ಬಿಗ್ ಬಾಸ್ ಸೀಸನ್ 11 (Bigg Boss S11) ಈ ಭಾರಿ ಆರಂಭದಲ್ಲಿಯೇ ಬಹಳಷ್ಟು ಕ್ರೇಜ್ ಹುಟ್ಟಿಸಿದೆ.ಮನೆಯಲ್ಲಿ ಜಗಳ ಮೀತಿ ಮೀರಿ ಹೋಗಿದ್ದು ಬಿಗ್ ಬಾಸ್ ವಾರ್ನಿಂಗ್ ಕೊಟ್ಟರು ಸ್ಪರ್ಧಿಗಳು ನಿಯಮ ಪಾಲಿಸುತ್ತಿಲ್ಲ.ಬಿಗ್ ಬಾಸ್ ಮಾತು ಕೇಳದೆಯೇ ಜಗಳ ತೆಗೆ ಯುತ್ತಿದ್ದಾರೆ.ಈಗಾಗಲೇ ಮನೆ ಯಿಂದ ಲಾಯರ್ ಜಗದೀಶ್ (Lawyer Jagadish) ಹಾಗೂ ರಂಜಿತ್ (Ranjith) ಅನ್ನು ಮನೆ ಯಿಂದ ಹೊರಹಾಕಲಾಗಿದೆ.
ಕಳೆದ ಒಂದು ವಾರದಿದಲೂ ಜಗದೀಶ್ ಅವರು ಸ್ಪರ್ಧಿಗಳ ಜತೆ ಜಗಳ ಮಾಡುತ್ತಲೇ ಬಂದಿದ್ದು ಇದರಿಂದ ಮನೆಯಲ್ಲಿ ಇತರ ಸ್ಪರ್ಧಿ ಗಳು ಕೂಡ ಜಗಳ ಮಾಡಿ ದ್ದಾರೆ.ಮಹಿಳಾ ಅಭ್ಯರ್ಥಿಗಳ ವಿರುದ್ಧ ಏಕ ವಚನ ಬಳಕೆ ಮಾಡಿದ್ದಾರೆ. ಇದರಿಂದಾಗಿ ಮನೆಯ ಸದಸ್ಯರ ಆಕ್ರೋಶ ಹೆಚ್ಚಾಗಿದ್ದು ಚೈತ್ರಾ, ಹಂಸ, ಮಾನಸ, ಭವ್ಯ, ರಂಜಿತ್. ಉಗ್ರಂ ಮಂಜು ಒಟ್ಟಾಗಿ ಲಾಯರ್ ಜಗದೀಶ್ ವಿರುದ್ಧ ಜಗಳ ತೆಗೆದಿದ್ದಾರೆ.
ಈ ವೇಳೆ ಸಿಟ್ಟಿನ ಆವೇಶದಲ್ಲಿ ರಂಜಿತ್, ಲಾಯರ್ ಜಗದೀಶ್ (Lawyer Jagadish) ಅವರನ್ನು ತಳ್ಳಿದ್ದಾರೆ. ಹಾಗಾಗಿ ಇಬ್ಬರು ಅಭ್ಯರ್ಥಿಗಳನ್ನು ಮನೆ ಯಿಂದ ಹೊರ ಹೋಗುವಂತೆ ಬಿಗ್ ಬಾಸ್ ಆದೇಶ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಟ್ಟಿನಿಂದ ಆದ ತಪ್ಪು ,ಇದಕ್ಕಾಗಿ ಮತ್ತೊಂದು ಅವಕಾಶ ನೀಡುವಂತೆ ರಂಜಿತ್ ಗಾಗಿ ಇತರ ಸ್ಪರ್ಧಿ ಗಳು ಬಿಗ್ ಬಾಸ್ಗೆ ಮನವಿ ಮಾಡಿದ್ದಾರೆ.
ಆದರೂ ಬಿಗ್ ಬಾಸ್ ಮನೆಯವರ ಮನವಿ ಕೇಳದೇ ಲಾಯರ್ ಜಗದೀಶ್ (Lawyer Jagadish) ಹಾಗೂ ರಂಜಿತ್ (Ranjith) ಅನ್ನು ಹೊರಹಾಕಿದ್ದಾರೆ. ಲಾಯರ್ ಜಗದೀಶ್ ಮತ್ತು ರಂಜಿತ್ ತಮ್ಮ ಬಟ್ಟೆ ಬರೆಗಳನ್ನು ಸೂಟ್ಕೇಸ್ನಲ್ಲಿ ತುಂಬಿಕೊಂಡು ಮನೆಯಿಂದ ಹೊರ ಬಂದಿದ್ದಾರೆ. ಈಗಾಗಲೇ ಲಾಯರ್ ಜಗದೀಶ್ ಅವರಿಗೆ ಸಾಕಷ್ಟು ಅಭಿ ಮಾನಿಗಳು ಇದ್ದು ಅಭಿಮಾನಿಗಳು ಬಿಗ್ ಬಾಸ್ ನಿರ್ಧಾರ ತಪ್ಪು ಎಂದಿದ್ದಾರೆ.
ಆದರೆ ಕೆಲವು ಮೂಲಗಳ ಪ್ರಕಾರ ಇವರನ್ನು ಹೊರಹಾಕಿಲ್ಲ. ಲಾಯರ್ ಜಗದೀಶ್ ಮತ್ತು ರಂಜಿತ್ ಅವರ ನ್ನು ಸೀಕ್ರೆಟ್ ರೂಮ್ಗೆ ಕಳು ಹಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಂದಿನ ಎಪಿಸೋಡ್ ನಲ್ಲಿ ಜಗದೀಶ್ ಅವರು ಇತರ ಸ್ಪರ್ಧಿ ಗಳಿಗೆ ಶಾಕ್ ನೀಡಲಿದ್ದಾರೆ.ಇಂದಿನ ಎಪಿಸೋಡ್ ನಲ್ಲಿ ವಾಪಸ್ಸು ಮನೆಗೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.