ದೇಶಾದ್ಯಂತ ಬಡವರಿಗೆ, ಬಡತನ ರೇಖೆಗಿಂತ ಕೆಳಗಿರುವವರಿಗೆ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಒದಗಿಸಿ ಕೊಡುವ ಸಲುವಾಗಿ ಪಡಿತರ ಚೀಟಿ (Ration Card) ಯನ್ನು ಆರಂಭಿಸಲಾಗಿದೆ. ಪಡಿತರ ಚೀಟಿಯಲ್ಲಿ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಎನ್ನುವ ಮೂರು ವಿಭಾಗಗಳನ್ನು ಮಾಡಿ ಆಯಾ ವರ್ಗದ ಜನರಿಗೆ ಅನುಕೂಲವಾಗುವಂತೆ ಈ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವವರು ಅಂತ್ಯೋದಯ (Antyodaya Card) ಮತ್ತು ಬಿಪಿಎಲ್ ಕಾರ್ಡ್ (BPL Card) ಪಡೆದುಕೊಳ್ಳಬಹುದು ಹಾಗೂ ಮೇಲ್ವರ್ಗದವರಿಗೆ ಎಪಿಎಲ್ ಕಾರ್ಡ್ (APL Card) ಕೊಡಲಾಗುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಂಡಿರುವವರಿಗೆ ಸಾಕಷ್ಟು ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಿಗುತ್ತವೆ. ಎಪಿಎಲ್ ಕಾರ್ಡ್ ಅನ್ನು ಹೆಚ್ಚಾಗಿ ಕೇವಲ ಗುರುತಿನ ಚೀಟಿಯಾಗಿ ಮಾತ್ರ ಬಳಸಿಕೊಳ್ಳಬಹುದು ಹೊರತು ಯಾವುದೇ ರೀತಿಯ ಸಬ್ಸಿಡಿಗಳು ಈ ಕಾರ್ಡ್ದಾರರಿಗೆ ಸಿಗುವುದಿಲ್ಲ.
ಪಡಿತರ ಚೀಟಿ ಪ್ರಯೋಜನಗಳು!
- ಆರೋಗ್ಯ ವಿಮೆ ಸೌಲಭ್ಯ
- ಉಚಿತಪಡಿತರ ವಿತರಣೆ
- ಸಬ್ಸಿಡಿ ದರದಲ್ಲಿ ಸಾಲ
- ಸರ್ಕಾರದ ಯಾವುದೇ ಯೋಜನೆಗಳಿಗೆ ನೇರವಾಗಿ ಪಾಲುದಾರರಾಗಬಹುದು
- ಮಕ್ಕಳ ಶಿಕ್ಷಣಕ್ಕೆ ಅನುಕೂಲ
- ಕೈಗೆಟುಕುವ ದರದಲ್ಲಿ ಪಡಿತರ ವಸ್ತುಗಳು ದೊರೆಯುತ್ತವೆ
- ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು
ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕೂಡ ಸರ್ಕಾರ ಗೊಂದಲ ಒಂದು ರೀತಿಯಲ್ಲಿ ನೆರವು ನೀಡುತ್ತಿದ್ದು ಈಗ ಪಡಿತರ ಚೀಟಿ ಹೊಂದಿರುವವರು ಸರ್ಕಾರದಿಂದ ಹೆಚ್ಚಿನ ಬೆನಿಫಿಟ್ ಪಡೆದುಕೊಳ್ಳುತ್ತಿದ್ದಾರೆ. ಕುಟುಂಬದ ಯಜಮಾನನ ಹೆಸರಿನಲ್ಲಿ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ರೇಷನ್ ಕಾರ್ಡ್ (Ration Card) ವಿತರಣೆ ಮಾಡಲಾಗುತ್ತದೆ. ಇದಕ್ಕೂ ಕೆಲವು ಮಾನದಂಡಗಳಿದ್ದು, ಅದರ ಅಡಿಯಲ್ಲಿ ಬರುವವರಿಗೆ ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ರೇಷನ್ ಕಾರ್ಡ್ ನಿಂದ ಸಿಗುತ್ತೆ ಈ ಎಲ್ಲ ಸೌಲಭ್ಯ!
- ಬೆಳೆ ವಿಮೆ
- ಆರೋಗ್ಯ ವಿಮೆ
- ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಉಚಿತ ಗ್ಯಾಸ್ ಕನೆಕ್ಷನ್ ಗೆ ಅರ್ಜಿ ಸಲ್ಲಿಸಬಹುದು.
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು
- ಶ್ರಮಿಕ್ ಕಾರ್ಡ್ ಯೋಜನೆಯ ಅಡಿಯಲ್ಲಿ ಕಾರ್ಮಿಕರು ಶ್ರಮಿಕ ಕಾರ್ಡ್ ಪಡೆದುಕೊಂಡು ಅದರ ಅಡಿಯಲ್ಲಿ ಸರ್ಕಾರದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು
- ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಶಾಶ್ವತ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದು.
- ಉಚಿತ ರೇಶನ್
- ಮಹಿಳೆಯರಿಗೆ ಉಚಿತ ಹೋಲಿಕೆ ಯಂತ್ರ ವಿತರಣೆ
ಈ ಎಲ್ಲಾ ಪ್ರಯೋಜನಗಳನ್ನು ರೇಷನ್ ಕಾರ್ಡ್ ಹೊಂದಿರುವವರಿಗೆ ಭಾರತ ಸರ್ಕಾರ ಒದಗಿಸುತ್ತಿದೆ ರಾಷ್ಟ್ರೀಯ ಆಹಾರ ಇಲಾಖೆ ಸಂಬಂಧಪಟ್ಟವರಿಗೆ ರೇಷನ್ ಕಾರ್ಡ್ ಒದಗಿಸುತ್ತದೆ.