Gruha Lakshmi Money: ಗೃಹಲಕ್ಷ್ಮಿ ಹಣ ಬಾರದೇ ಇರೋ ಮಹೀಳೆಯರಿಗೆ ಅಂಚೆ ಇಲಾಖೆಯಿಂದ ಹೊಸ ತಂತ್ರ
![](https://karnatakatimes.com/wp-content/uploads/2024/02/Post-office-department-intoduced-new-strategy-for-those-women-who-do-not-receive-Gruha-Lakshmi-Money.jpg)
advertisement
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಇಂದು ಕೂಡ ಈ ಯೋಜನೆಯ ಬಗ್ಗೆ ಮಹೀಳೆಯರು ಸ್ಪಂದನೆ ವ್ಯಕ್ತ ಪಡಿಸುತ್ತಿದ್ದಾರೆ. ಗೃಹಲಕ್ಷ್ಮಿ ಹಣ ಬಂದಿರುವ ಬಗ್ಗೆ ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ. ರಾಜ್ಯ ಸರಕಾರದ ಮೂಲಕ ಎರಡು ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದ್ದು, ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯಲು ಅರ್ಹ ಇರುವ ಮನೆಯ ಯಜಮಾನಿಯರು ನೋಂದಣಿ ಮಾಡಿಕೊಂಡಿದ್ದರೆ ಹಣ ಜಮೆ ಯಾಗುತ್ತದೆ. ಆದ್ರೆ ಅರ್ಜಿ ಸಲ್ಲಿಕೆ ಮಾಡಿದ ಕೆಲವು ಮಹೀಳೆಯರಿಗೆ ಈ ಹಣ ಜಮೆ ಯಾಗಿಲ್ಲ. ಇದಕ್ಕಾಗಿ ಸರಕಾರ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ನೊಂದಣಿ ಮಾಡಿದ ಮಹೀಳೆಯರ ಅರ್ಜಿ ಗಳನ್ನು ಪರಿಶೀಲನೆ ಮಾಡುತ್ತಿದೆ.
ಅಂಚೆ ಇಲಾಖೆಯಿಂದ ಕ್ರಮ:
ಇದೀಗ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸಿಬ್ಬಂದಿ ಅವರು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಲ್ಲಿ ಹಣ ಬಾರದ ಮಹಿಳೆಯರ ಖಾತೆಗಳನ್ನು ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ನೊಂದಣಿ ಮಾಡಿದ ಫಲಾನುಭವಿಗಳಿಗೆ ಹಣ ಬಾರದೇ ಇರುವ ಖಾತೆಗಳನ್ನು ಪರಿಶೀಲನೆ ಮಾಡಿ ಸಮಸ್ಯೆಗಳನ್ನು ಸರಿಪಡಿಸಿ ಮುಂದಿನ ತಿಂಗಳಿನಿಂದ ಹಣ ಪಾವತಿ ಆಗುವಂತೆ ಪರಿಹಾರ ನೀಡಿದ್ದಾರೆ.
ಈ ನಂ ಕರೆ ಮಾಡಿ:
advertisement
ಜಿಲ್ಲೆಯಲ್ಲಿ ಈವರೆಗೆ 25ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಬ್ಯಾಂಕ್ ಖಾತೆ ಸಮಸ್ಯೆ ಆಗಿದ್ದಲ್ಲಿ, ಅಂಚೆ ಕಚೇರಿಗಳಲ್ಲಿ ಹೊಸ ಖಾತೆ ತೆರೆದು, ಹಣ ಪಾವತಿಯಾಗುವಂತೆ ಮಾಡಲಾಗಿದೆ. ಈಗಾಗಲೇ ಒಂದು ಭಾರಿಯು ಗೃಹಲಕ್ಷ್ಮಿ ಹಣ (Gruha Lakshmi Money) ಬಾರದೇ ಇದ್ದಲ್ಲಿ 9743077935 ಸಂಖ್ಯೆಗೆ ಕರೆ ಮಾಡಿದಲ್ಲಿ, ಎಲ್ಲ ಕಂತಿನ ಹಣ ಜಮೆ ಯಾಗುವಂತೆ ಮಾಡಲಾಗುತ್ತದೆ.
ಈ ಸಮಸ್ಯೆ ಕಾರಣ:
ಈಗಾಗಲೇ ಕೆಲವು ಮಹೀಳೆಯರಿಗೆ ಗೃಹ ಲಕ್ಷ್ಮಿ ಹಣ (Gruha Lakshmi Money) ಬಾರದೇ ಇರಲು ಕಾರಣ ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ, ವಿಳಾಸ ಬದಲಾವಣೆ ಹೊಸ ಬ್ಯಾಂಕ್ ಖಾತೆ, ಹೆಸರು ಬದಲಾವಣೆ ಇತ್ಯಾದಿ ಹಲವು ಸಮಸ್ಯೆಗಳು ಇದ್ದು ಒಂದಕ್ಕೊಂದು ಮಾಹಿತಿ ಮ್ಯಾಚ್ ಆಗದೇ ಇರೋ ಕಾರಣ ಹಣ ಜಮೆ ಯಾಗಿಲ್ಲ. ಈಗಾಗಲೇ ಈ ತೊಂದರೆಗಳನ್ನು ಪರಿಹರಿಸಿ, ಮಹೀಳಾ ಫಲಾನುಭವಿಗಳಿಗೆ ಹಣ ಜಮಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಾಗುತ್ತಿದೆ.
ಅಂಗನವಾಡಿ ಕಾರ್ಯ ಕರ್ತರ ಭೇಟಿ:
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೆ ಅಂತಹವರಿಗೆ ಗೃಹಲಕ್ಷ್ಮಿಯ ಹಣ ಜಮೆಯಾಗಿಲ್ಲ. ಅದೇ ರೀತಿ ಖಾತೆ ಯ ಮೂಲಕ ಒಂದೆರಡು ವರ್ಷ ಹಣದ ಚಲಾವಣೆ ಮಾಡಿಲ್ಲದೇ ಇದ್ದರೂ ಅಂತಹವರಿಗೂ ಹಣವಿಲ್ಲ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತಯರನ್ನು ಮನೆ ಮನೆಗೆ ಭೇಟಿ ನೀಡಿ, ಹಣ ಬಾರದೇ ಇರೋ ಫಲಾನುಭವಿಗಳಿಗೆ ಆಗಿರುವ ಅನಾನುಕೂಲದ ಸರಿಪಡಿಸಿ ಈ ಹಣ ಖಾತೆಗೆ ಜಮೆ ಯಾಗುವಂತೆ ಮಾಡಲಾಗಿದೆ.
advertisement