KSRTC: KSRTC ಬಸ್ ನಲ್ಲಿ ಮಹಿಳೆಯರಿಗೆ ಹೊಸ ದಂಡ ಪರಿಚಯಿಸಿದ ಸರ್ಕಾರ! ರಾಜ್ಯಾದ್ಯಂತ ಆದೇಶ
![](https://karnatakatimes.com/wp-content/uploads/2024/07/Govt-introduces-new-fine-for-women-in-KSRTC-bus.jpg)
advertisement
ಒಂದುವರೆ ವರ್ಷದಿಂದ ರಾಜ್ಯದಲ್ಲಿರುವಂತಹ ಕಾಂಗ್ರೆಸ್ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪು ಹಾಗೆ ಮಾಡುವ ಮೂಲಕ ಜನಪ್ರಿಯ ಸರ್ಕಾರ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. ಆರಂಭದಲ್ಲಿ ಈ ಯೋಜನೆಗಳನ್ನ ವಿರೋಧಿಸಿದವರು ಕೂಡ ಈಗ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಅನ್ನೋದ್ರಲ್ಲಿಯೇ ನಾವು ಇದನ್ನು ಅರ್ಥಮಾಡಿಕೊಳ್ಳಬಹುದು.
ಅದರಲ್ಲೂ ವಿಶೇಷವಾಗಿ ಶಕ್ತಿ ಯೋಜನೆಯ (Shakti Yojana) ಹೆಸರಿನಲ್ಲಿ ಮಹಿಳೆಯರಿಗೆ ಕೆಎಸ್ಆರ್ಟಿಸಿ (KSRTC) ನಿಗಮದ ಸಾಮಾನ್ಯ ಬಸ್ಸುಗಳಲ್ಲಿ ರಾಜ್ಯದ ಒಳಗೆ ಎಲ್ಲಿ ಬೇಕಾದರೂ ಕೂಡ ಉಚಿತವಾಗಿ ಬಸ್ ಪ್ರಯಾಣ (Free Bus Travel) ಮಾಡಬಹುದು ಎನ್ನುವಂತಹ ಯೋಜನೆಯ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರಲಾಗಿತ್ತು. ಇದರಿಂದಾಗಿ ಆರಂಭಿಕ ದಿನಗಳಲ್ಲಿ ಮುಜರಾಯಿ ಇಲಾಖೆಗೆ ಈ ರೀತಿಯ ಯೋಜನೆಯ ಜಾರಿಗೆ ತಂದಿರುವ ಕಾರಣದಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆದಾಯ ಹರಿದು ಬರುತ್ತಿದೆ ಎನ್ನುವಂತಹ ಸುದ್ದಿಯನ್ನು ಕೂಡ ಹರಿ ಬಿಡಲಾಗಿತ್ತು.
ನಂತರದ ದಿನಗಳಲ್ಲಿ ಈ ಯೋಜನೆಯಿಂದಾಗಿ ಕೆಎಸ್ಆರ್ಟಿಸಿ (KSRTC) ನಿಗಮಕ್ಕೆ ನಷ್ಟಾಗುತ್ತಿದೆ ಎನ್ನುವಂತಹ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು ಎನ್ನುವುದರಲ್ಲಿ ಕೂಡ ಯಾವುದೇ ಅನುಮಾನವಿಲ್ಲ. ಅದೆಲ್ಲ ಬಿಡಿ ಈಗ ಕೇಳಿ ಬರುತ್ತಿರುವಂತಹ ಹೊಸ ಅಪ್ಡೇಟ್ ಪ್ರಕಾರ ಇನ್ಮುಂದೆ ಯಾರು ಕೂಡ ಇದೊಂದು ವಿಚಾರ ತಿಳಿಯದೆ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಪಡೆದುಕೊಳ್ಳುವುದಕ್ಕೆ ಹೋದರೆ ಟಿಕೆಟ್ಗೆ ಹಣ ನೀಡಬೇಕಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಿ.
