Indian Cricketer: ಕ್ರಿಕೆಟ್ ತೊರೆದು ಉಪಮುಖ್ಯಮಂತ್ರಿಯಾದ ಈ ಹಿರಿಯ ಕ್ರಿಕೆಟರ್ ಯಾರು ಗೊತ್ತಾ?
ಭಾರತದಲ್ಲಿ ಜನ ಅತಿ ಹೆಚ್ಚು ಇಷ್ಟಪಡುವ ಆಟ ಅಂದ್ರೆ ಅದು ಕ್ರಿಕೆಟ್ ಚಿಕ್ಕ ಮಗುವಿನಿಂದ ಹಿಡಿದು ಮುದುಕರವರೆಗೂ ಕ್ರಿಕೆಟ್ ಬಗ್ಗೆ ಮಾತಾಡು ಚೆನ್ನಾಗಿ ಗೊತ್ತಿರುತ್ತೆ. ಇತ್ತೀಚೆಗೆ ಮಾತು ಬರೆದ ಅಂಬೇಗಾಲು ಹಿಡಿದ ಮಗುವು ಕೂಡ ಬ್ಯಾಟು ಬಾಲ್ ಆಡಿದಷ್ಟು ಸುಲಭವಾಗಿ ಬೇರೆ ಆಟದ ವಸ್ತುಗಳನ್ನು ಆಡುವುದಿಲ್ಲ ಅಂದರೆ ಎಷ್ಟರಮಟ್ಟಿಗೆ ನಮ್ಮಲ್ಲಿ ಕ್ರಿಕೆಟ್ ಆವರಿಸಿಕೊಂಡಿದೆ ಎಂಬುದು ಇಲ್ಲಿ ಅರ್ಥವಾಗುತ್ತದೆ ಒಬ್ಬ ಕ್ರಿಕೆಟ್ಗನಾಗಬೇಕು ಎಂದು ಹಲವು ಮಕ್ಕಳು ಕನಸು ಕಾಣುತ್ತಾರೆ. ಹಾಗೆ ತಾನು ಕ್ರಿಕೆಟಿಗನಾಗಬೇಕು ಅಂತ, ದೊಡ್ಡ ರಾಜಕೀಯ ಕುಟುಂಬದಲ್ಲಿ ಜನಿಸಿದ ಆ ಹುಡುಗ ಕೂಡ ಕನಸು ಕಂಡಿದ್ದ. ಕ್ರಿಕೆಟ್ ಆಡಿದ್ದ..
Tejashwi Yadav ನೆನಪಿದ್ಯಾ:
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಹಿರಿಯ ಪುತ್ರನೇ ತೇಜಸ್ವಿ ಯಾದವ್ (Indian Cricketer Tejashwi Yadav). ಬಿಹಾರ ರಾಜ್ಯದ ಅಧಿಕಾರದ ಚುಕ್ಕಾಣಿ ಹೇಳಿ ಹಿಡಿದಿದ್ದಾರೆ. ರಾಷ್ಟ್ರೀಯ ಜನತಾದಳದ ಉಪಾಧ್ಯಕ್ಷರು ಕೂಡ ಹೌದು. ಇದು ಇವರ ರಾಜಕೀಯ ಹಿನ್ನೆಲೆಯಾಗಿದ್ದರೆ ತೇಜಸ್ವಿಯಾದವ್ ಅವರು ದೆಹಲಿ ಪರವಾಗಿ ಅಂಡರ್ 19 ಕ್ರಿಕೆಟ್ ಕೂಡ ಆಡಿದವರು.

ತೇಜಸ್ವಿ ಯಾದವ್ ಕ್ರಿಕೆಟ್ ಹಿನ್ನೆಲೆ:
2009 -10ರಲ್ಲಿ ಜಾರ್ಖಂಡ್ ಪರವಾಗಿ ದೇಶಿಯ ಕ್ರಿಕೆಟ್ ಆಡಲು ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಒಬ್ಬ ಪ್ಲೇಯರ್ ಕೂಡ ಆಗಿದ್ದವರು. ಆದರೆ ಈ ಸಂದರ್ಭದಲ್ಲಿ ಅವರಿಗೆ ತಮ್ಮ ಬ್ಯಾಟಿಂಗ್ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿಲ್ಲ. ಅತ್ಯುತ್ತಮ ಬಲಗೈ ಬ್ಯಾಟ್ಸ್ ಮ್ಯಾನ್ ಹಾಗೂ ಬಲಗೈ ಮಧ್ಯಮ ವೇಗಿ ಬೌಲರ್ ಕೂಡ ಆಗಿದ್ದವರು ತೇಜಸ್ವಿ ಯಾದವ್.
ಕ್ರಿಕೆಟ್ ನಲ್ಲಿ ಸಾಧನೆ:
ಅವರು 20೦9ರಲ್ಲಿ ಜಾರ್ಖಂಡ್ ಪರವಾಗಿ ಚೊಚ್ಚಲ ದೇಶಿಯ ಪಂದ್ಯವನ್ನು ಆಡುತ್ತಾರೆ. ಪ್ರಥಮ ದರ್ಜೆ ಸೆಕೆಂಡ್ ಲಿಸ್ಟ್ ಹಾಗೂ 4 t20ಟಿ ಪಂದ್ಯಗಳನ್ನು ಅವರು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 20 ಸೆಕೆಂಡ್ ಲಿಸ್ಟ್ 14 ಹಾಗೂ T 20 ಯಲ್ಲಿ 3 ರನ್ ಗಳಿಸಿದ್ದಾರೆ. ಇವರು ಆಡಿರುವ ಒಟ್ಟು ಆರು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಒಬ್ಬ ಅತ್ಯುತ್ತಮ ಕ್ರಿಕೆಟ್ ಭವಿಷ್ಯ ಹೊಂದಿದ್ದ ತೇಜಸ್ವಿನಿ ಯಾದವ್ ಕ್ರಿಕೆಟ್ ಆಡುವ ಕನಸು ಇದ್ದರೂ ಕೂಡ ತಮ್ಮ ಕುಟುಂಬದ ಸದಸ್ಯರಂತೆ ರಾಜಕೀಯ ಬದುಕಿಗೆ ತೆರಳಿದರು. ಇಂದು ಬಿಹಾರದ ರಾಜಕೀಯ ಬದುಕಿನಲ್ಲಿ ಸಾಕಷ್ಟು ಸಾಧನೆ ಮಾಡಿರುವ ತೇಜಸ್ವಿ ಯಾದವ್ ಇಂದಿಗೂ ಕ್ರಿಕೆಟ್ ಆಡುವ ಹಂಬಲವನ್ನು ಬಿಟ್ಟಿಲ್ಲ ಇದಕ್ಕೆ ಸಾಕ್ಷಿಯಾಗಿ ಅವರು ಆಗಾಗ ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.