Electricity Bill: ಟಾಟಾ ಹಾಗೂ ಅಂಬಾನಿ ಅವರಿಂದ ಕರೆಂಟ್ ಬಿಲ್ ಕಟ್ಟೋರಿಗೆ ಗುಡ್ ನ್ಯೂಸ್!
![](https://karnatakatimes.com/wp-content/uploads/2024/07/Good-news-for-Electricity-Bill-payer-from-Tata-and-Ambani.jpg)
advertisement
ಭಾರತದ ಮಾರುಕಟ್ಟೆಯಲ್ಲಿ ಯಾವುದಾದರೂ ಎರಡು ಬ್ರಾಂಡ್ ಯಾವುದೇ ಅನುಮಾನವಿಲ್ಲದೆ ದೀರ್ಘಕಾಲಿಕವರೆಗೆ ಅತ್ಯುತ್ತಮವಾಗಿ ಲಾಭವನ್ನು ಗಳಿಸುತ್ತದೆ ಅಂದರೆ ಅದು ಖಂಡಿತವಾಗಿ ರತನ್ ಟಾಟಾ (Ratan Tata) ಅವರ ಮುಂದಾಳತ್ವದಲ್ಲಿ ಇರುವಂತಹ ಟಾಟಾ ಗ್ರೂಪ್ ಆಫ್ ಕಂಪನೀಸ್ ಹಾಗೂ ಮುಕೇಶ್ ಅಂಬಾನಿ (Mukesh Ambani) ಅವರ ನೇತೃತ್ವದಲ್ಲಿ ಇರುವಂತಹ ರಿಲಯನ್ಸ್ ಕಂಪನಿ.
ಎರಡು ಕಂಪನಿಗಳು ಕೂಡ ಭಾರತ ದೇಶದಲ್ಲಿ ಸಾಕಷ್ಟು ವರ್ಷಗಳ ಹಿಸ್ಟರಿಯನ್ನು ಹೊಂದಿದೆ ಹಾಗೂ ಭಾರತ ದೇಶದ ಸಾಕಷ್ಟು ಯುವಕ ಯುವತಿಯರಿಗೆ ಹಾಗೂ ಪ್ರತಿ ವರ್ಗದ ಜನರಿಗೆ ಉದ್ಯೋಗವನ್ನು ನೀಡುವಂತಹ ಕೆಲಸವನ್ನು ಮಾಡಿದ್ದು ಭಾರತದ ಬೆಳವಣಿಗೆಯಲ್ಲಿ ಈ ಕಂಪನಿಗಳು ಪ್ರಮುಖ ಪಾತ್ರವನ್ನು ವಹಿಸಿದ್ದಾವೆ ಅಂತ ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ಹೇಳಬಹುದಾಗಿದೆ.
ಸದ್ಯದ ಮಟ್ಟಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು ವಿದ್ಯುತ್ ಮೇಲಿರುವಂತಹ ಬೆಲೆ ಕೂಡ ಹೆಚ್ಚಾಗಿದೆ. ಪ್ರತಿಯೊಬ್ಬರಿಗೂ ಕೂಡ ಈ ವಿದ್ಯುತ್ ಬಿಲ್ (Electricity Bill) ಅನ್ನು ಕಟ್ಟುವಂತಹ ಶಕ್ತಿ ಇರೋದಿಲ್ಲ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ.
ಕೆಲವರು ಗ್ರಹ ಜ್ಯೋತಿ ಯೋಜನೆ (Gruha Jyothi Yojana) ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ನಿಜ ಅದೇ ರೀತಿಯಲ್ಲಿ ವಿದ್ಯುತ್ ಬಳಕೆಯ ವಿದ್ಯುತ್ ಮೇಲೆ ಬೆಲೆ ಏರಿಕೆ ಕೂಡ ಆಗಿರುವುದನ್ನು ನೀವು ಇಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ನಾವು ಪರ್ಯಾಯಮಾರ್ಗವನ್ನು ಹುಡುಕಿಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ ಹಾಗೂ ಈ ರೀತಿಯ ವಿದ್ಯುತ್ ಬಳಕೆ ಪ್ರಾಕೃತಿಕ ದೃಷ್ಟಿಯಲ್ಲಿ ಅಷ್ಟೊಂದು ಪರಿಸರ ಸ್ನೇಹಿ ಕೂಡ ಆಗಿಲ್ಲ ಅನ್ನೋದನ್ನ ನಾವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.
