Narendra Modi: ಈಗಾಗಲೇ BPL ಕಾರ್ಡ್ ಮಾಡಿಸಿಕೊಂಡವರಿಗೆ ಮೋದಿ ಮಹತ್ವದ ಮನವಿ! ಮುಗಿಬಿದ್ದ ಜನ
![](https://karnatakatimes.com/wp-content/uploads/2024/06/Narendra-Modi-has-an-important-request-for-those-who-have-already-made-BPL-card.jpg)
advertisement
ಕೆಳ ಹಾಗೂ ಮಧ್ಯಮ ವರ್ಗದ ಜನರ ಅಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಬಿಡುಗಡೆಗೊಳಿಸಲುತ್ತಲೆ ಇರುತ್ತದೆ ಇದರಿಂದ ಹಲವರು ಹೆಚ್ಚಿನ ಅನುಕೂಲಗಳನ್ನು ಪಡೆದು ಸರ್ಕಾರದಿಂದ ಸಿಗುವಂತಹ ಸಾಮಾನ್ಯ ಸೌಲಭ್ಯ ಗಳನ್ನು ಉಪಯೋಗಿಸುತ್ತಾ ಜೀವನ ನಡೆಸಲಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವಂತಹ ವ್ಯಕ್ತಿಗೆ 5 ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ನಿಮ್ಮ ಬಳಿ ಬಿಪಿಎಲ್ ಕಾರ್ಡ್ (BPL Card) ಇದ್ದರೆ ಅಥವಾ ಬಿಪಿಎಲ್ ಪಡಿತರ ಚೀಟಿಯನ್ನು ಮಾಡಿಸಲು ಚಿಂತಿಸುತ್ತಿದ್ದಾರೆ ಕೂಡಲೇ ರೇಶನ್ ಕಾರ್ಡ್ ಮಾಡಿಸಿಕೊಂಡು ಈ ಐದು ದೊಡ್ಡ ಯೋಜನೆಗಳಿಗೆ ಅರ್ಜಿ ಸಲ್ಲಿಸುವಂತೆ ನರೇಂದ್ರ ಮೋದಿ (Narendra Modi) ಯವರು ಅರ್ಹ ನಾಗರಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
Ayushman Bharat Yojana:
![](https://karnatakatimes.com/wp-content/uploads/2024/06/Ayushman-Bharat-Yojana-300x156.jpg)
ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿರುವ ಯೋಜನೆಯಿದಾಗಿದ್ದು ಪಡಿತರ ಚೀಟಿಯಲ್ಲಿ ಇರುವಂತಹ ಎಲ್ಲಾ ಕುಟುಂಬಸ್ಥರಿಗೂ ಎಲ್ಲಾ ಆಸ್ಪತ್ರೆಗಳಲ್ಲಿ 5 ವರೆಗೂ ಚಿಕಿತ್ಸೆಯನ್ನು ನೀಡಲಾಗುವುದು. ಬಿಪಿಎಲ್ ಕಾರ್ಡ್ ಉಪಯೋಗಿಸಿಕೊಂಡು ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಆಯುಷ್ಮಾನ್ ಕಾರ್ಡನ್ನು ಪಡೆದುಕೊಂಡಿದೆ ಅನಿವಾರ್ಯ ಸಮಯದಲ್ಲಿ 5 ಲಕ್ಷದವರೆಗೂ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.
PM Ujjwala Yojana:
![](https://karnatakatimes.com/wp-content/uploads/2024/06/PM-Ujjwala-Yojana-1-300x156.jpg)
ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ಉಚಿತ ಗ್ಯಾಸ ಸಿಲಿಂಡರ್ (Free Gas Cylinder) ನೀಡುವ ಸಲುವಾಗಿ ಈ ಯೋಜನೆಯನ್ನು ಹಲವು ವರ್ಷಗಳ ಹಿಂದೆ ಜಾರಿಗೊಳಿಸಿದರು. ಇದೀಗ ಪಿಎಂ ಉಜ್ವಲ 3.0 ಪ್ರಾರಂಭವಾಗಿದ್ದು ಬಿಬಿಎಲ್ ಪಡಿತರ ಚೀಟಿ ಹೊಂದಿರುವಂತಹ ಎಲ್ಲರೂ ಈ ಉಜ್ವಲ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕೂಡಲೇ ಬಿಪಿಎಲ್ ಪಡಿತರ ಚೀಟಿಯನ್ನು ಉಪಯೋಗಿಸಿಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ ಹಾಗೂ ಉಚಿತ ಅನಿಲದ ಸೌಲಭ್ಯವನ್ನು ಪಡೆದುಕೊಳ್ಳಿ.
