ಇಂದು ಬಡವರ್ಗದ ಜನತೆಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿ ಮಾಡ್ತಾ ಇದೆ. ಅದರಲ್ಲಿ ಮುಖ್ಯವಾಗಿ ಬಡವರ್ಗದ ಜನತೆಗೆ ಮನೆ ನಿರ್ಮಾಣ ಮಾಡಲು ಸಬ್ಸಿಡಿ ನೀಡುವ ಪಿಎಂ ಆವಾಸ್ ಯೋಜನೆ (PM Awas Yojana) ಕೂಡ ಒಂದು, ಯಾರೆಗೆಲ್ಲ ಸ್ವಂತ ಮನೆ ನಿರ್ಮಾಣ ಮಾಡಲು ಸಾಧ್ಯತೆ ಇಲ್ಲವೋ ಅಂತವರಿಗೆ ಈ ಪಿಎಂ ಆವಾಸ್ ಯೋಜನೆ ಮೂಲಕ ಆರ್ಥಿಕ ಸಹಾಯಧನ ವನ್ನು ಸರಕಾರ ಒದಗಿಸಲಿದೆ.
ಬಡತನ ರೇಖೆಗಿಂತ ಕೆಳಗಿರುವ ಮತ್ತು ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದ ಜನರು ಈ ಯೋಜನೆ (PM Awas Yojana) ಯ ಸದುಪಯೋಗ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಫಲಾನು ಭವಿಗಳಿಗೆ ಶೇ. 6.50 ಬಡ್ಡಿದರದಲ್ಲಿ ವಸತಿ ಸಾಲ ನೀಡಲಿದ್ದು ಮಧ್ಯಮ ಆದಾಯ ಗುಂಪು 1 ಕ್ಕೆ 6 ಲಕ್ಷದಿಂದ 12 ಲಕ್ಷ ರೂ,ಮಧ್ಯಮ ಆದಾಯ ಗುಂಪು 2 ಕ್ಕೆ 12 ಲಕ್ಷದಿಂದ 18 ಲಕ್ಷ ರೂ ಹಾಗೂ ಕಡಿಮೆ ಆದಾಯದ ಗುಂಪು 3ಗೆ ಲಕ್ಷದಿಂದ 6 ಲಕ್ಷ ರೂ, ಆರ್ಥಿಕವಾಗಿ ಹಿಂದುಳಿದ ವರ್ಗ ದವರಿಗೆ 3 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಿದೆ.
ಈ ಸಂದರ್ಭಗಳಲ್ಲಿ ಹಣ ಹಿಂಪಡೆಯಬಹುದು, ಸಾಲ ಪಡೆದ ವ್ಯಕ್ತಿಯು ಸಾಲವನ್ನ ಮರುಪಾವತಿಸಲು ಸಾಧ್ಯ ವಾಗದಿದ್ದರೆ ಸಬ್ಸಿಡಿ ಹಣ ಸರಕಾರ ಹಿಂಪಡೆಯಬಹುದು.
- ಅವನ ಖಾತೆಯು NPA ನನ್ ಪರ್ಫಾರ್ಮಿಂಗ್ ಅಸೆಟ್ ಆಗಲಿದ್ದು ಹಣ ಬಿಡುಗಡೆ ಯಾಗುವುದಿಲ್ಲ.
- ಸಬ್ಸಿಡಿ ಬಿಡುಗಡೆಯಾದ ನಂತರ ವೂ ಕಾರಣಾಂ ತರ ಗಳಿಂದ ಮನೆ ನಿರ್ಮಾಣ ಸ್ಥಗಿತಗೊಂಡರೆ ಹಣ ಬರಲ್ಲ.
- ಒಂದು ವರ್ಷದೊಳಗೆ ಅದಕ್ಕೆ ಬೇಕಾದ ದಾಖಲೆ ಪ್ರಮಾಣ ಪತ್ರವನ್ನು ನೀಡದಿದ್ದರೆ ಹಣ ವಾಪಸ್ಸು ಪಡೆಯಬಹುದು.
ಇವರು ಮಾತ್ರ ಅರ್ಹರು
- ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
- ಅರ್ಜಿದಾರರು ಸ್ವಂತ ಮನೆ ಹೊಂದಿರಬಾರದು.
- 18 ವರ್ಷಕ್ಕಿಂತ ಮೇಲ್ಪಟ್ಟ ವರಾಗಿರಬೇಕು.
- ಅರ್ಜಿದಾರರ ವಾರ್ಷಿಕ ಆದಾಯ ರೂ.03 ಲಕ್ಷದಿಂದ ರೂ.06 ಲಕ್ಷದ ನಡುವೆ ಇರಬೇಕು.