Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Tirupati Laddu: ಸಮಸ್ತ ಹಿಂದೂ ಭಕ್ತರಿಗೆ ಬಿಗ್ ಶಾಕ್, ತಿರುಪತಿ ಲಡ್ಡುವಿನಲ್ಲಿ ಈ ಅಂಶ ಇರೋದು ವರದಿಯಲ್ಲಿ ದೃಢ!
NewsViral

Tirupati Laddu: ಸಮಸ್ತ ಹಿಂದೂ ಭಕ್ತರಿಗೆ ಬಿಗ್ ಶಾಕ್, ತಿರುಪತಿ ಲಡ್ಡುವಿನಲ್ಲಿ ಈ ಅಂಶ ಇರೋದು ವರದಿಯಲ್ಲಿ ದೃಢ!

Chetan Yedve
Last updated: April 15, 2025 6:08 pm
By Chetan Yedve

ನಿನ್ನೆಯಷ್ಟೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಿರುಪತಿ ಲಡ್ಡು ಬಗ್ಗೆ ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಆ ಲಡ್ಡು ಸ್ಯಾಂಪಲ್‌ನ್ನು ಆಹಾರ ಸುರಕ್ಷತಾ ತಂಡ ಲ್ಯಾಬ್‌ನಲ್ಲಿ ಟೆಸ್ಟ್‌ಗೆ ಒಳಪಡಿಸಿತ್ತು.‌ ಆ ಟೆಸ್ಟ್‌ ನಲ್ಲಿ ಅನಿಮಲ್ ಫ್ಯಾಟ್ ಅಂಶ ಇರೋದು ಧೃಡವಾಗಿದೆ ಎಂದು ನಾಯ್ಡು ಹೇಳಿದ್ದಾರೆ , ಇಡೀ ಹಿಂದೂ ಭಕ್ತಸಮಾಜ ತಲೆತಗ್ಗಿಸುವಂತಾಗಿದೆ.

ಹೌದು. ಕಳೆದ ಚುನಾವಣೆಯಲ್ಲಿ ವೈಎಸ್ ಜಗನ್‌ಮೋಹನ್ ರೆಡ್ಡಿ (Y S Jagan Mohan Reddy) ಯವರ ವೈಎಸ್‌ಆರ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೇರಿದ ಸಿಎಂ ಚಂದ್ರಬಾಬು ನಾಯ್ಡು (N. Chandrababu Naidu), ಜಗನ್ ಆಡಳಿತದಲ್ಲಿ ನಡೆದಿದ್ದ ಬಹುತೇಕ ಅಕ್ರಮಗಳನ್ನು ಹಾಗೂ ಅನ್ಯಾಯಗಳನ್ನು ಬಯಲಿಗೆಳೆದಿದ್ದರು. ಅತಿಮುಖ್ಯವಾಗಿ ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದ ಸಮಿತಿಯಲ್ಲಿ ಅನ್ಯಮತೀಯರ ಕೈವಾಡದ ವಿರುದ್ಧವೂ ದನಿ ಎತ್ತಿದ್ದರು.‌

ನಿಜವಾಯ್ತು ಸಿಎಂ ನಾಯ್ಡು ಆರೋಪ!

ಆದರೆ, ಮೊನ್ನೆ ಬುಧವಾರ ನಡೆದ ಎನ್‌ಡಿಎ ಒಕ್ಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರುಪತಿಯಲ್ಲಿ ಜಗನ್‌ ಆಡಳಿತದಲ್ಲಿ ಲಡ್ಡು ತಯಾರಿಕೆಗೆ ತುಪ್ಪದ ಬದಲಿಗೆ ಮೀನೆಣ್ಣೆ ಹಾಗೂ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ಅದರಂತೆಯೇ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ (NDDB) ಆ ಲಡ್ಡು ಸ್ಯಾಂಪಲ್‌ನ್ನು ಟೆಸ್ಟ್‌ (Tirupati Laddu Report) ಗೆ ಒಳಪಡಿಸಿದಾಗ, ಅದರಲ್ಲಿ ಅನಿಮಲ್ ಫ್ಯಾಟ್ ಅಥವಾ ಪ್ರಾಣಿ ಕೊಬ್ಬು ಇರೋದು ಧೃಢವಾಗಿದ್ದು, ಸಮಸ್ತ ಹಿಂದೂಗಳಿಗೆ ತಲೆ ಮೇಲೆ ಬೆಟ್ಟವೇ ಕಳಚಿ ಬಿದ್ದಂತಾಗಿದೆ.

