Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೆ ಬೆಳ್ಳಂಬೆಳಿಗ್ಗೆ ಸಚಿವರ ಗುಡ್ ನ್ಯೂಸ್! ಮಹತ್ವದ ಮಾಹಿತಿ
![New Online Application for Ration Card](https://karnatakatimes.com/wp-content/uploads/2023/12/APL-BPL-Card.jpg)
advertisement
New Online Application for Ration Card: ಇಂದು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ರೇಷನ್ ಕಾರ್ಡ್ ಎಂಬುದು ಅತೀ ಅಗತ್ಯವಾಗಿ ಬೇಕಾಗಿದೆ.ಹೌದು ಈ ಕಾರ್ಡ್ ನಿಂದಲೇ ಸರಕಾರದ ಹಲವು ಸೌಲಭ್ಯ ಗಳು ನಮಗೆ ದೊರೆಯುತ್ತದೆ.ಈಗಾಗಲೇ ರಾಜ್ಯ ಸರಕಾರದ ಎಲ್ಲಾ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಈ ಕಾರ್ಡ್ ಅಗತ್ಯ ವಾಗಿ ಬೇಕು.ಈಗಾಗಲೇ ಈ ಕಾರ್ಡ್ ಇಲ್ಲದೆ ಕೆಲವರು ಸೌಲಭ್ಯ ದಿಂದ ವಂಚನೆ ಗೊಳಗಿದ್ದಾರೆ. ಈಗಾಗಲೇ ಹೊಸ ಕಾರ್ಡ್ ಯಾವಾಗ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ ಎಂದು ಕಾಯ್ತಾ ಇದ್ದಂತಹ ಗ್ರಾಹಕರಿಗೆ ಇದೀಗ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ.
ಅದೇ ರೀತಿ ಈಗಾಗಲೇ ಈಹಿಂದೆ ಅರ್ಜಿ ಸಲ್ಲಿಕೆ ಮಾಡಿದ್ದ ಕಾರ್ಡ್ ಗಳ ವಿಲೇವಾರಿ ಮಾಡುದಾಗಿ ಸಹ ತಿಳಿಸಿದ್ದಾರೆ. ಶೀಘ್ರವೇ ಉಳಿಕೆ ಇರುವ ಕಾರ್ಡ್ ಗಳಲ್ಲಿ ಎಪಿಲ್ ,ಬಿಪಿಎಲ್ ಕಾರ್ಡ್ ಗಳನ್ನು ಗುರುತಿಸಿ ವಿಲೇವಾರಿ ಮಾಡಲು ಸಚಿವರಾದ ಕೆ.ಹೆಚ್. ಮುನಿಯಪ್ಪ ಸೂಚನೆ ಕೂಡ ಇದೀಗ ನೀಡಿದ್ದಾರೆ.
![New Online Application for Ration Card](https://karnatakatimes.com/wp-content/uploads/2024/06/BPL-Ration-Card-9.jpg)
ಶೀಘ್ರ ಹಂಚಿಕೆ
advertisement
ಈಗಾಗಲೇ ಹೆಚ್ಚಿನ ಜನರು ಹೊಸ ರೇಷನ್ ಕಾರ್ಡ್ ಗಾಗಿ ಕಾಯ್ತಾ ಇದ್ದಾರೆ. ಈಗಾಗಲೇ ಹಲವು ಸೌಲಭ್ಯ ಗಳಿಂದ ಕೂಡ ವಂಚಿತ ರಾಗಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದ್ದು ಹೊಸ ಅರ್ಜಿಗಳನ್ನು ಸ್ವೀಕರಿಸದೇ ಇರುವುದರಿಂದ ಜನರು ಈ ಯೋಜನೆಗಳ ಲಾಭ ಪಡೆಯಲು ಸಾಧ್ಯ ವಾಗುತ್ತಿಲ್ಲ. ಹಾಗಾಗಿ ಹೊಸ ಎಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಅನೇಕ ಕುಟುಂಬಗಳಿಗೆ ಇದು ನೆರವಾಗಲಿದೆ.ಹಾಗಾಗಿ ಅತೀ ಶೀಘ್ರದಲ್ಲೇ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸೂಚನೆ ಯನ್ನು ನೀಡಿದ್ದಾರೆ.
![New Online Application for Ration Card](https://karnatakatimes.com/wp-content/uploads/2024/06/BPL-Ration-Card-8.jpg)
ಹೊಸ ಕಾರ್ಡ್ ಗೆ ಅವಕಾಶ ಯಾವಾಗ?
ಈಗಾಗಲೇ ಹೊಸದಾಗಿ ಮದುವೆ ಆದವರು,ಹೊಸದಾಗಿ ಮನೆ ಮಾಡಿದವರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಗೆ ಕಾಯ್ತಾ ಇದ್ದಾರೆ.ಇದಕ್ಕಾಗಿ ಸರಕಾರ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು ಹಳೇ ಕಾರ್ಡ್ ಗಳ ಅರ್ಜಿ ವಿಲೇವಾರಿ ಆದ ಬಳಿಕವೇ ಅವಕಾಶ ನೀಡಬಹುದು ಎನ್ನಲಾಗಿದೆ.ಈಗಾಗಲೇ ಹಳೇಯ ಅರ್ಜಿ ಗಳೆ ಬಾಕಿ ಇರಲಿದ್ದು ಇದರ ಪರಿಶೀಲನೆ, ವಿಲೇವಾರಿ ಆದ ಬಳಿಕ ಅವಕಾಶ ನೀಡಬಹುದು.
ಆದರೆ ಹೊಸದಾಗಿ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಯಾವುದೇ ಸುಳ್ಳು ದಾಖಲೆಗಳನ್ನು ನೀಡುವಂತಿಲ್ಲ, ಆಯಾ ಕಾರ್ಡ್ ಗೆ ನಿಗದಿ ಪಡಿಸಿದ ಅರ್ಹತೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು ಎನ್ನುವ ಸ್ಪಷ್ಟನೆ ಯನ್ನು ಆಹಾರ ಇಲಾಖೆಯು ನೀಡಿದೆ.
advertisement