BPL Card: ಮನೆಗೆ AC ಹಾಕಿಸಿದವರ BPL ಕಾರ್ಡ್ ರದ್ದಾಗಲಿದೆಯೇ ? ತನ್ನ ನಿರ್ಧಾರ ತಿಳಿಸಿದ ಸರ್ಕಾರ
BPL Card Cancellation Rules: ರೇಶನ್ ಕಾರ್ಡ್ ಎನ್ನುವುದು ಭಾರತೀಯ ಜನ ಜೀವನದಲ್ಲಿ ಕೆಲವು ಅಗತ್ಯ ದಾಖಲೆಯ ಸಾಲಿನಲ್ಲಿ ಒಂದು ಎನ್ನಬಹುದು. ಇಂದು ಬಡವರ್ಗದ ಸಾಮಾನ್ಯ ಜನರಿಗೆ ಸರಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರೆ ಅದಕ್ಕೆ BPL ರೇಶನ್ ಕಾರ್ಡ್ ಅನ್ನು ಕೇಳಲಾಗುವುದು. ಬಡತನ ರೇಖೆಗಿಂತ ಕೆಳಗೆ ಇದ್ದವರಿಗೆ BPL ರೇಶನ್ ಕಾರ್ಡ್ ಅನ್ನು ನೀಡಲಾಗುತ್ತಿದ್ದು ಇದರಿಂದಾಗಿ ಸಹಾಯಧನ , ಹೊಸ ಯೋಜನೆಗೆ ಮಾನ್ಯತೆ ಎಲ್ಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಒಂದು ಹರಿದಾಡುತ್ತಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಅನುಕೂಲ ಆಗಲಿ ಎಂಬ ಉದ್ದೇಶಕ್ಕೆ BPL ಕಾರ್ಡ್ ಅನ್ನು ನೀಡಲಾಗುತ್ತಿದ್ದು ಇದೀಗ ಯಾರ ಮನೆಯಲ್ಲಿ ಎಸಿ ಇರುತ್ತದೊ ಅಂತವರಿಗೆ BPL ಕಾರ್ಡ್ ಅಗತ್ಯವಿಲ್ಲ ಅಂತವರ BPLಕಾರ್ಡ್ ರದ್ದಾಗಲಿದೆ ಎಂದು ಕೆಲವು ಮಾಹಿತಿಯು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದೇ ತಿಳಿಯದಾಗಿದೆ ಎನ್ನಬಹುದು. ಹಾಗಾಗಿ ಈ ಮಾಹಿತಿ ನಿಮಗೆ ಬಹಳ ಸಹಕಾರಿ ಆಗುತ್ತದೆ.
ಎಸಿ ,ಕಾರ್ ಎಲ್ಲವೂ ಐಷಾರಾಮಿ ಸ್ವತ್ತುಗಳಾಗಿದ್ದು ಒಂದು ಕಾಲದಲ್ಲಿ ಶ್ರೀಮಂತರ ಬಳಿ ಮಾತ್ರವೇ ಇರುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ. ಅನೇಕ ಬ್ಯಾಂಕ್ ಮತ್ತು ಹಣಕಾಸಿನ ಮೂಲ ಸಂಸ್ಥೆಗಳು EMI ಮೇಲೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಸಿಗಲಿದೆ. ಹಾಗಾಗಿ ಬಡವರ್ಗದ ಸಾಮಾನ್ಯ ಕುಟುಂಬದಲ್ಲಿ ಕೂಡ ಕಾರ್ , ಎಸಿ ಎಲ್ಲವನ್ನು ಕೊಂಡುಕೊಳ್ಳುವ ಪ್ರಮಾಣ ಅಧಿಕ ಆಗಿದೆ. ಹಾಗಾಗಿ ಸರಕಾರ ಈತರವಾಗಿ ಎಸಿ ಹೊಂದಿದ್ದವರ ರೇಶನ್ ಕಾರ್ಡ್ ರದ್ದು ಮಾಡುವ ಕ್ರಮ ಸರಿಅಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಈ ಬಾರಿಯೇ ಅಧಿಕ
ಎಸಿ ಕೊಂಡು ಕೊಂಡ ಪ್ರಮಾಣ ಈ ಬಾರಿ ಅಧಿಕ ಎನ್ನಬಹುದು. ಈ ಸಲ ಬಂದ ಬೇಸಗೆಯೂ ಗರಿಷ್ಠ ತಾಪಮಾನ ಹೊಂದಿದ್ದ ಕಾರಣ ಮನೆಯಲ್ಲಿ ಇರುವುದೆ ಕಷ್ಟಕರವಾಗಿತ್ತು. ಹೀಗಾಗಿ EMI ಮೂಲಕ AC ಕೊಂಡು ಕೊಂಡವರ ಪ್ರಮಾಣ ಅಧಿಕ ಇದೆ. ಎಸಿ ಬಳಕೆ ಮಾಡುವವರಿಗೆ ಸರಕಾರದ ಗೃಹಜ್ಯೋತಿ ಸೌಲಭ್ಯ ಮಿಸ್ ಆಗುತ್ತದೆ ಎಂದು ಕೂಡ ಕೆಲವು ಸುದ್ದಿ ಹರಿದಾಡಿದರೂ ಸಹ AC ಬಳಕೆ ಮಾಡುವವರ ಹಾಗೂ ಅದನ್ನು ಖರೀದಿ ಮಾಡಿದ್ದವರ ಸಂಖ್ಯೆ ಈ ಬಾರಿಯೇ ಅಧಿಕ ಆಗಿದೆ ಎನ್ನಬಹುದು.
ಸರಕಾರ ಏನು ಅಂದಿದೆ?
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡಿದ್ದು ಎಸಿ, ಕಾರು ಇತ್ಯಾದಿ ಬಳಕೆ ಮೇಲೆ ಬಡತನ ರೇಖೆಗಿಂತ ಮೇಲಿದ್ದಾರೆ ಎಂದು ಹೇಳಲಾಗದು. ಈ ಬಗ್ಗೆ ಸರಕಾರ ಯಾವ ನಿರ್ಣಯವನ್ನು ಕೈಗೊಂಡಿಲ್ಲ. ಸುಳ್ಳು ದಾಖಲಾತಿ ನೀಡಿ BPL ರೇಶನ್ ಕಾರ್ಡ್ ಪಡೆದವರ ಸಂಖ್ಯೆ ಅಧಿಕ ಇದ್ದು ಅಂತವರ ಬಗ್ಗೆ ಸರ್ವೆ ನಡೆಸಲಾಗುತ್ತಿದೆ ಅಂತವರ ರೇಶನ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಸರಕಾರದ ಮಾಹಿತಿ ಮೂಲಗಳು ತಿಳಿಸಿದೆ. ಮುಂದಿನ ದಿನದಲ್ಲಿ ಎಸಿ ಬಳಕೆ ಮಾಡುವವರು ಬಡತನ ರೇಖೆಯಿಂದ ಹೊರಗುಳಿದು BPL ಕಾರ್ಡ್ ವಂಚಿತರಾಗ್ತೇವಾ ಎಂದು ನಾವು ಕಾದು ನೋಡಬೇಕು.