 

 

ತಿರುಪತಿಗೆ ವರ್ಷದಿಂದ ವರ್ಷಕ್ಕೆ ಜಾತಿ ಮತ ಪಂಥ ಬೇಧವಿಲ್ಲದೆ ಕೋಟ್ಯಾಂತರ ಭಕ್ತರು ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೇ ಅಲ್ಲಿನ ಲಡ್ಡು ಪ್ರಸಾದವನ್ನು ದೇವರ ಪ್ರತ್ಯಕ್ಷ ಪ್ರಸಾದವೆಂದೇ ನಂಬಿ ಭಕ್ತಿಯಿಂದ ಸ್ವೀಕರಿಸುತ್ತಾರೆ. ಆದರೆ, ಜಗನ್ ಮೋಹನ್ ರೆಡ್ದಿ ನೇತೃತ್ವದ ನಿರ್ಗಮಿತ ವೈ ಎಸ್ ಆರ್ ಸರ್ಕಾರ, ಸಮಸ್ತ ಹಿಂದೂ ಸಮಾಜಕ್ಕೆ ಅಥವಾ ದೇವಳದ ನಂಬಿಕೆಗೆ ವಿರುದ್ಧವಾಗಿ ತುಪ್ಪದ ಬದಲಿಗೆ ಲಡ್ಡು ತಯಾರಿಕೆ  ಗೆ ಪ್ರಾಣಿಗಳ ಕೊಬ್ಬು ಹಾಗೂ ಮೀನೆಣ್ಣೆ ಬಳಸಿ ಇಡೀ ಭಕ್ತವರ್ಗವೇ ಅಸಹ್ಯಪಡುವಂತೆ ಮಾಡಿದ್ದು ಜಗತ್ತಿನಾದ್ಯಂತ ಸಮಸ್ತ ಹಿಂದೂ ಸಮಾಜ ಭುಗಿಲೇಳುವಂತೆ ಮಾಡಿದೆ.

 ನಾವು ಪ್ರಾಣಿ ಕೊಬ್ಬು ಬಳಸಿಲ್ಲ ಎಂದಿದ್ದ ಸುಬ್ಬಾರೆಡ್ಡಿಗೆ ವರದಿಯ ಕಪಾಳಮೋಕ್ಷ

ನಿನ್ನೆ NDDB ನಡೆಸಿದ ಲ್ಯಾಬ್ ಟೆಸ್ಟ್‌ನಲ್ಲಿ ಈ ಹಿಂದೆ ಅನಿಮಲ್ ಫ್ಯಾಟ್ ಬಳಸಿರೋದು ದೃಢಪಟ್ಟಿದ್ದು, ಚಂದ್ರಬಾಬು ನಾಯ್ಡು ಅವರ ಆರೋಪ ನಿಜವೆಂದು ಸಾಬೀತಾಗಿದೆ. ಅಷ್ಟೇ ಅಲ್ಲದೇ, ವೈಎಸ್ ಜಗನ್ ಮೋಹನ್ ರೆಡ್ದಿ ಅವರ ಹತ್ತಿರದ ಸಂಬಂಧಿ ಹಾಗೂ ರಾಜ್ಯಸಭಾ ಸದಸ್ಯರಾದ ಸುಬ್ಬಾ ರೆಡ್ಡಿಯವರು ಚಂದ್ರಬಾಬು ನಾಯ್ಡುರವರ ಆರೋಪವನ್ನು ಅಲ್ಲಗಳೆದಿದ್ದಲ್ಲದೇ, ಇಂತಹ ಆರೋಪಗಳು ದುರುದ್ದೇಶಪೂರಿತ ಹಾಗೂ ಇಂತಹ ಪ್ರಯತ್ನ ನಾವು ಮಾಡಿಲ್ಲ ಎಂದು ದೇವರಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಹೇಳಿದ್ದರು. ಆದರೆ, ಈ ಪರೀಕ್ಷಾ ವರದಿ (Tirupati Laddu Report) ದೃಢವಾಗುತ್ತಿದ್ದಂತೆ ಸುಬ್ಬಾರೆಡ್ಡಿಯವರು ಯಾವುದೇ ಹೇಳಿಕೆ ನೀಡಲು ಅಸಮರ್ಥರಾಗಿದ್ದಾರೆ ಎನ್ನಲಾಗಿದೆ.

ಜಗತ್ತಿನೆಲ್ಲೆಡೆ ಭುಗಿಲೆದ್ದ ಆಕ್ರೋಶ!

