ಕರ್ನಾಟಕದಲ್ಲಿ ಸಂಚಲನವನ್ನೇ ಮೂಡಿಸಿದ್ದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೂವರು ನಿನ್ನೆ ತುಮಕೂರು ಜಿಲ್ಲಾ ಕಾರಾಗೃಹದಿಂದ ರಿಲೀಸ್ ಆಗಿದ್ದಾರೆ. ಆರೋಪಿಗಳಾದ ಕೇಶವಮೂರ್ತಿ, ನಿಖಿಲ್ ನಾಯಕ್ ಮತ್ತು ಕಾರ್ತಿಕ್ ಜಾಮೀನು ಮೂಲಕ ಜೈಲಿನಿಂದ ಆಚೆ ಬಂದಿದ್ದಾರೆ.
ಜಾಮಿನು ಸಿಕ್ಕ 10 ದಿನಗಳ ನಂತರ ಜೈಲಿನಿಂದ ಬಿಡುಗಡೆ!
ಕಳೆದ ಸಪ್ಟೆಂಬರ್ 23ಕ್ಕೆ ಮೂವರೆಗೂ ಜಾಮೀನು ಸಿಕ್ಕಿತ್ತು ಆದರೂ 10 ದಿನಗಳ ಬಳಿಕ ನ್ಯಾಯಾಲಯದ ಪ್ರೊಸೀಜರ್ ಮುಗಿಸಿ ಆಚೆ ಬಂದಿದ್ದಾರೆ. ಜೈಲಿನಿಂದ ಹೊರಗೆ ಬರುವ ಸಮಯದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಲು ಮೂವರು ಆರೋಪಿಗಳು ಮೊದಲು ನಿರಾಕರಿಸಿದರು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಂತರ ಉತ್ತರಿಸಿದ ಆರೋಪಿಗಳು “ನಮಗೆ ಜಾಮಿನಿಗೆ ಶ್ಯೂರಿಟಿದಾರರು ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಈಗ ಶ್ಯೂರಿಟಿ ಸಿಕ್ಕ ನಂತರ ಬಿಡುಗಡೆ ಆಗಿದ್ದೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ದರ್ಶನ್ ಕುಟುಂಬದವರು ನಮಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ನಮ್ಮ ಕುಟುಂಬದವರಿಂದ ನಮಗೆ ಈಗ ಶ್ಯೂರಿಟಿ ಸಿಕ್ಕಿದೆ. ಕೆಲಸ ಕಳೆದುಕೊಂಡ ಸಮಯದಲ್ಲಿ ಈ ರೀತಿ ಆದ್ದರಿಂದ ಸಮಸ್ಯೆ ಆಗಿತ್ತು ಎಂದು ಹೇಳಿದ್ದಾರೆ.
ಮತ್ತೊಬ್ಬ ಆರೋಪಿ ಮಾತನಾಡಿ “ನಾವು ಎಲ್ಲಾ ಸ್ಟೇಟ್ಮೆಂಟ್ ಕೋರ್ಟ್ ನಲ್ಲಿ ನೀಡಿದ್ದೇವೆ ತನಿಖೆಯಲ್ಲಿ ಕೋರ್ಟ್ ಗೆ ಅಗತ್ಯ ಇರುವ ಮಾಹಿತಿಯನ್ನು ನೀಡಿದ್ದೇವೆ ಅದಕ್ಕೆ ನಾವು ಬದ್ಧವಾಗಿದ್ದೇವೆ. ಬೇರೆನೂ ನಮಗೆ ಗೊತ್ತಿಲ್ಲ” ಎಂದು ಹೇಳಿ ಹೆಚ್ಚು ಮಾತನಾಡದೆ ಅಲ್ಲಿಂದ ಹೊರಟು ಹೋಗಿದ್ದಾರೆ. ಈ ಮೂವರ ಜೊತೆಗೆ ತುಮಕೂರು ಜೈಲಿನಲ್ಲಿದ್ದ ಆರೋಪಿ ರವಿಶಂಕರ್ ಇನ್ನೂ ಜೈಲಿನಲ್ಲಿಯೇ ಇರಬೇಕಾಗಿದೆ.