ಭಾರತ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬದವರಿಗೆ ತಮ್ಮ ದೈನಂದಿನ ಜೀವನದ ಖರ್ಚುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರ ಒಂದು ದೊಡ್ಡ ಗಿಫ್ಟ್ ಅನ್ನು ದೀಪಾವಳಿ ಹಬ್ಬದ ಉಡುಗೊರೆಯ ರೀತಿಯಲ್ಲಿ ನೀಡಿದೆ ಅಂತ ಹೇಳಬಹುದಾಗಿದೆ. ಈ ಮೂಲಕ ಬೆಲೆ ಏರಿಕೆ ನಡುವೆ ಕೂಡ ಬಡಜನರ ಜೀವನದಲ್ಲಿ ಮೂಲಭೂತ ಅಗತ್ಯತೆಗಳನ್ನ ಅವರು ಪೂರೈಸಿಕೊಳ್ಳಬಹುದು ಎನ್ನುವಂತಹ ಭರವಸೆಯನ್ನು ನೀಡಲಾಗಿದೆ.
ಉಚಿತ ರೇಶನ್ ವಿತರಣೆ!
ಗೋಧಿ, ಅಕ್ಕಿ ಹಾಗೂ ಅವಶ್ಯಕತೆ ಇರುವಂತಹ ಆಹಾರ ವಸ್ತುಗಳನ್ನು ಉಚಿತ ರೇಷನ್ (Free Ration) ರೂಪದಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ನೀಡುವ ಮೂಲಕ ಅವರ ಪ್ರತಿದಿನದ ಅಗತ್ಯತೆಗಳನ್ನ ಪೂರೈಸುವಂತಹ ಉದ್ದೇಶವನ್ನು ಈ ಮೂಲಕ ಕೇಂದ್ರ ಸರ್ಕಾರ ಹೊಂದಿದೆ. ಈ ಉಚಿತ ರೇಶನ್ ವಿತರಣೆಯಲ್ಲಿ ಗೋಧಿ, ಅಕ್ಕಿ ಹಾಗೂ ಬೇಳೆಕಾಳು ಕೂಡ ಶಾಮಿಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಯಾರಿಗೂ ಕೂಡ ಆಹಾರದ ಕೊರತೆ ಕಂಡು ಬರಬಾರದು ಎನ್ನುವ ಕಾರಣಕ್ಕಾಗಿ ಈ ಯೋಜನೆಗಳನ್ನ ಜಾರಿಗೆ ತರಲಾಯಿತು ಹಾಗೂ ಈಗ ಕೆಲವು ವರ್ಷಗಳವರೆಗೂ ಕೂಡ ಮುಂದೂಡುವಂತಹ ನಿರ್ಧಾರವನ್ನು ಕೂಡ ಮಾಡಲಾಗಿದೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ (PM Garib Kalyan Yojana) ಅಡಿಯಲ್ಲಿ ದೇಶದ 80 ಕೋಟಿ ನಾಗರಿಕರಿಗೆ ಈ ಯೋಜನೆಯ ಅಡಿಯಲ್ಲಿ ಲಾಭವನ್ನು ಪೂರೈಸುವಂತಹ ಯೋಜನೆಯನ್ನು ಸರ್ಕಾರ ಹೊಂದಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ವ್ಯಕ್ತಿಗೆ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿಕೊಂಡು ಬರಲಾಗುತ್ತಿದೆ.
ಭಾರತದಲ್ಲಿ ಕಾಡುವಂತಹ ಕುಪೋಷಣೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಈ ಯೋಜನೆಯ ಕಾರ್ಯಗತಗೊಳಿಸಲಾಗುತ್ತಿದೆ. ಇನ್ನು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ತಮ್ಮ ರೇಷನ್ ಕಾರ್ಡಿನ (Ration Card) ಇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಪ್ರಕ್ರಿಯೆ ಪೂರ್ಣಗೊಳ್ಳದೆ ಹೋದಲ್ಲಿ ಈ ಯೋಜನೆಯ ಲಾಭ ಸಿಗೋದಿಲ್ಲ.
ದೀಪಾವಳಿ ಹಬ್ಬದ ಉಡುಗೊರೆಯ ರೂಪದಲ್ಲಿ ಈ ಯೋಜನೆಯನ್ನು 2028ನೇ ಇಸ್ವಿಯವರೆಗೂ ಕೂಡ ಮುಂದುವರಿಸಲಾಗುತ್ತಿದೆ. ಹೆಚ್ಚು ಪೋಷಣೆ ಇರುವಂತಹ ಅಕ್ಕಿಯನ್ನು ಕೂಡ ಜನರಿಗೆ ಈ ಯೋಜನೆಯ ಮೂಲಕ ಪೂರೈಸುವಂತಹ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.