMI ಕಡಿಮೆಯಾದ ಪ್ರಮುಖ ಬ್ಯಾಂಕ್‌ಗಳ ಪಟ್ಟಿ!
Finance
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address: Karnataka Times,
Ground Floor,  Opp. Bhawani Mandir,
6th Cross, Siddaramaiah Layout,
Bidar 585403, Karnataka, India

 

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. 

We strive to empower the people of Karnataka with information that matters.

Karnataka Times Sites

  • India Mint
  • Karnataka Daily
  • Nadu Nudi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use