Anna Bhagya Money: ಅನ್ನಭಾಗ್ಯ ಹಣ ಬಾರದವರಿಗೆ ಸಚಿವರ ಹೊಸ ಮಾಹಿತಿ
![](https://karnatakatimes.com/wp-content/uploads/2024/07/New-information-of-the-minister-for-those-who-do-not-get-Anna-Bhagya-Money.jpg)
advertisement
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡ್ತ ಇದ್ದು ಬಡ ವರ್ಗದ ಜನತೆಗೆ ಹೆಚ್ಚು ಈ ಯೋಜನೆಗಳು ನೆರವಾಗುತ್ತಿದೆ. ಹೌದು ಗೃಹಲಕ್ಷ್ಮಿ (Gruha Lakshmi), ಗೃಹಜ್ಯೋತಿ (Gruha Jyothi), ಯುವನಿಧಿ (Yuva Nidhi), ಶಕ್ತಿ ಯೋಜನೆ (Shakti Yojana) ಇತ್ಯಾದಿ ಅದರಲ್ಲಿ ಮುಖ್ಯ ವಾಗಿ ಅನ್ನಭಾಗ್ಯ ಯೋಜನೆಯು ಕೂಡ ಹೆಚ್ಚು ಸದ್ದು ಮಾಡ್ತಾ ಇದೆ. ಪಡಿತರ ಚೀಟಿ ದಾರರಿಗೆ ಆಹಾರ ಧಾನ್ಯ ಗಳ ವಿತರಣೆ ಯೊಂದಿಗೆ ಅನ್ನಭಾಗ್ಯ ಹಣವನ್ನು ಕೂಡ ಸರಕಾರ ಜಮೆ ಮಾಡ್ತಾ ಇದೆ.ಆದರೆ ಸುಮಾರು ಮೂರು ತಿಂಗಳಿಂದ ಈ ಅನ್ನಭಾಗ್ಯ ಹಣ ಜಮೆ ಯಾಗ್ತಾ ಇಲ್ಲ ಅನ್ನುವ ಮಾತುಗಳು ಕೇಳಿ ಬರ್ತಾ ಇದೆ.ಇದೀಗ ಹಣ ಬಿಡುಗಡೆ ಯಾಗದ ಫಲಾನುಭವಿಗಳಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ.
ಅದೇ ರೀತಿ ಅನ್ನಭಾಗ್ಯ ಯೋಜನೆ (Anna Bhagya Yojana) ಬಾರದ ಪಡಿತರದಾರರಿಗೆ ಆಧಾರ್ ಕೆವೈಸಿ ಅಭಿಯಾನ ಆರಂಭ ಮಾಡುವಂತೆ ಕಾರ್ಮಿಕ ಇಲಾಖೆ ಸಚಿವರಾಗಿರುವ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ. ಅವರು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಕಲಘಟಗಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಈ ಬಗ್ಗೆ ಮಾತನಾಡಿದರು. ಕೆಲವೊಂದು ನಗರ ಹಾಗೂ ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆ ಮಾಡಿ, ಜುಲೈ 1 ರಿಂದ 7 ರ ವರೆಗೆ ಸಪ್ತಾಹ ಅಭಿಯಾನ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ.
ಹಣ ಬಾರದವರು ಹೀಗೆ ಮಾಡಿ:
advertisement
ಅನ್ನ ಭಾಗ್ಯ ಹಣ (Anna Bhagya Money) ವನ್ನು ಒಂದು ಕೆಜಿಗೆ 35 ರೂಪಾಯಿ ಅಂತೆ 5 ಕೆಜಿಗೆ 170 ರೂಪಾಯಿಯನ್ನು ಮನೆಯ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡ್ತಾ ಇದೆ. ಈಗಾಗಲೇ ಮೂರು ತಿಂಗಳಿನಿಂದ ಅನ್ನಭಾಗ್ಯ ಹಣ ಜಮೆ ಯಾಗದಿದ್ದವರಿಗೆ ಶೀಘ್ರವಾಗಿ ಹಣ ಜಮೆ ಮಾಡುವುದಾಗಿ ಸಚಿವರು ಈಗಾಗಲೇ ತಿಳಿಸಿದ್ದಾರೆ.
ಈಗಾಗಲೇ ಅನ್ನ ಭಾಗ್ಯ ಹಣ (Anna Bhagya Money) ಜಮೆ ಯಾಗದೇ ಇದ್ದವರು ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ (Aadhaar Card) ಅನ್ನು ಅಪ್ಡೇಟ್ ಮಾಡಿಸುವ ಮುಲಕ ಮೊದಲು ದಾಖಲೆಗಳನ್ನು ಸರಿ ಪಡಿಸಿ. ಅದೇ ರೀತಿ ರೇಷನ್ ಕಾರ್ಡ್ ನ KYC ಅಪ್ಡೇಟ್ ಕೂಡ ಮಾಡಿಸಿ. ಇನ್ನು ಅನ್ನ ಭಾಗ್ಯ ಹಣ ಜಮೆ ಯಾಗದೇ ಇದ್ದವರು ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಗೆ ಕೂಡ KYC ಮಾಡಿಸಿರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿ.
ಈ ತಿಂಗಳ ಹಣ ಯಾವಾಗ ಜಮೆ ಯಾಗಲಿದೆ?
![](https://karnatakatimes.com/wp-content/uploads/2024/07/Anna-Bhagya-Yojana-300x156.jpg)
ಈಗಾಗಲೇ ಅನ್ನಭಾಗ್ಯ ಹಣ (Anna Bhagya Money) ವೂ ಎಪ್ರಿಲ್ ತಿಂಗಳ ವರೆಗೆ ಈಗಾಗಲೆ ಕೆಲವು ಫಲಾನುಭವಿಗಳ ಖಾತೆಗೆ ಬಿಡುಗಡೆ ಯಾಗಿದ್ದು ಜೂನ್ ತಿಂಗಳ ಹಣವೂ ಇದೇ ತಿಂಗಳ ಹದಿನೈದರ ಒಳಗೆ ಖಾತೆಗೆ ಜಮೆ ಯಾಗಲಿದೆ ಎಂದು ಈಗಾಗಲೇ ವಿವಿಧ ಮೂಲಗಳಿಂದ ಮಾಹಿತಿ ಬಂದಿದೆ. ಇನ್ನು ಈ ಬಗ್ಗೆ ಆಹಾರ ಸಚಿವರು ಪ್ರತಿಕ್ರಿಯೆ ನೀಡಿ, ಪ್ರತಿ ತಿಂಗಳ ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡುದಾಗಿ ತಿಳಿಸಿದ್ದಾರೆ.
advertisement