ಬಿಗ್ ಬಾಸ್ ಸೀಸನ್ 11 (Bigg Boss S11) ರ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ನೆನ್ನೆ ಅಷ್ಟೇ ಪ್ರಸಾರವಾಗಿದೆ. ಬಿಗ್ ಬಾಸ್ ನಲ್ಲಿ ಮೇನ್ ಅಟ್ರಾಕ್ಷನ್ ಅಂದ್ರೆ ಅದು ಕಿಚ್ಚನ ಪಂಚಾಯಿತಿ. ಪ್ರತಿವಾರ ಅದಕ್ಕಾಗಿಯೇ ವೀಕ್ಷಕರು ಕಾಯುತ್ತಿರುತ್ತಾರೆ. ಇಡೀ ವಾರ ಬಿಗ್ ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್ಗಳ ಸರಿ ತಪ್ಪುಗಳನ್ನು ಅಳೆದು ತೂಗಿ ಕಿಚ್ಚ ಸುದೀಪ್ ವಾರಾಂತ್ಯದಲ್ಲಿ ಮಾತನಾಡುತ್ತಾರೆ. ಅವರ ಮಾತು ಸಲಹೆ ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲದೆ ನೋಡುತ್ತಿರುವ ವೀಕ್ಷಕರಿಗೂ ಸಾಕಷ್ಟು ಸಮಾಧಾನ ಕೊಡುತ್ತದೆ.
ಈ ವಾರದ ಮೊದಲ ಕಿಚ್ಚನ ಪಂಚಾಯಿತಿಯಲ್ಲಿ ಲಾಯರ್ ಜಗದೀಶ್ (Lawyer Jagadish) ಗೆ ಕಿಚ್ಚ ಸುದೀಪ್ (Kiccha Sudeep) ಸಾಂಗ್ ಕೊಟ್ಟಿದಾರೆ. ‘ನಾನು ಮನಸ್ಸು ಮಾಡಿದ್ರೆ ಬಿಗ್ ಬಾಸ್ ಶೋ ನಿಲ್ಲಿಸುತ್ತೇನೆ. ಯಾರು ಇದನ್ನು ಬೆಂಬಲಿಸದಂತೆ ನೋಡಿಕೊಳ್ಳುತ್ತೇನೆ’ ಎಂದಲ್ಲ ಬಿಗ್ ಬಾಸ್ ಗೆ ಚಾಲೆಂಜ್ ಹಾಕಿದ್ದರು ಜಗದೀಶ್.
ಕಿಚ್ಚ ಶನಿವಾರ, ಈ ಬಗ್ಗೆ ಮಾತನಾಡಿ, ‘ಬಿಗ್ ಬಾಸ್ ಶೋ ನಿಲ್ಲಿಸುತ್ತೇನೆ ಎಂದು ನೀವು ಹೇಳಿದ್ದು ಒಂದು ಜೋಕ್ ಯಾಕಂದ್ರೆ ಅಷ್ಟು ಸುಲಭವಾಗಿ ಯಾರಾದ್ರೂ ಬಿಗ್ ಬಾಸ್ ನಿಲ್ಲಿಸಬಹುದಾಗಿದ್ದರೆ 10 ಸೀಸನ್ ನಡೀತಾ ಇರಲಿಲ್ಲ. ಒಳಗೆ ಕುಳಿತ ನೀವು ಬಿಗ್ ಬಾಸ್ ಇಂಪ್ರೂವೈಸ್ ಮಾಡಲು ಪ್ರಯತ್ನಿಸಬಹುದೇ ಹೊರತು ಬಿಗ್ ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಿಚ್ಚ ಸುದೀಪ್ ಖಡಕ್ಕಾಗಿ ಹೇಳಿದ್ದಾರೆ.
ಕಿಚ್ಚನ ಈ ಮಾತಿಗೆ ಕಂಟೆಸ್ಟೆಂಟ್ಗಳು ಖುಷಿಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ ಜೊತೆಗೆ ವೀಕ್ಷಕರಿಗೂ ಜಗದೀಶ್ ಗೆ ಸುದೀಪ್ ಟಾಂಗ ಕೊಟ್ಟಿದ್ದು ಮೆಚ್ಚುಗೆಯಾಗಿದೆ. ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಇದು ನನ್ನ ಗೇಮ್ ಸ್ಟಾಟರ್ಜಿ ಎಂದು ಹೇಳಿಕೊಳ್ಳುತ್ತಾ ಡಿಪೋಸ್ ಬಗ್ಗೆ ಸಾಕಷ್ಟು ಮಾತುಗಳನ್ನ ಆಡಿದ್ದರು. ಈ ಎಲ್ಲಾ ಮಾತುಗಳು ತಪ್ಪು ಎಂಬುದು ಅರಿವಾಗಿ ನಂತರ ಕ್ಷಮೆಯನ್ನು ಕೋರಿದ್ದಾರೆ.