ಈ ವಿವಾದದ ಬಗ್ಗೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದ್ದು, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದೂ ಸಂಘಟನೆಗಳು ಹಾಗೂ ಇತರ ಹಲವಾರು ಸಂಘಟನೆಗಳು ಹಾಗೂ ಹಲವು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು, ಸಾಮಾಜಿಕ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜಗನ್ ಮೋಹನ್ ರೆಡ್ಡಿಯವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ನಂಬಿಕೆಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಸಮಸ್ತ ಹಿಂದೂ ಭಕ್ತ ಸಮಾಜಕ್ಕೆ ಜಗನ್ ಸರ್ಕಾರ ಮಾಡಿರುವುದು ಅತ್ಯಂತ ಘೋರ ಅಪರಾಧ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಸಮಸ್ತ ಭಕ್ತವರ್ಗದ ನಂಬಿಕೆಗೆ ಅನ್ಯಾಯ ಎಸಗಿದ ನಿರ್ಗಮಿತ ಜಗನ್ ಸರ್ಕಾರ!

ಏನೇ ಇರಲಿ. ಸರ್ವ ಸ್ವಚ್ಛಂದ ಹಾಗೂ ಪಾವಿತ್ರ್ಯತೆಯುಳ್ಳ ತಿರುಪತಿಯಂತಹ ಜಗದ್ವಿಖ್ಯಾತ ದೇವಳದಲ್ಲಿಯೂ ಲಡ್ಡು ತಯಾರಿಕೆಗೆ ಮೀನೆಣ್ಣೆ ಹಾಗೂ ಪ್ರಾಣಿ ಕೊಬ್ಬು ಬಳಸಿರುವ ಇಂತಹ ಕೀಳುಮಟ್ಟದ ಅಕ್ರಮ ನಡೆದಿರುವುದು ವಿಷಾದನೀಯ. ಪ್ರಸ್ತುತ ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ಕರ್ನಾಟಕದ ನಂದಿನಿ ತುಪ್ಪವನ್ನೇ ಲಡ್ಡು ತಯಾರಿಕೆಗೆ ಬಳಸಲಾಗುತ್ತಿದ್ದರೂ ಕೂಡ, ಈ ಹಿಂದೆ ನಡೆದ ಈ ಅಕ್ಷಮ್ಯ ಅಪರಾಧ ಹಾಗೂ ಈಗಾಗಲೇ ಇರುವ ಲಡ್ಡು ಸ್ಟಾಕ್‌ಗಳನ್ನು ಸ್ವೀಕರಿಸಿದವರ ಪಾಲಿಗೆ ಎಸಗಿದ ನಂಬಿಕೆದ್ರೋಹಕ್ಕೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕಿದೆ.

 

Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು

ನೀರಜ್ ಚೋಪ್ರಾ ಗೆ ಮನು ಭಕ್ರ್ ಸ್ಪೆಷಲ್ ವಿಶ್, ಮಾಡುವೆ ವದಂತಿಗಳು ಮತ್ತೆ ವೈರಲ್.

Atishi Marlena: ದೆಹಲಿ CM ಆಗಿ ಪ್ರಮಾಣವಚನ ಸ್ವೀಕರಿಸಿದ ಅತಿಶಿ, ಈಕೆಯ ಸಾಧನೆಗಳೇನು ಗೊತ್ತೇ?

ರಾಜಕೀಯ ಕುತಂತ್ರಕ್ಕೆ ಬಲಿಯಾದ ಕಾರ್ಕಳದ ಪ್ರವಾಸೋದ್ಯಮ – 2 ವರ್ಷದಿಂದ ಪಾಳುಬಿದ್ದ ಪರಶುರಾಮ ಥೀಮ್ ಪಾರ್ಕ್!

Sim Card: ಇನ್ನು ಮುಂದೆ ಸಿಮ್ ಕಾರ್ಡ್ ಪಡೆಯುವುದು ಇನ್ನೂ ಕಷ್ಟ, ಈ ಹೊಸ ನಿಯಮಗಳಿಗೆ ತಯಾರಾಗಿರಿ.

TAGGED:Animal Fat in Tirupati LadduCM Chandrababu NaiduJagan Mohan ReddyNDDB ReportTirupati LadduTirupati Laddu ReportTirupati News
Previous Article R. Ashwin: ಸೂಪರ್ ಸೆಂಚುರಿ ಬಾರಿಸಿದ ಆರ್. ಅಶ್ವಿನ್, ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ.
Next Article High Court Judge: “ಪಾಕಿಸ್ತಾನ” ಹೇಳಿಕೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂ ತರಾಟೆ.
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

Hebbal Traffic Police: ಹೆಬ್ಬಾಳದಲ್ಲಿ ಪೊಲೀಸ್‌ಗೆ ಹೆಲ್ಮೆಟ್ ಇಲ್ಲದ ಕಾರಣ ಚಲನ್
News
ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use