Agricultural Land: 1 ಎಕರೆಗಿಂತ ಕಡಿಮೆ ಕೃಷಿ ಭೂಮಿ ಇದ್ದವರಿಗೆ ಕೃಷಿ ಸಚಿವರ ಗುಡ್ ನ್ಯೂಸ್
![](https://karnatakatimes.com/wp-content/uploads/2024/07/Agriculture-Ministers-gives-good-news-for-those-who-have-less-than-1-acre-of-agricultural-land.jpg)
advertisement
ನಮ್ಮ ಭಾರತ ದೇಶ ಅನಾದಿಕಾಲದಿಂದಲೂ ಕೂಡ ಕೃಷಿ ಪ್ರಮುಖವಾಗಿ ಕಾಣಿಸಿಕೊಂಡಿರುವಂತಹ ದೇಶವಾಗಿದ್ದು ಸಾಕಷ್ಟು ವಿಧಾನದಲ್ಲಿ ಕೃಷಿಗೆ ಈಗಲೂ ಕೂಡ ಪ್ರಾಮುಖ್ಯತೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಭಾರತದಲ್ಲಿರುವಂತಹ ಒಂದೇ ಒಂದು ವ್ಯತ್ಯಾಸ ಅಂದ್ರೆ ಈ ಹಿಂದೆ ಸಾಂಪ್ರದಾಯಿಕ ವಿಧಾನದಲ್ಲಿ ಕೃಷಿ ಕೆಲಸಗಳನ್ನು ಮಾಡಲಾಗುತ್ತಿತ್ತು ಆದರೆ ಈಗ ಅಡ್ವಾನ್ಸ್ ಟೆಕ್ನಾಲಜಿಯ ಮೂಲಕ ಕಂಡುಬರುವಂತಹ ಕೆಲವೊಂದು ಉಪಕರಣಗಳನ್ನು ಬಳಸಿಕೊಂಡು ಕೃಷಿ ಕೆಲಸವನ್ನು ಮಾಡಲಾಗುತ್ತದೆ.
ಇನ್ನು ಈ ಬಗ್ಗೆ ನಾವು ಒಂದು ವಿಚಾರ ತಿಳಿದುಕೊಳ್ಳುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ವಿದ್ಯಾಭ್ಯಾಸದ ನೆಪದಲ್ಲಿ ಕೃಷಿ ಕೆಲಸವನ್ನು ಮಾಡುವುದನ್ನೇ ಮರೆತು ಬಿಡುತ್ತಿದ್ದಾರೆ ಅಥವಾ ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇದು ಹೀಗೆ ಮುಂದುವರೆಯುತ್ತಾ ಹೋದರೆ ಮುಂದಿನ ಪೀಳಿಗೆಗೆ ಯಾವುದೇ ರೀತಿಯ ಕೃಷಿಕರು ಕೂಡ ನಮ್ಮಲ್ಲಿ ಉಳಿಯೋದಿಲ್ಲ ಅನ್ನೋದು ಬೇಸರದ ವಿಚಾರವಾಗಿದೆ. ಯಾರನ್ನು ನೋಡಿದರೂ ಕೂಡ ಇಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು ಅನ್ನೋದಾಗಿ ಓಡಾಡ್ತಿರುತ್ತಾರೆ.
ಆದರೆ ಯಾರಿಗೂ ಕೂಡ ಕೃಷಿ ಮಾಡೋದಕ್ಕೆ ಇಷ್ಟವಿಲ್ಲ ಆದರೆ ಆ ಕೃಷಿಯಿಂದ ಬಂದಿರುವಂತಹ ಅಕ್ಕಿಯನ್ನು ಅನ್ನ ರೂಪದಲ್ಲಿ ಸೇವಿಸುವುದಕ್ಕೆ ಮಾತ್ರ ಮುಂದೆ ಬಂದು ನಿಲ್ತಾರೆ. ಕಷ್ಟಪಡದೆ ಹಾಗೂ ಕೃಷಿ ಮಾಡದೆ ಹೇಗೆ ತಾನೇ ಬೆಳೆಯನ್ನ ಬೆಳೆಯುವುದಕ್ಕೆ ಸಾಧ್ಯ.
