Karnataka: ರಾಜ್ಯದ ಜನತೆಗೆ ಬೆಳ್ಳಂಬೆಳಿಗ್ಗೆ ಕಹಿಸುದ್ದಿ, ಎಲ್ಲಾ ಗ್ಯಾರಂಟಿಗಳು ಬಂದ್ ಆಗುವ ಸಾಧ್ಯತೆ, ಇಲ್ಲಿದೆ ಸಾಕ್ಷಿ
![](https://karnatakatimes.com/wp-content/uploads/2024/06/pixelcut-export-2024-06-07T074425.161.jpeg)
advertisement
Guarantee Schemes: ಕಳೆದ ಬಾರಿ ವಿಧಾನಸಭೆ ಚುನಾವಣೆ ನಡೆದಾಗ ನಿಮಗೆಲ್ಲರಿಗೂ ತಿಳಿದಿರಬಹುದು ಕಾಂಗ್ರೆಸ್ ಪಕ್ಷ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂಬುದಾಗಿ ಹೇಳುವ ಮೂಲಕ ಜನರ ವಿಶ್ವಾಸವನ್ನು ಗಳಿಸಿ ಆ ಚುನಾವಣೆಯನ್ನು ಗೆದ್ದು ರಾಜ್ಯದಲ್ಲಿ ಸರ್ಕಾರವನ್ನು ನಿರ್ಮಾಣ ಮಾಡುವುದಕ್ಕೆ ಯಶಸ್ವಿಯಾಗಿತ್ತು. ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೂಡ ನೀವು ಸಾಕಷ್ಟು ಗಮನಿಸಿರಬಹುದು ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟ ಪಕ್ಷಗಳು ಸಾಕಷ್ಟು ಉಚಿತ ಯೋಜನೆಗಳನ್ನು ಜನರಿಗೆ ನೀಡುವಂತಹ ಆಶ್ವಾಸನೆಯನ್ನು ನೀಡಿದ್ದವು.
ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಪಕ್ಷ ತಾವು ನೀಡಿರುವಂತಹ ಉಚಿತ ಭಾಗ್ಯಗಳ ಯೋಜನೆಗಳ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟ್ ಗಳನ್ನ ಗೆಲುತ್ತೇವೆ ಎಂಬುದಾಗಿ ಭರವಸೆಯನ್ನು ಹೊಂದಿದ್ದರು. ಆದರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಕೇವಲ ಒಂಬತ್ತು ಸೀಟ್ ಗಳನ್ನ ಮಾತ್ರ. ಹೀಗಾಗಿ ಇಲ್ಲಿ ನಿರೀಕ್ಷಿತ ಗೆಲುವನ್ನು ಪಡೆದುಕೊಳ್ಳುವುದಕ್ಕೆ ಉಚಿತ ಭಾಗ್ಯಗಳು ಕೂಡ ಕೆಲಸಕ್ಕೆ ಬರಲಿಲ್ಲ ಎನ್ನುವುದು ಸಾಕಷ್ಟು ಜನ ಕಾಂಗ್ರೆಸ್ ನಾಯಕರು ಅಭಿಪ್ರಾಯವಾಗಿದೆ ಎಂದು ಹೇಳಬಹುದಾಗಿದೆ.
![](https://karnatakatimes.com/wp-content/uploads/2024/04/govt-5-guarantees.jpg)
Zee News
advertisement
ಈ ಉಚಿತ ಯೋಜನೆಗಳು ಕೆಲಸಕ್ಕೆ ಬರುತ್ತಿಲ್ಲ ಹಾಗೂ ಜನರಲ್ಲಿ ಕೂಡ ಒಳ್ಳೆಯ ಅಭಿಪ್ರಾಯ ಇಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಾಂಗ್ರೆಸ್ ಪಕ್ಷದ ಮುಖಂಡರು ಮುಂದಿನ ದಿನಗಳಿಂದ ಈ ಯೋಜನೆಗಳನ್ನ ತೆಗೆದು ಹಾಕಬೇಕು ಎಂಬುದಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದೇ ಬಗ್ಗೆ ಮಾಧ್ಯಮಗಳಲ್ಲಿ ಕೂಡ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರಲ್ಲಿ ಕೂಡ ಈ ಯೋಜನೆಗಳು ಅದಕ್ಕೆ ನಿಲ್ಲುವುದು ಎನ್ನುವಂತಹ ಆತಂಕ ಮೂಡಿದೆ ಎಂದು ಹೇಳಬಹುದಾಗಿದ್ದು ಇದರ ಬಗ್ಗೆ ಗ್ರಹ ಮಂತ್ರಿ ಏನು ಹೇಳಿದ್ದಾರೆ ಎಂಬುದಾಗಿ ತಿಳಿದುಕೊಳ್ಳೋಣ ಬನ್ನಿ.
ಗೃಹ ಮಂತ್ರಿಗಳು ಇದರ ಬಗ್ಗೆ ಮಾತನಾಡುತ್ತಾ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತಿಲ್ಲ ಅವುಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ ಯಾವುದೇ ಊಹಾಪೋಹಗಳಿಗೂ ಕೂಡ ಕಿವಿ ಕೊಡುವ ಅಗತ್ಯವಿಲ್ಲ ಎಂಬುದಾಗಿ ಈ ಎಲ್ಲಾ ಗಾಳಿ ಸುದ್ದಿಗಳಿಗೂ ಕೂಡ ತೆರೆ ಎಳೆಯುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳು ಅರ್ಧಕ್ಕೆ ಮೊಟಕುಗೊಳ್ಳಲಿದೆ ಎಂಬುದಾಗಿ ಭಾವಿಸಿದ್ದ ಸಾಮಾನ್ಯ ಜನರು ಇನ್ಮುಂದೆ ಇದರ ಚಿಂತೆ ಪಡಬೇಕಾದ ಅಗತ್ಯವಿಲ್ಲ ಎಂಬುದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ ಹಾಗೂ ಖುದ್ದಾಗಿ ಗೃಹಮಂತ್ರಿಗಳ ಈ ಮಾತನ್ನು ಹೇಳಿರುವುದರಿಂದಾಗಿ ಯೋಜನೆ ಮುಂದುವರೆದುಕೊಂಡು ಹೋಗಲಿದೆ ಅನ್ನೋದರ ಖಾತ್ರಿ ಯಾಗಿದೆ.
advertisement