Free Bus Travel: ಫ್ರಿ ಬಸ್ ಕೊಟ್ಟ ಹಲವು ತಿಂಗಳ ಬಳಿಕ ಸರ್ಕಾರದಿಂದ ಇನ್ನೊಂದು ಗುಡ್ ನ್ಯೂಸ್!
![](https://karnatakatimes.com/wp-content/uploads/2024/06/Another-good-news-from-the-govt-after-many-months-of-giving-free-bus-travel.jpg)
advertisement
ಈ ಭಾರೀ ರಾಜ್ಯ ಸರಕಾರವು ಮಹಿಳೆಯರ ಹಿತದೃಷ್ಟಿಯಿಂದ ಮಹಿಳಾ ಪರ ಎರಡು ಯೋಜನೆಯನ್ನು ಜಾರಿಗೆ ತಂದಿದೆ.ಅದರಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ (Shakti Yojana) ಕೂಡ ಆಗಿದೆ. ಶಕ್ತಿ ಯೋಜನೆ ಬಂದ ಮೇಲೆ ಮಹಿಳಾ ಪ್ರಯಾಣಿಕರ ಪ್ರಯಾಣ ಹೆಚ್ಚಾಗಿದೆ. ಈಗಾಗಲೇ ಸರಕಾರಿ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಹಾವಳಿ ಎಂದು ಹೇಳಬಹುದು. ಇದೀಗ ಶಕ್ತಿ ಯೋಜನೆಯ ಮೂಲಕ ಸಾರಿಗೆ ಇಲಾಖೆಯ ಆದಾಯ ಹೆಚ್ಚಳ ವಾಗಿದೆ.
ಎಷ್ಟು ಹೆಚ್ಚಳ ವಾಗಿದೆ:
![](https://karnatakatimes.com/wp-content/uploads/2024/06/Shakti-Yojana-2-300x156.jpg)
ಶಕ್ತಿ ಯೋಜನೆ (Shakti Yojana) ಯಿಂದಾಗಿ ಸಾರಿಗೆ ಇಲಾಖೆಯ ಆದಾಯ ಹೆಚ್ಚಿದ್ದು ಕೆಎಸ್ಆರ್ಟಿಸಿ (KSRTC) ಯ ಒಟ್ಟು ಆದಾಯ 2016 ರಲ್ಲಿ 2,738 ಕೋಟಿ ರೂ., 2017 ರಲ್ಲಿ 2,975 ಕೋಟಿ ರೂ.ಆಗಿತ್ತು. 2018 ರಲ್ಲಿ 3,131 ಕೋಟಿ ರೂ ಹೀಗೆ ಇತ್ತು. ಶಕ್ತಿ ಯೋಜನೆ ನಂತರ 2023 ರ ಆದಾಯವು ರೂ 3,930 ಕೋಟಿ ಆದಾಯ ಆಗಿದ್ದು 2023ರ ಜೂನ್ನಿಂದ 2024ರ ಮೇ ವರೆಗೆ ಒಟ್ಟು 4,809 ಕೋಟಿ ರೂ.ಗಳ ಆದಾಯವಾಗಿದೆ.
ಇದನ್ನು ಓದಿ: ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗಡೆ ಈ ಸ್ಕೀಮ್ ಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ
ಪರಿಣಾಮಕಾರಿಯಾಗಿ ಅನುಷ್ಠಾನ:
ಶಕ್ತಿ ಯೋಜನೆ (Shakti Yojana) ಯಿಂದಾಗಿ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಡಬಲ್ ಆಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಸಾರಿಗೆ ಸೌಲಭ್ಯ ಕಲ್ಪಿಸಲು ಈಗಾಗಲೇ ಹೊಸ ಬಸ್ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ.
advertisement
ಹಾಗೂ ಸಿಬ್ಬಂದಿಯನ್ನು ಕೂಡ ನೇಮಕ ಮಾಡಲಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರತಿ ನಿತ್ಯ 2 ಲಕ್ಷಕ್ಕೂ ಅಧಿಕ ಪ್ರಯಾಣಿಕರು ದಿನ ನಿತ್ಯ ಪ್ರಯಾಣ ಮಾಡ್ತಾ ಇದ್ದು ಸುಮಾರು 1 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆ ಜಾರಿ ಬಳಿಕ ಕೆಎಸ್ಆರ್ಟಿಸಿ (KSRTC) ಬಸ್ಗಳಲ್ಲಿ ಸಂಚರಿಸುವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದು.
ಇದನ್ನು ಓದಿ: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು
ಈ ಗುಡ್ ನ್ಯೂಸ್ ಕೂಡ ನೀಡಿದೆ:
![](https://karnatakatimes.com/wp-content/uploads/2024/06/Free-Bus-Travel-300x156.jpg)
ಈ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮ ಕೆಎಸ್ಆರ್ಟಿಸಿ (KSRTC), ಎನ್ಡಬ್ಲೂಕೆಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಈಗಾಗಲೇ ಶಕ್ತಿ ಯೋಜನೆ ಮೂಲಕ ಮಹಿಳೆಯರು ವರ್ಜಿನಲ್ ಆಧಾರ್ ಕಾರ್ಡ್ (Aadhaar Card) ತೋರಿಸುವ ಮೂಲಕ ಉಚಿತ ಪ್ರಯಾಣ (Free Bus Travel) ಮಾಡುತ್ತಿದ್ದರು.ಆದರೆ ಇನ್ಮುಂದೆ ಆಧಾರ್ ಜೆರಾಕ್ಸ್ ಅಥವಾ ಮೊಬೈಲ್,ಡಿಜಿಟಲ್ ಮೂಲಕವೂ ಆಧಾರ್ ತೋರಿಸುವ ಮೂಲಕ ಪ್ರಯಾಣ ಮಾಡಬಹುದು ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.
ಇದನ್ನು ಓದಿ: ಮೋದಿ ಪ್ರಮಾಣವಚನಕ್ಕೂ ಮುನ್ನ ಕರೆಂಟ್ ಬಿಲ್ ಕಟ್ಟುತ್ತಿರುವವರಿಗೆ ರತನ್ ಟಾಟಾ ಕಡೆಯಿಂದ ಸಿಹಿಸುದ್ದಿ!
ಶಕ್ತಿ ಯೋಜನೆ ಸ್ಥಗಿತ ಆಗಲ್ಲ
ಶಕ್ತಿ ಯೋಜನೆ ಸ್ಥಗಿತ ಆಗುವ ಬಗ್ಗೆ ಊಹಾಪೋಹಗಳು ಕೇಳಿ ಬರ್ತಾ ಇದ್ದು ಇದಕ್ಕೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಶಕ್ತಿ ಯೋಜನೆ ಖಂಡಿತ ಸ್ಥಗಿತ ಆಗಲ್ಲ. ಲೋಕಸಭಾ ಚುನಾವಣೆಯವರೆಗೆ ಈ ಸೌಲಭ್ಯ ಅಂತನೂ ನಾವು ನಿಗದಿ ಮಾಡಿಲ್ಲ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಯನ್ನು ನಿಲ್ಲಿಸುವುದಿಲ್ಲ ಬಡ ಬರ್ಗದ ಜನರಿಗಾಗಿ ಈ ಯೋಜನೆ ಜಾರಿ ಮಾಡಲಾಗಿದ್ದು ಬಡ ಮಹಿಳೆಯರಿಗೆ ಈ ಯೋಜನೆ ಬಹಳಷ್ಟು ಸಹಕಾರಿ ಯಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಬಡವರಿಗೆ ತಲುಪುತ್ತಿದೆ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ.
advertisement