ಒಂದು ಎಕರೆಗಿಂತ ಕಡಿಮೆ ಭೂ ಪ್ರದೇಶ ಇರುವಂತಹ ರೈತರಿಗೆ ಸಚಿವರಿಂದ ಗುಡ್ ನ್ಯೂಸ್!
advertisement
![](https://karnatakatimes.com/wp-content/uploads/2024/07/Agricultural-Land-300x156.jpg)
ಸಾಕಷ್ಟು ಜನರಿಗೆ ಕೃಷಿ ಮಾಡುವಂತಹ ಆಸಕ್ತಿ ಇದ್ದರೂ ಕೂಡ ಹೆಚ್ಚಿನ ಕೃಷಿ ಭೂಮಿ ಇರೋದಿಲ್ಲ ಎನ್ನುವಂತಹ ಬೇಸರ ಇರುತ್ತೆ. ಇನ್ನು ಕೃಷಿ ಸಚಿವರು ಈ ವಿಚಾರದ ಬಗ್ಗೆ ಯೋಚನೆ ಮಾಡಿದ್ದು ಅದೇ ಕಾರಣಕ್ಕಾಗಿ ಒಂದು ಪರಿಹಾರ ನೀಡುವಂತಹ ಕೆಲಸವನ್ನು ಮಾಡುವುದಕ್ಕೆ ಕೂಡ ಹೊರಟಿದ್ದಾರೆ ಎನ್ನುವಂತಹ ಮಾಹಿತಿಗಳು ಕೇಳಿ ಬರುತ್ತಿದೆ ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ತಿಳಿದಿಲ್ಲ.
ಹೌದು ಅರಣ್ಯ ಪ್ರದೇಶವನ್ನು ಕೃಷಿ ಭೂಮಿ (Agricultural Land) ಯನ್ನಾಗಿ ಪರಿವರ್ತಿಸಿ ಅದರಲ್ಲಿ ಕೃಷಿ ಮಾಡುವುದಕ್ಕೆ ಆಸಕ್ತಿ ಇರುವಂತಹ ರೈತರಿಗೆ ಅವಕಾಶ ಮಾಡುವಂತಹ ಕೆಲಸವನ್ನು ಮುಂದಿನ ಭವಿಷ್ಯದ ದಿನಗಳಲ್ಲಿ ಸರ್ಕಾರ ಮಾಡಲು ಹೊರಟಿದೆ ಎನ್ನುವಂತಹ ಮಾಹಿತಿ ಕೇಳಿ ಬರುತ್ತಿದೆ. ಒಂದು ವೇಳೆ ಈ ಮಾಹಿತಿ ನಿಜವಾಗಿದ್ದೆ ಆದಲ್ಲಿ ಖಂಡಿತವಾಗಿ ಕೃಷಿಯ ಆಸಕ್ತಿಯನ್ನು ಹೊಂದಿರುವಂತಹ ರೈತರಿಗೆ ಒಂದು ಒಳ್ಳೆ ಸುದ್ದಿ ಎಂದು ಹೇಳಬಹುದು. ಕೃಷಿಯನ್ನು ಮುಂದುವರಿಸಿಕೊಂಡು ಹೋಗುವಂತಹ ಆಸಕ್ತಿಯನ್ನು ಹೊಂದಿರುವಂತಹ ರೈತರಿಗೆ ಒಂದೊಳ್ಳೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ಭವಿಷ್ಯದಲ್ಲಿ ಖಂಡಿತವಾಗಿ ಈ ರೀತಿಯ ಸೌಲಭ್ಯಗಳನ್ನು ಆಸಕ್ತಿ ಹೊಂದಿರುವಂತಹ ರೈತರಿಗೆ ನೀಡುವ ಮೂಲಕ ದೇಶದಲ್ಲಿ ಕೃಷಿ ಕ್ರಾಂತಿಯನ್ನು ಮಾಡುವಂತಹ ಸಾಧ್ಯತೆಯನ್ನು ಕೂಡ ಇದು ಹೊಂದಿದೆ. ಧಾನ್ಯಗಳನ್ನು ಬೆಳೆಯುವ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಕಾಂಪಿಟೇಶನ್ ನೀಡುವಂತಹ ವಿಚಾರದಲ್ಲಿ ಕೂಡ ಭಾರತ ಮುಂದಕ್ಕೆ ಹೋಗಲಿದೆ.
advertisement