PM Vishwakarma Yojana:
advertisement
![](https://karnatakatimes.com/wp-content/uploads/2024/06/PM-Vishwakarma-Yojana-300x156.jpg)
ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಜನರಿಗೆ ಈ ಯೋಜನೆಯನ್ನು ನಿಗದಿಪಡಿಸಲಾಗಿದ್ದು, ಕೈಯಿಂದ ಕೆಲಸ ಮಾಡುವಂತಹ ಕಾರ್ಮಿಕರಿಗೆ ಹೆಚ್ಚಿನ ಆಸಕ್ತಿ ಇರುವಂತಹ ಕೆಲಸದಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ ನಂತರ 3 ಲಕ್ಷ ರೂಪಾಯಿ ಸಾಲವನ್ನು ನೀಡಿ ಸ್ವಂತ ಉದ್ಯಮ ಪ್ರಾರಂಭಿಸಲು ಸರ್ಕಾರ ಪ್ರೋತ್ಸಾಹಿಸುತ್ತಾರೆ. ಜೊತೆಗೆ ಪಿಎಂ ವಿಶ್ವಕರ್ಮ ಯೋಜನೆಯಡಿ (PM Vishwakarma Yojana) ಟೂಲ್ ಕಿಟ್ ರೂಪದಲ್ಲಿ 15000 ರೂಪಾಯಿ ಹಣವನ್ನು ನೀಡುತ್ತಾರೆ.
Antyodaya Anna Yojana:
![](https://karnatakatimes.com/wp-content/uploads/2024/06/Antyodaya-Anna-Yojana-300x156.jpg)
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೋನ ಸಾಂಕ್ರಾಮಿಕ ಸಮಯದಲ್ಲಿ ಈ ಯೋಜನೆಯನ್ನು ಜಾರಿಗೆ ತಂದರು. ಬಿಪಿಎಲ್ ಪಡಿತರ ಚೀಟಿ (BPL Ration Card) ಯನ್ನು ಹೊಂದಿರುವ ಕೆಳ ಹಾಗೂ ಮಧ್ಯಮ ವರ್ಗದ ಜನರು ಉಚಿತ ಪಡಿತರವನ್ನು ಪಡೆದುಕೊಳ್ಳಬಹುದು ಈ ಯೋಜನೆಯಡಿ ಒಬ್ಬ ವ್ಯಕ್ತಿಗೆ ಪ್ರತಿ ತಿಂಗಳು 5KG ಅಕ್ಕಿ ಹಾಗೂ ಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.
PM Awas Yojana:
![](https://karnatakatimes.com/wp-content/uploads/2024/06/PM-Awas-Yojana-1-300x156.jpg)
ಮನೆ ಇಲ್ಲದೆ ಪರದಾಡುತ್ತಿರುವ ಭಾರತೀಯ ಬಡ ನಾಗರಿಕರ ಕಷ್ಟವನ್ನು ಅರಿತ ನರೇಂದ್ರ ಮೋದಿಯವರು ಕೆಲವು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದರು ಯೋಜನೆಯ ಅಡಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಹೆಚ್ಚಿನ ಬಡ ಕುಟುಂಬಗಳಿಗೆ ಸ್ವಂತ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ನಿಮ್ಮ ಬಳಿ ಬಿಪಿಎಲ್ ಪಡಿತರ ಚೀಟಿ ಇದ್ದು ಸ್ವಂತ ಮನೆ ಇಲ್ಲದೆ ಹೋದರೆ ಕೂಡಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (PM Awas Scheme) ಅರ್ಜಿ ಸಲ್ಲಿಸಿ ಇದರ ಸೌಲಭ್ಯವನ್ನು ಪಡೆದುಕೊಳ್ಳಿ.
advertisement