Guarantee Schemes: ಗೃಹ ಲಕ್ಷ್ಮಿ ಹಣ ಪಡೆಯುತ್ತಿದ್ದ ಎಲ್ಲರಿಗೂ ಬೆಳ್ಳಂಬೆಳಿಗ್ಗೆ ಕಹಿಸುದ್ದಿ, ಊಹಿಸದ ಬೆಳವಣಿಗೆ
![](https://karnatakatimes.com/wp-content/uploads/2024/04/Lakshmi-Hebbalkar-gives-a-update-on-release-of-8th-installment-of-Gruha-Lakshmi-Yojana.jpg)
advertisement
Gruha Lakshmi Scheme : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ನೋಡಿರಬಹುದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದಿರುವುದಕ್ಕೆ ನಿಜವಾದ ಕಾರಣ ಅಂದ್ರೆ ಕಾಂಗ್ರೆಸ್ ಸರ್ಕಾರದ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಮ್ಯಾನಿಫೆಸ್ಟ್ ನಲ್ಲಿ ಘೋಷಣೆ ಮಾಡಿದ್ದಂತಹ ಉಚಿತ ಯೋಜನೆಗಳು ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.
ಇವತ್ತಿಗೂ ಕೂಡ ರಾಜ್ಯದಲ್ಲಿ ಉಚಿತ ಯೋಜನೆಗಳು ಅದೇ ರೀತಿಯಲ್ಲಿ ಜಾರಿಯಾಗಿ ನಡೆದುಕೊಂಡು ಬರುತ್ತಿವೆ. ಆದರೆ ಇವುಗಳಿಂದಾಗಿ ಅಥವಾ ಲೋಕಸಭಾ ಚುನಾವಣೆಯಲ್ಲಿ ಹೊಸದಾಗಿ ಘೋಷಣೆ ಮಾಡಿರುವಂತಹ ಉಚಿತ ಯೋಜನೆಗಳಿಂದಾಗಿ ಯಾವುದೇ ಪರಿಣಾಮ ರಾಜ್ಯದಲ್ಲಿ ಬೀರಿಲ್ಲ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಲೋಕಸಭಾ ಚುನಾವಣೆಯಲ್ಲಿ ಅಂದುಕೊಂಡಿದ್ದಷ್ಟು ಗೆಲುವನ್ನು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಬಹುದಾಗಿದೆ.
![](https://karnatakatimes.com/wp-content/uploads/2024/06/Gruha-Lakshmi-Yojana.jpg)
advertisement
ಹೌದು ಗೆಳೆಯರೇ ಸಾಕಷ್ಟು ಕಾಂಗ್ರೆಸ್ ಪಕ್ಷದ ಗೆಲ್ಲುವ ಅಭ್ಯರ್ಥಿಗಳು ಕೂಡ ಈ ಸಂದರ್ಭದಲ್ಲಿ ಸೋತಿದ್ದು ಇದಕ್ಕೆ ಕಾರಣ ಉಚಿತ ಯೋಜನೆಗಳು ಎಂಬುದಾಗಿ ಕೂಡ ಬೇರೆ ಯಾರದೋ ಪಕ್ಷದವರು ಅಲ್ಲ ಬದಲಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕೆಲವೊಂದು ಚುನಾವಣೆಗೆ ನಿಂತಿದ್ದ ನಾಯಕರೆ ಹೇಳಿಕೊಂಡಿರುವುದು ಇಲ್ಲಿ ಪ್ರಮುಖವಾಗಿ ಗಮನವಹಿಸಬೇಕಾಗಿರುವಂತಹ ವಿಚಾರವಾಗಿದೆ.
ರಾಜ್ಯದ ಗೃಹ ಮಂತ್ರಿಗಳು ಯಾವುದೇ ಕಾರಣಕ್ಕೂ ಉಚಿತ ಯೋಜನೆಯನ್ನು ನಿಲ್ಲಿಸುವ ಪ್ರಮೇಯ ಇಲ್ಲ ಮುಂದುವರಿಸಿಕೊಂಡು ಹೋಗುತ್ತೇವೆ ಎಂಬುದಾಗಿ ಹೇಳಿದ್ದಾರೆ ನಿಜ ಆದರೆ ಈ ವಿಚಾರದ ಬಗ್ಗೆ ಪಕ್ಷದಲ್ಲಿಯೇ ಸಾಕಷ್ಟು ಬಂಡಾಯ ಎದ್ದಿರುವಂತಹ ಘಟನೆಗಳು ಕೇಳಿಬರುತ್ತದೆ. ಉಳಿದ ಪಕ್ಷದ ನಾಯಕರ ಪ್ರಕಾರ ನಾವು ಸೋಲುವುದಕ್ಕೆ ರಾಜ್ಯದಲ್ಲಿ ಇರುವಂತಹ ಉಚಿತ ಯೋಜನೆಗಳು ಕಾರಣ ಎಂಬುದಾಗಿ ಹೇಳಿಕೊಂಡಿರುವುದು ಇಲ್ಲಿ ಕಂಡು ಬರುತ್ತದೆ.
ಅದರಲ್ಲೂ ವಿಶೇಷವಾಗಿ ನಾವು ಮಾತನಾಡುತ್ತಿರುವುದು ಮೈಸೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆಗಿರುವಂತಹ ಲಕ್ಷ್ಮಣ್ ರವರು ನೇರವಾಗಿ ಮಾಧ್ಯಮದವರು ಎದುರಿಗೆ ನಾವು ಸೌಲಭ್ಯಕ್ಕೆ ಕಾರಣವಾಗಿರುವುದು ನಾವು ನೀಡುತ್ತಿರುವಂತಹ ಉಚಿತ ಯೋಜನೆ ಎಂಬುದಾಗಿ ಓಪನ್ ಆಗಿ ಹೇಳಿಕೊಂಡಿದ್ದಾರೆ. ಇದನ್ನ ನಿಲ್ಲಿಸದೆ ಹೋದಲ್ಲಿ ನಾವು ಇನ್ನಷ್ಟು ಸೋಲನ್ನು ಕಾಣಬಹುದಾಗಿದೆ ಎಂಬ ಕಳವಳವನ್ನು ಕೂಡ ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ವಿಚಾರದ ಬಗ್ಗೆ ಯಾವ ರೀತಿಯ ಕ್ರಮಗಳನ್ನು ಕೈ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
advertisement