ರೈತರ ಅಭಿವೃದ್ಧಿಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿ ಮಾಡಿದ್ದು ಅದರಲ್ಲಿ ಮುಖ್ಯವಾದ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಕೂಡ ಒಂದಾಗಿದೆ. ರೈತರು ಆರ್ಥಿಕವಾಗಿ ಸಬಲ ಆಗಲು, ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಕೇಂದ್ರ ಸರಕಾರ ಆರ್ಥಿಕ ಸಹಾಯಧನ ನೀಡಲಿದ್ದು ಪ್ರತಿ ವರ್ಷ ರೈತರಿಗೆ 6 ಸಾವಿರ ರೂ. ಆದರೆ, ಈ ಹಣವನ್ನು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ ಜಮೆ ಮಾಡುತ್ತಾ ಬಂದಿದೆ.
ಇದು ರೈತರಿಗೆ ನಿಶ್ಚಿತ ಆದಾಯವನ್ನು ಕಲ್ಪಿಸುವ ಯೋಜನೆ ಆಗಿದ್ದು ಪ್ರತಿ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳ ನ್ನು ನೀಡಲಾಗುತ್ತದೆ. ಹೌದು ಇದುವರೆಗೆ ಹದಿನೇಳು ಕಂತಿನ ವರೆಗೆ ಈ ಕಿಸಾನ್ ಹಣ ಬಿಡುಗಡೆ ಯಾಗಿದ್ದು ಅರ್ಹ ರೈತರಿಗೆ 18ನೇ ಕಂತಿನ ಹಣ ಕೂಡ ಬಿಡುಗಡೆ ಮಾಡಲಾಗಿದ್ದು ಕೆಲವು ರೈತರ ಖಾತೆಗೆ ಹದಿನೆಂಟನೇ ಕಂತಿನ ಹಣ ಬಂದಿದೆ. ಇನ್ನುಕೆಲವು ರೈತರ ಖಾತೆಗೆ ಬಂದಿಲ್ಲ. ಇದಕ್ಕಾಗಿ ರೈತರು ಹಣ ಬಾರದೇ ಇದ್ದಲ್ಲಿ ಈ ಕೆಲಸ ಮಾಡುವುದು ಕಡ್ಡಾಯ ವಾಗಿದೆ.
ಯಾವಾಗ ಬಿಡುಗಡೆ ಆಗಿದೆ?
18ನೇ ಕಂತಿನ ಕಿಸಾನ್ ಹಣವನ್ನು ಅಕ್ಟೋಬರ್ 5 ರಂದು ಬಿಡುಗಡೆ ಯಾಗಿದ್ದು ಸುಮಾರು 9.4 ಕೋಟಿ ಗೂ ಹೆಚ್ಚು ಅರ್ಹ ರೈತ ಫಲಾನುಭವಿ ಗಳಿಗೆ ಬಿಡುಗಡೆ ಯಾಗಿದೆ. ಇನ್ನು ಹಣ ಜಮೆಯಾಗದೇ ಇರೋ ರೈತರು ಈ ಕೆಲಸ ಮಾಡುವುದು ಕಡ್ಡಾಯ ವಾಗಿದ್ದು ಇ-ಕೆವೈಸಿ ಮಾಡುವುದು ಕಡ್ಡಾಯ. ಪಹಣಿಗೆ ಆಧಾರ್ ಜೋಡಣೆ ಕೂಡ ಕಡ್ಡಾಯ ವಾಗಿದ್ದು ಈ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವ ರೈತರಿಗೆ ಹಣ ಜಮೆ ಯಾಗಲಿದೆ.
ಹೀಗೆ ಮಾಡಿ!
ಪಿಎಂ ಕಿಸಾನ್ ವೆಬ್ ಸೈಟ್ ಮೇಲೆ ಅಂದರೆ https://pmkisan.gov.in ಭೇಟಿ ನೀಡಿ. ಇಲ್ಲಿE-KYC ಆಪ್ಚನ್ ಮೇಲೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿ ಸಿ ಸರ್ಚ್ ಎಂಬಲ್ಲಿ ಕ್ಲಿಕ್ ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. Get OTP ಕ್ಲಿಕ್ ಮಾಡಿದರೆ ಆಯಿತು. ನಿಮ್ಮ ಮೊಬೈಲಿಗೆ ಬಂದಿರುವ ಒಟಿಪಿ (One Time Password) ಸಂಖ್ಯೆಯನ್ನು ಹಾಕಿದರೆ ಕೆವೈಸಿ ಅಪ್ ಡೇಟ್ ಆಗುತ್ತದೆ. ಈ ಬಗ್ಗೆ ಸಂದೇಹ ಇದ್ದಲ್ಲಿ ರೈತರು ಸಹಾಯ ವಾಣಿ ಕೇಂದ್ರ 155261 ಗೆ ಕರೆ ಮಾಡುವ ಮೂಲಕವೂ ಪರಿಹಾರ ಕಂಡುಕೊಳ್ಳಬಹುದು.