Anna Bhagya Yojana: ಅನ್ನಭಾಗ್ಯ ಯೋಜನೆಯಲ್ಲಿ ಇನ್ಮೇಲೆ ಹಣ ಸಿಗಲ್ಲ ಬಂತು ಹೊಸ ಅಪ್ಡೇಟ್, ಸಿಹಿಸುದ್ದಿ ಇಲ್ಲಿದೆ
![](https://karnatakatimes.com/wp-content/uploads/2024/06/Anna-Bhagya-Yojana-new-update.jpg)
advertisement
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಬಹಳಷ್ಟು ಮಹತ್ವ ಸ್ಥಾನ ಪಡೆದುಕೊಂಡಿದ್ದು ಹೆಚ್ಚಿನ ಜನತೆ ಇದರ ಸೌಲಭ್ಯ ವನ್ನು ಪಡೆದುಕೊಳ್ಳುತ್ತಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜನತೆ ಪಡೆಯುತ್ತಿದೆ. ಆದರೆ ಈ ನಡುವೆ ಗ್ಯಾರಂಟಿ ಯೋಜನೆಯಿಂದ ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆಯು ಏರಿಕೆ ಮಾಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಹೌದು ಈಗಾಗಲೇ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿದ್ದು ಇದೀಗ ದಿನ ನಿತ್ಯ ಬಳಸುವ ತರಕಾರಿ ಬೆಲೆಯು ಕೂಡ ಹೆಚ್ಚಳ ವಾಗಿದೆ.ಈ ಬಗ್ಗೆ ಕೆಲವರು ಆಕ್ರೋಶ ಕೂಡ ವ್ಯಕ್ತ ಪಡಿಸಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ಮಾತ್ರ ಜನರಿಗೆ ಉಪಯೋಗ್ತ ವಾದ ಇದೆ.
ಇದೀಗ ಸುದ್ದಿಯಾಗುತ್ತಿರುವ ವಿಚಾರ ಅಂದರೆ ಅನ್ನಭಾಗ್ಯ ಹಣದ ಬದಲು ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಹೌದು ಸರಕಾರ ಈ ಮೊದಲು ಪ್ರಸ್ತಾಪಿಸಿದ್ದೆ ಹೆಚ್ಚುವರಿ ಐದು ಕೆಜಿ ಅಕ್ಕಿ ವಿತರಣೆ ಮಾಡುದಾಗಿ, ಅದರೆ ಕೇಂದ್ರ ಸರಕಾರ ಒಪ್ಪದ ಕಾರಣ ಅಕ್ಕಿ ಕೊರತೆಯಿಂದಾಗಿ ಹಣ ಜಮೆ ಮಾಡುತ್ತಿದೆ. ಅನ್ನಭಾಗ್ಯ ಹಣ (Anna Bhagya Money) ವೂ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ಜಮೆ ಮಾಡುತ್ತಿದೆ. ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬದ ಪ್ರತಿಯೊಬ್ಬ ಗ್ರಾಹಕನಿಗೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಹಣ ಜಮೆ ಮಾಡುತ್ತಿದೆ.
![](https://karnatakatimes.com/wp-content/uploads/2024/06/Anna-Bhagya-Yojana-1-300x156.jpg)
ಹೌದು ಅನ್ನಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ಅಕ್ಕಿ ದಾಸ್ತಾನು ಕೊರತೆ ಇರುವ ಕಾರಣ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿಯ ಹೆಚ್ಚುವರಿ ಮೊತ್ತ ನೀಡುತ್ತಿದೆ. ಇದೀಗ ಹೆಚ್ಚುವರಿ ಅಕ್ಕಿಗೆ ಹಣದ ಬದಲಾಗಿ ಅಕ್ಕಿಯನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನುವ ಸುದ್ದಿ ವಿವಿಧ ಮೂಲದಿಂದ ಲಭ್ಯವಾಗಿದೆ.
advertisement
ಹೌದು ಕೇಂದ್ರದಲ್ಲಿ ಚುನಾವಣೆ ಫಲಿತಾಂಶ ಬಳಿಕ ಸಂಪುಟವು ರಚನೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕುರಿತು ಮತ್ತೇ ಅಕ್ಕಿ ಪೂರೈಕೆ ವಿಚಾರವಾಗಿ ಮಾತಾಡಿದೆ ಅಕ್ಕಿ ಖರೀದಿಗೆ ಕೇಂದ್ರಿಯ ಆಹಾರ ನಿಗಮವು ಅನುಮತಿ ನೀಡಬೇಕಿದೆ ಎನ್ನಲಾಗಿದೆ.
ಅನ್ನಭಾಗ್ಯ ಹಣ ಜಮೆ ಯಾಗಿದೆಯೇ?
ಈಗಾಗಲೇ ಚುನಾವಣೆ ಇದ್ದ ಕಾರಣ ಅನ್ನಭಾಗ್ಯ ಹಣ (Anna Bhagya Money) ಮೂರು ತಿಂಗಳು ಕೆಲವರ ಖಾತೆಗೆ ಜಮೆಯಾಗಿಲ್ಲ. ಹೆಚ್ಚಿನ ಜನರು ಈ ಅನ್ನಭಾಗ್ಯ ಹಣಕ್ಕಾಗಿ ಕಾಯುತ್ತಿದ್ದರು. ಇದೀಗ ಈ ತಿಂಗಳಿನ ಹಣವನ್ನು ಸರಕಾರ ಬಿಡುಗಡೆ ಮಾಡಿದ್ದು ಈ ತಿಂಗಳ ಒಳಗೆ ಅನ್ನ ಭಾಗ್ಯ ಹಣ ಬಿಡುಗಡೆಯಾಗಬಹುದು ಎಂದು ಆಹಾರ ಇಲಾಖೆಯು ತಿಳಿಸಿದೆ.
advertisement