ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM Kisan Scheme) ಅಡಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೈತರನ್ನು ಸರ್ಕಾರ ಆರ್ಥಿಕವಾಗಿ ಬೆಂಬಲಿಸುವ ನಿಟ್ಟಿನಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂಪಾಯಿಗಳಲ್ಲಿ ಒಟ್ಟಾರೆ 6000 ರೂಪಾಯಿ ಗಳ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರ್ತಾ ಇದೆ. ರೈತರ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವಂತಹ ಸಾಕಷ್ಟು ಯೋಜನೆಗಳಲ್ಲಿ ಇದು ಕೂಡ ಒಂದು.
ಇನ್ನು ಈಗ ಸಿಗಬೇಕಾಗಿರುವಂತಹ ಈ ಯೋಜನೆಯ 18ನೇ ಕಂತಿನ ಹಣದಲ್ಲಿ 2,000 ರೂಪಾಯಿಗಳ ಬದಲಿಗೆ 4000 ರೂಪಾಯಿ ನೀಡುವಂತಹ ಘೋಷಣೆಯನ್ನು ಕೂಡ ಮಾಡಲಾಗಿದೆ. ಇದರ ಜೊತೆಗೆ ಮತ್ತೊಂದು ಮಹತ್ವವಾದ ಘೋಷಣೆಯನ್ನು ಕೂಡ ಕೇಂದ್ರ ಗೃಹ ಸಚಿವರಾಗಿರುವಂತಹ ಅಮಿತ್ ಶಾ (Amit Shah) ಮಾಡಲಿದ್ದು, ಪ್ರತಿಯೊಬ್ಬ ರೈತರು ಕೂಡ ಇದನ್ನ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.
ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 5ರಂದು ರೈತರಿಗೆ ಸಿಗಬೇಕಾಗಿರುವಂತಹ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣವನ್ನು 2000 ರೂಪಾಯಿಗಳ ಬದಲಿಗೆ ನಾಲ್ಕು ಸಾವಿರ ರೂಪಾಯಿ ಅನ್ನು ನೀಡಲಾಗುವುದು ಎಂಬುದಾಗಿ ತಿಳಿದು ಬಂದಿದೆ. ಯಾಕಾಗಿ 18ನೇ ಕಂತಿನ ಹಣದಲ್ಲಿ ಒಟ್ಟಾರೆ 4000ಗಳನ್ನು ನೀಡಲಾಗಿದೆ ಎಂಬುದನ್ನು ನೋಡುವುದಾದರೆ, 17ನೇ ಕಂತಿನ ಹಣವನ್ನು ಪಡೆಯದೆ ಇರುವಂತಹ ರೈತರ ಹಣವನ್ನು ಸೇರಿಸಿ ಆ ಕೆಲವು ರೈತರಿಗೆ ಮಾತ್ರ ನಾಲ್ಕು ಸಾವಿರ ರೂಪಾಯಿಗಳನ್ನು ಒಟ್ಟಾರೆಯಾಗಿ ನೀಡಲಾಗಿದೆ.
ಇನ್ನು ಕೇಂದ್ರ ಸಚಿವರಾಗಿರುವಂತಹ ಅಮಿತ್ ಶಾ (Amit Shah) ರವರು ಒಂದು ವೇಳೆ ಜಮ್ಮು ಕಾಶ್ಮೀರ ಹಾಗೂ ಹರಿಯಾಣದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದರೆ ಅಲ್ಲಿನ ರೈತರಿಗೆ ವಾರ್ಷಿಕ 10,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ ಎಂಬ ಹೇಳಿಕೆಯನ್ನು ಕೂಡ ಇತ್ತೀಚಿನ ದಿನಗಳಲ್ಲಿ ನೀಡಿರುವುದು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೊನೆಗೂ ರೈತರಿಗೆ ಸಿಗಬೇಕಾಗಿರುವಂತಹ ಪಿಎಂ ಕಿಸಾನ್ ಯೋಜನೆಯ (PM Kisan Scheme) 18ನೇ ಕಂತಿನ ಹಣ ಹಾಗೂ ಕೆಲವರು ರೈತರಿಗೆ 17 ಹಾಗೂ 18 ಕಂತಿನ ಎರಡು ಹಣವನ್ನು ಕೂಡ ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ನೇರವಾಗಿ ಅವರ ಖಾತೆಗೆ ವರ್ಗಾಯಿಸಿರುವುದು ಎಲ್ಲರ ಮನಸ್ಸನ್ನು ಗೆದ್ದಿದೆ.