ಈ ಸಂದರ್ಭದಲ್ಲಿ ಮಹಿಳೆಯರು ಕೂಡ ಉಚಿತ ಬಸ್ ಪ್ರಯಾಣಕ್ಕೆ ಟಿಕೆಟ್ ಗೆ ಹಣ ನೀಡಬೇಕಾಗುತ್ತದೆ:
![](https://karnatakatimes.com/wp-content/uploads/2024/07/KSRTC-Bus-Rules-300x156.jpg)
advertisement
ಹೌದು ಉಚಿತ ಬಸ್ ಪ್ರಯಾಣ (Free Bus Travel) ಮಾಡುವ ಸಂದರ್ಭದಲ್ಲಿ ಕನಿಷ್ಠಪಕ್ಷ ಗುರುತು ಪತ್ರದ ರೂಪದಲ್ಲಿ ಆಧಾರ್ ಕಾರ್ಡ್ (Aadhaar Card) ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ ಅನ್ನೋದಾಗಿ ಈಗಾಗಲೇ ಸಾರಿಗೆ ಇಲಾಖೆ ಶಕ್ತಿ ಯೋಜನೆ (Shakti Yojana) ಯ ವಿಚಾರದಲ್ಲಿ ಮಹಿಳೆಯರಿಗೆ ಸೂಚನೆಯನ್ನು ನೀಡಿರುವುದು ನಿಮಗೆಲ್ಲರಿಗೂ ಗೊತ್ತಿರಬಹುದು.
ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಮತ್ತೊಂದು ಪ್ರಮುಖ ವಿಚಾರವನ್ನು ಹೇಳುವುದಕ್ಕೆ ಹೊರಟಿದ್ದೇವೆ. ಅದೇನೆಂದರೆ ಯಾವುದೇ ಕಾರಣಕ್ಕೂ ಎಕ್ಸ್ಪೈರಿ ಆಗಿರುವಂತಹ ಆಧಾರ್ ಕಾರ್ಡ್ ಅನ್ನು ಹೊಂದುವುದು ಕೂಡ ನಿಮಗೆ ಈ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಅಪಾಯವನ್ನು ತಂದು ಕೊಡುವಂತಹ ಸಾಧ್ಯತೆ ಇದೆ.
![](https://karnatakatimes.com/wp-content/uploads/2024/07/Aadhaar-Card-Update-300x156.jpg)
ಹೌದು ಅಪ್ಡೇಟ್ ಮಾಡದೇ ಇರುವಂತಹ ಸಾಕಷ್ಟು ವರ್ಷಗಳ ಕಾಲ ಹಳೆಯದಾಗಿರುವಂತಹ ಆಧಾರ್ ಕಾರ್ಡ್ (Aadhaar Card) ಅನ್ನು ನೀವು ಹೊಂದಿದ್ದು ಅದನ್ನು ಶಕ್ತಿ ಯೋಜನೆಗೆ ಉಪಯೋಗಿಸಿಕೊಳ್ಳುತ್ತೀರಿ ಅಂತ ಆದರೆ ಮುಂದಿನ ದಿನಗಳಲ್ಲಿ ಬಸ್ ನಿರ್ವಾಹಕರು ಇದನ್ನು ಅಮಾನ್ಯಗೊಳಿಸುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ಈ ರೀತಿಯ ಆಧಾರ್ ಕಾರ್ಡ್ ಗಳನ್ನು ಶಕ್ತಿಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣಕ್ಕಾಗಿ (Free Bus Travel) ಬಳಸಿದರೇ ಮುಂದಿನ ದಿನಗಳಲ್ಲಿ ಟಿಕೆಟ್ ಗೆ ನೀವು ಉಚಿತವಾಗಿ ಬಸ್ ಪ್ರಯಾಣ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ ಬದಲಾಗಿ ಆ ಟಿಕೆಟ್ ಮೌಲ್ಯದ ಹಣವನ್ನು ನೀಡಲೇಬೇಕಾಗುತ್ತದೆ. ಇನ್ನು ಟಿಕೆಟ್ ಅನ್ನು ಪಡೆದುಕೊಂಡ ನಂತರ ಕೂಡ ಅದನ್ನು ನೀವು ಹೋಗುವ ಸ್ಥಳದವರೆಗೂ ಕೂಡ ಜೋಪಾನವಾಗಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಇಲ್ಲವಾದಲ್ಲಿ ಅದರ ಮೇಲೆ ಕೂಡ ಫೈನ್ ಬೀಳುವ ಸಾಧ್ಯತೆ ಇದೆ.
advertisement