ಆಧಾರ್ ಕಾರ್ಡ್ ಭಾರತ ಸರ್ಕಾರ ಜಾರಿಗೆ ತಂದಿರುವಂತಹ ಅತ್ಯಂತ ಪ್ರಮುಖ ದಾಖಲೆ ಪತ್ರಗಳಲ್ಲಿ ಒಂದಾಗಿದ್ದು ಅದರಲ್ಲೂ ವಿಶೇಷವಾಗಿ ಗುರುತು ಪತ್ರದ ರೂಪದಲ್ಲಿ ಪ್ರಮುಖವಾಗಿ ಆಧಾರ್ ಕಾರ್ಡ್ಅನ್ನು ಪರಿಗಣಿಸಲಾಗುತ್ತದೆ. ಇನ್ನು ರೈತರಿಗೆ ವಿಶೇಷವಾಗಿ ಆಧಾರ್ ಕಾರ್ಡ್ (Aadhaar Card) ಅನ್ನು ಈ ವಿಚಾರದಲ್ಲಿ ಕಡ್ಡಾಯವಾಗಿ ಹೊಂದಿರುವಂತೆ ಸರ್ಕಾರ ಆದೇಶಿಸಿದೆ.
ಕೃಷಿ ಕಾರ್ಯಕ್ಕೆ ಬೇಕಾಗಿರುವಂತಹ ಯೂರಿಯಾ (Urea) ಹಾಗೂ ಡಿಎಪಿ (DAP) ಖರೀದಿ ಮಾಡುವುದಕ್ಕೆ ಆಧಾರ್ ಕಾರ್ಡ್ (Aadhaar Card) ಅನ್ನು ಹೊಂದಿರುವುದು ಕಡ್ಡಾಯ ಎಂಬುದಾಗಿ ನಿಯಮ ಜಾರಿಯಾಗಿದೆ. ಪಿಎಂ ಪ್ರಣಾಮ್ ಯೋಜನೆ (PM Pranam Scheme) ಯ ಮೂಲಕ ಸಾವಯುವ ಕೃಷಿಯನ್ನು ಮಾಡೋದಕ್ಕೆ ಕೃಷಿಕರಿಗೆ ಬೆಂಬಲಿಸಲಾಗುತ್ತಿದೆ.
ಈ ಯೋಜನೆಯ ಮೂಲಕ ನೀಡಲಾಗುವಂತಹ ಯೂರಿಯ ಹಾಗೂ ಡಿಎಪಿ ಗಳು ಸರಿಯಾದ ರೀತಿಯಲ್ಲಿ ರೈತರಿಗೆ ತಲುಪುತ್ತಿವೆ ಹಾಗೂ ಬಳಕೆಯಾಗುತ್ತಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ರೈತರಿಗೆ ಆಧಾರ್ ಕಾರ್ಡ್ (Aadhaar Card) ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದಿದೆ. ಸಬ್ಸಿಡಿಯ ರೂಪದಲ್ಲಿ ಸಿಗುವಂತಹ ಈ ವಸ್ತುಗಳನ್ನು ಸರಿಯಾದ ವರ್ಗದ ಜನರು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮಾರುಕಟ್ಟೆಯಲ್ಲಿ ಬೇರೆ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಈ ನಿಯಮವನ್ನು ರೂಪಿಸಲಾಗಿದೆ.
ಇನ್ನು ಮುಂದಿನಿಂದ ಈ ರೀತಿಯ ಗೊಬ್ಬರಗಳನ್ನು ಯಾವುದೇ ರೀತಿಯ ರೈತರು ಖರೀದಿ ಮಾಡುವುದಕ್ಕೆ ಹೋಗಬೇಕು ಅಂತ ಅಂದ್ರೆ ಅವರ ಬಳಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು. ಸರಿಯಾದ ವರ್ಗದ ರೈತರಿಗೆ ಈ ಗೊಬ್ಬರಗಳು ಸಬ್ಸಿಡಿ ದರದಲ್ಲಿ ಸಿಗುತ್ತಿವೆ ಎನ್ನುವುದರ ಖಚಿತ ಪಡಿಸಿಕೊಳ್ಳುವುದಕ್ಕಾಗಿ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ.
- ಇದರಿಂದ ರೈತರಿಗಾಗಿ ಅಂತಹ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ ಅವರಿಗೆ ಸಿಗಬೇಕಾಗಿರುವಂತಹ ಗೊಬ್ಬರಗಳನ್ನ ಕಾಳ ಸಂತೆಯಲ್ಲಿ ಯಾರು ಕೂಡ ಮಾರಾಟ ಮಾಡಲು ಸಾಧ್ಯವಿರುವುದಿಲ್ಲ.
- ಗೊಬ್ಬರಗಳ ಮೇಲೆ ರೈತರು ಮಾಡುವಂತಹ ಖರ್ಚು ಇಲ್ಲಿ ಸಿಗುವಂತಹ ಸಬ್ಸಿಡಿಯಿಂದಾಗಿ ಕಡಿಮೆಯಾಗುತ್ತೆ.
- ಕಡಿಮೆ ರಾಸಾಯನಿಕಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗುತ್ತದೆ.
- ಸಬ್ಸಿಡಿಯ ಸರಿಯಾದ ಉಪಯೋಗದಿಂದಾಗಿ ಆರ್ಥಿಕ ಹೊರೆ ಕೂಡ ರೈತರಿಗೆ ಕಡಿಮೆಯಾಗಲಿದೆ ಹಾಗೂ ಇದಕ್ಕಾಗಿ ಪ್ರಮುಖವಾಗಿ ಆಧಾರ್ ಕಾರ್ಡ್ ಬೇಕಾಗಿರುತ್ತದೆ.