ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ತಮ್ಮ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದಿದ್ದಾರೆ. ಈಗ 2024 – 25 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು. ಇದಕ್ಕಾಗಿ ಅರ್ಹ ರೈತರು ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕೃಷಿ ಭಾಗ್ಯ ಯೋಜನೆ 2024- 25!
ಈ ಯೋಜನೆ ಅಡಿಯಲ್ಲಿ ರೈತರು ಜಮೀನಿನ ಕ್ಷೇತ್ರ ಬದು ನಿರ್ಮಾಣಕ್ಕೆ 80 ರಿಂದ 90%ವರೆಗೆ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೈತರು ಕನಿಷ್ಠ ಒಂದು ಎಕರೆ ಜಮೀನು ಹೊಂದಿರುವುದು ಕಡ್ಡಾಯವಾಗಿದೆ. ಒಂದು ಎಕರೆ ಜಮೀನು ಹೊಂದಿರುವವರು ಅಥವಾ ಅದಕ್ಕಿಂತ ಹೆಚ್ಚಿನ ಜಮೀನು ಹೊಂದಿರುವವರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆದುಕೊಳ್ಳಬಹುದು.
ಸೌಲಭ್ಯ ಮತ್ತು ಸಹಾಯಧನ
- ಕ್ಷೇತ್ರ ಬದು ನಿರ್ಮಾಣ – ಜನರಲ್ 80% ಸಹಾಯಧನ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ 90% ಸಹಾಯಧನ
- ಕೃಷಿ ಹೊಂಡ ನಿರ್ಮಾಣ – ಜನರಲ್ 80%, SC/ST 90%
- ನೀರು ಇಂಗದಂತೆ ಕಾಪಾಡಲು ಪಾಲಿಥಿನ್ ಹೊದಿಕೆ -ಜನರಲ್ 80%, SC/ST 90%
- ಕೃಷಿಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ – ಜನರಲ್ 40%, SC/ST 50%
- ಕೃಷಿ ಹೊಂಡದಿಂದ ನೀರು ಎತ್ತಲು ಬಳಸುವ ಡೀಸೆಲ್ ಅಥವಾ ಪೆಟ್ರೋಲ್ ಪಂಪ್ ಸೆಟ್ -ಜನರಲ್ 80%, SC/ST 90%
- ತುಂತುರು ನೀರಾವರಿ – ಎಲ್ಲ ವರ್ಗದ ರೈತರಿಗೆ 90% ಸಹಾಯಧನವನ್ನು ನೀಡಲಾಗುವುದು.
ಕೃಷಿ ಬಗ್ಗೆ ಯೋಜನೆಯ ಮೂಲ ಉದ್ದೇಶ ಕೃಷಿ ಹೊಂಡ ನಿರ್ಮಾಣ ಮಾಡುವುದು. ಇದರಿಂದ ರೈತರು ಸಂಕಷ್ಟದ ಸಮಯದಲ್ಲಿ ಸಂಗ್ರಹವಾಗಿರುವ ನೀರನ್ನು ತಮ್ಮ ಜಮೀನುಗಳಿಗೆ ಬಳಸಿಕೊಳ್ಳಬಹುದು ಎನ್ನುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ರೈತರು ತಕ್ಷಣ ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಲಭ್ಯ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.