ಬಿಗ್ ಬಾಸ್ ಸೀಸನ್ 11 ಈಗಾಗಲೇ ಶುರುವಾಗಿದ್ದು, ಆರಂಭದ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆದಿದೆ. ಎಲ್ಲಾ ಕಂಟೆಸ್ಟೆಂಟ್ಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನರಕವಾಸಿಗಳು ಮತ್ತು ಸ್ವರ್ಗ ವಾಸಿಗಳು ಎನ್ನುವ ಎರಡು ಗ್ರೂಪ್ನಲ್ಲಿ ಈಗಾಗಲೇ ಸಾಕಷ್ಟು ಮಾತಿನ ಚಕಮಕಿ ನಡೆದಿದೆ. ತಾ ಮುಂದು ನಾ ಮುಂದು ಎನ್ನುವಂತೆ ಪ್ರತಿಯೊಬ್ಬರು ಎಲ್ಲಾ ವಿಷ್ಯಕ್ಕೂ ಧ್ವನಿ ಎತ್ತುತ್ತಿದ್ದಾರೆ.
ಅದರಲ್ಲೂ ಈ ಬಾರಿ ಲಾಯರ್ ಜಗದೀಶ್ ಅವರು ಹೆಚ್ಚು ಸೌಂಡ್ ಮಾಡುತ್ತಿದ್ದಾರೆ ಎನ್ನಬಹುದು. ಈ ಬಾರಿ ಬಿಗ್ ಬಾಸ್ ನಲ್ಲಿ ಇರುವ ಶ್ರೀಮಂತ ವ್ಯಕ್ತಿ ಗೋಲ್ಡ್ ಸುರೇಶ್ ಎಂದು ಎಲ್ಲರೂ ಭಾವಿಸಿದರೆ ಅದು ತಪ್ಪು. ಅವರಿಗಿಂತ ತಾನೇ ಹೆಚ್ಚು ಕೆಪಾಸಿಟಿ ಉಳ್ಳವನು ಎನ್ನುವಂತೆ ಲಾಯರ್ ಜಗದೀಶ್ ನಡೆದುಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಮೇಲೆ ಅಸಮಾಧಾನ!
ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಿಂದ ತಾನು ಹೊರಗೆ ಹೋಗುತ್ತೇನೆ ಎನ್ನುವುದಾಗಿ ಸ್ಟೇಟ್ಮೆಂಟ್ ನೀಡಿದರು. ನಂತರ “ನಾನು ಮನಸ್ಸು ಮಾಡಿದರೆ ಹೆಲಿಕಾಫ್ಟರ್ ಅನ್ನೇ ಇಲ್ಲಿಗೆ ತರಿಸುತ್ತೇನೆ. ಎಲ್ಲರ ವಿಷಯವನ್ನು ಆಚೆ ಹಾಕುತ್ತೇನೆ ಬಿಗ್ ಬಾಸ್ ದೂರನ್ನು ಮುರಿಯುವ ಕೆಪ್ಯಾಸಿಟಿ ನನಗೆ ಇದೆ. ನಾನು ಗೌರ್ಮೆಂಟ್ ಅನ್ನು ಶೇಕ್ ಮಾಡಬಹುದು. ಕರ್ನಾಟಕದಲ್ಲಿ ನನ್ನನ್ನ ಎದುರು ಹಾಕಿಕೊಂಡು ಬಿಗ್ ಬಾಸ್ ನಡೆಸುತ್ತೀರಾ ನಡೆಸಿ ನೋಡೋಣ” ಅಂತ ಬಿಗ್ ಬಾಸ್ ಗೆ ಸವಾಲು ಹಾಕಿದ್ದಾರೆ.
ಲಾಯರ್ ಜಗದೀಶ ಕಂಟೆಸ್ಟೆಂಟ್ ಬಳಿ ಹಾಕಿದ ಚಾಲೆಂಜ್ ಹಾಗೂ ಬಿಗ್ ಬಾಸ್ ಕ್ಯಾಮರದ ಮುಂದೆ ಹೇಳಿರುವ ಮಾತುಗಳ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ವೀಕ್ಷಕರು ಬಹಳ ಕುತೂಹಲದಿಂದ ಇಂದಿನ ಎಪಿಸೋಡ್ ನಿರೀಕ್ಷಿಸುತ್ತಿದ್ದಾರೆ. ಲಾಯರ್ ಜಗದೀಶ್ ಆಡಿರುವ ಮಾತಿನಿಂದ ಬಿಗ್ ಬಾಸ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.
Entatrainment