ವಿದ್ಯುತ್ ಬಿಲ್ ಕಟ್ಟೋರಿಗೆ ಟಾಟಾ ಹಾಗೂ ರಿಲಯನ್ಸ್ ಕಂಪನಿಯಿಂದ ಗುಡ್ ನ್ಯೂಸ್ ಸಿಗಲಿದೆ:
advertisement
![](https://karnatakatimes.com/wp-content/uploads/2024/07/Tata-and-Reliance-300x156.jpg)
ಸಮಾಜಕ್ಕೆ ಒಂದೊಳ್ಳೆಯ ವಸ್ತುವನ್ನು ಅಥವಾ ಸಿಸ್ಟಮ್ ಅನ್ನು ನೀಡಬೇಕು ಎನ್ನುವಂತಹ ಯೋಚನೆಯನ್ನು ಟಾಟಾ (Tata) ಸಂಸ್ಥೆ ಕಳೆದ ಸಾಕಷ್ಟು ದಶಕಗಳಿಂದಲೂ ಕೂಡ ತೋರಿಸಿಕೊಂಡು ಬಂದಿದೆ ಅನ್ನೋದನ್ನ ನೀವೆಲ್ಲರೂ ಕೂಡ ತಿಳಿದುಕೊಂಡಿದ್ದೀರಿ. ಇನ್ನು ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವಂತಹ ಮುಕೇಶ್ ಅಂಬಾನಿಯವರು (Mukesh Ambani) ಕೊಡು ತಮ್ಮ ರಿಲಯನ್ಸ್ ಇಂಡಸ್ಟ್ರಿಯ (Reliance Industries) ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂಥ ಬೇರೆ ಬೇರೆ ಸಂಸ್ಥೆಗಳ ಮುಖ್ಯಸ್ಥರಾಗಿ ಈಗಾಗಲೇ ತಮ್ಮ ಕೊಡುಗೆಯನ್ನು ಕೂಡ ನೀಡಿದ್ದಾರೆ ಅನ್ನೋದನ್ನ ನಾವಿಲ್ಲಿ ಮರೆಯುವ ಹಾಗಿಲ್ಲ.
ರಿಲಯನ್ಸ್ ಟ್ರಸ್ಟ್ (Reliance Trust) ಮೂಲಕ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ತಪಾಸಣೆಯ ಅವಕಾಶಗಳನ್ನು ಕೂಡ ಸಾಕಷ್ಟು ವರ್ಷಗಳಿಂದ ನೀಡಿಕೊಂಡು ಬರುತ್ತಿದ್ದಾರೆ ಇದರ ಬಗ್ಗೆ ಎಲ್ಲರೂ ಕೂಡ ಮಾತನಾಡಿರುವುದು ಅತ್ಯಂತ ಕಡಿಮೆ ಎಂದು ಹೇಳಬಹುದಾಗಿದೆ. ಇನ್ನು ಟಾಟಾ (Tata) ಅವರ ಬಗ್ಗೆ ಮಾತನಾಡುವ ಅವಶ್ಯಕತೆನೆ ಇಲ್ಲ. ಯಾಕೆಂದರೆ ಲಾಕ್ಡೌನ್ ಸಂದರ್ಭದಲ್ಲಿ 1500 ಕೋಟಿಗಿಂತ ಹೆಚ್ಚಿನ ದಾನವನ್ನು ಮಾಡಿದ್ದ ರತನ್ ಟಾಟಾ (Ratan Tata) ದೇಶಕ್ಕೆ ಬೇಕಾದರೆ ನನ್ನ ಇಡೀ ಆಸ್ತಿಯನ್ನೇ ನಾನು ದಾನ ಮಾಡೋದಕ್ಕೆ ಸಿದ್ಧನಾಗಿದ್ದೇನೆ ಎನ್ನುವಂತಹ ಧೈರ್ಯದ ಮಾತುಗಳನ್ನು ಆಡಿದರು.
![](https://karnatakatimes.com/wp-content/uploads/2024/07/Solar-Electric-System-300x156.jpg)
ಇನ್ನು ಹೆಚ್ಚುತ್ತಿರುವಂತಹ ವಿದ್ಯುತ್ ಬಳಕೆ ಹಾಗೂ ಬಿಲ್ (Electricity Bill) ಮತ್ತು ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಕೂಡ ಸಾಕಷ್ಟು ಕೊರತೆಗಳು ಎದ್ದು ಕಾಣುತ್ತಿರುವಂತಹ ಬೆನ್ನಲ್ಲಿ ಟಾಟಾ (Tata) ಹಾಗೂ ರಿಲಯನ್ಸ್ (Reliance ) ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ತಯಾರಿಸಬಹುದಾದಂತಹ ಸುಲಭವಾದ ಸೋಲಾರ್ ಎಲೆಕ್ಟ್ರಿಸಿಟಿ ಸಿಸ್ಟಮ್ (Solar Electric System) ಅನ್ನು ದೇಶದ ಮನೆಮನೆಗೂ ಕೂಡ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡುವುದಕ್ಕೆ ಪ್ಲಾನಿಂಗ್ ನಡೆಸಿವೆ ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ಇದು ನಿಜವಾಗಿದ್ದೆ ಆದಲ್ಲಿ ಖಂಡಿತವಾಗಿ ಮುಂದಿನ ದಿನಗಳಲ್ಲಿ ಭಾರತ ದೇಶದಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳನ್ನು ನಾವು ನೋಡೋದಕ್ಕೆ ಸಾಧ್ಯ ಇರುವುದಿಲ್ಲ.
advertisement