Anna Bhagya Money: ಅನ್ನಭಾಗ್ಯ ಹಣ ಬರುವ ದಿಂದ ಅಧಿಕೃತ ದಿನಾಂಕ ಘೋಷಿಸಿದ ಸಚಿವರು
![](https://karnatakatimes.com/wp-content/uploads/2024/06/Minister-has-announced-the-official-date-of-Anna-Bhagya-money.jpg)
advertisement
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ (Anna Bhagya Yojana) ಯು ಕೂಡ ಬಹಳಷ್ಟು ಪ್ರಚಲಿತ ದಲ್ಲಿದೆ. ಹೌದು ಆಹಾರ ಇಲಾಖೆಯು ಬಡ ವತ್ಗದ,ಮದ್ಯಮ ವರ್ಗದ ಜನತೆಗಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಮೂಲಕ ನೆರವಾಗುತ್ತಿದೆ. ಈಗಾಗಲೇ ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ ಹೊಂದಿದಂತಹ ಪಡಿತರ ಚೀಟಿದಾರರು ಹಲವು ರೀತಿಯ ಸೌಲಭ್ಯ ಗಳನ್ನು ಪಡೆದುಕೊಳ್ತಾ ಇದ್ದಾರೆ. ಅದರಜೊತೆ ಅನ್ನ ಬಾಗ್ಯದ ಹಣವೂ (Anna Bhagya Money) ಕೂಡ ಖಾತೆಗೆ ಜಮೆ ಯಾಗ್ತಾ ಇದೆ.ಇದೀಗ ಆಹಾರ ಸಚಿವರು ಜುಲೈ ತಿಂಗಳ ಅನ್ನಭಾಗ್ಯ ಹಣದ ಕುರಿತಾಗಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಕಳೆದ ಜುಲೈ ತಿಂಗಳಿಂದಲೇ ಅನ್ನಭಾಗ್ಯ ಯೋಜನೆ (Anna Bhagya Yojana) ಯನ್ನು ಜಾರಿ ಮಾಡಲಾಗಿದ್ದು ಈ ಯೋಜನೆಯ ಮೂಲಕ 10 ಕೆಜಿ ಅಕ್ಕಿ ನೀಡುವ ಭರವಸೆ ಯನ್ನು ಕಾಂಗ್ರೇಸ್ ಸರಕಾರ ನೀಡಿತ್ತು. ಆದರೆ, ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ನೀಡುತ್ತಿದ್ದು, ಇನ್ನುಳಿದ ಐದು ಕೆಜಿ ಅಕ್ಕಿ ಬದಲಿಗೆ ಹಣ ಕೂಡ ಖಾತೆಗೆ ಜಮೆ ಮಾಡ್ತಾ ಇದೆ.ಈ ಯೋಜನೆಯ ಮೂಲಕ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣವನ್ನು ಮನೆಯ ಹಿರಿಯ ಸದಸ್ಯನ ಖಾತೆಗೆ ಜಮೆ ಮಾಡ್ತಾ ಇದೆ.
![](https://karnatakatimes.com/wp-content/uploads/2024/06/Anna-Bhagya-Money-3-300x156.jpg)
ಅನ್ನಭಾಗ್ಯ ಯೋಜನೆ (Anna Bhagya Yojana) ಯ ಬಗ್ಗೆ ಮಾತನಾಡಿದ ಸಚಿವ ಕೆಹೆಚ್ ಮುನಿಯಪ್ಪ ಅವರು ಅತೀ ಶೀಘ್ರವಾಗಿ ಅನ್ನಬಾಗ್ಯ ಯೋಜನೆಯ ಹಣ ಜಮೆ ಮಾಡುದಾಗಿ ತಿಳಿಸಿದರು.ರಾಜ್ಯದ ಜನತೆಗೆ ನಾವು ಗುಣಮಟ್ಟದ ಅಕ್ಕಿ ಯನ್ನು ಒದಗಿಸುತ್ತಿದ್ದೇವೆ, ಡಿಬಿಟಿ ಮೂಲಕ ಪ್ರತಿ ತಿಂಗಳು ಹಣ ಕೊಡುತ್ತೇವೆ. ಈಗಾಗಲೇ ಬಾಕಿ ಇದ್ದ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದರು. ಜುಲೈ ತಿಂಗಳ ಹತ್ತಕ್ಕೆ ಯಾವುದೇ ಬಾಕಿ ಇರದೆ ಹಣ ಹಾಕುತ್ತೇವೆ. ಜುಲೈ ಹತ್ತಕ್ಕೆ ಒಂದು ವರ್ಷ ಪೂರ್ಣ ಆಗಲಿದ್ದು ಯಾವುದೇ ಹಣ ಬಾಕಿ ಇಲ್ಲ ಎಂದರು.
advertisement
ಹಣದ ಬದಲು ಅಕ್ಕಿ?
ಈಗಾಗಲೇ ರಾಜ್ಯದಲ್ಲಿ ಹಣದ ಬದಲು ಅಕ್ಕಿ ನೀಡಲು ಚರ್ಚೆ ಕೂಡ ಆಗಿದೆ. ಅಕ್ಕಿ ಕೊರತೆ ಹಿನ್ನಲೆಯಲ್ಲಿ ನೀಡಲು ಆಗುತ್ತಿಲ್ಲ. ಹೀಗಾಗಿ ಅಕ್ಕಿ ಬದಲು ದವಸ ಧಾನ್ಯಗಳನ್ನು ನೀಡುವ ಪ್ರಸ್ತಾವನೆ ಇದೆ. ಈಗಾಗಲೇ ಕೇಂದ್ರದ ಪ್ರಸ್ತಾವನೆ ಇಟ್ಟಿದೆ ಎಂದರು.
ಹಣ ಯಾವಾಗ ಜಮೆ?
![](https://karnatakatimes.com/wp-content/uploads/2024/06/Anna-Bhagya-Yojana-4-300x156.jpg)
ಅನ್ನಭಾಗ್ಯ ಯೋಜನೆಯ ಹಣ (Anna Bhagya Money) ಈ ತಿಂಗಳು ಈಗಾಗಲೆ ಕೆಲವು ಫಲಾನುಭವಿಗಳ ಖಾತೆಗೆ ಬಿಡುಗಡೆ ಯಾಗಿದ್ದು ಜುಲೈ ತಿಂಗಳ ಹಣವೂ ಜುಲೈ 10 ರ ಒಳಗೆ ದಾಖಲೆ ಸರಿಇದ್ದ ಎಲ್ಲಾ ಫಲಾನುಭವಿಗಳ ಖಾತೆಗೆ ಬಿಡುಗಡೆ ಯಾಗಬಹುದು. ಹಣ ಜಮೆಯಾಗಿರು ವ ಬಗ್ಗೆ ತಿಳಿಯಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು.
advertisement