Lakshmi Hebbalkar: 11 ಮತ್ತು 12 ಕಂತಿನ ಹಣ ಸಿಗದವರರಿಗೆ ಲಕ್ಹ್ಮೀ ಹೆಬ್ಬಾಳ್ಕರ್ ಧೀಡಿರ್ ಅಪ್ಡೇಟ್!
![Gruha Lakshmi Money](https://karnatakatimes.com/wp-content/uploads/2024/07/Lakshmi-Hebbalkar-made-new-Update-for-those-who-did-not-get-Gruha-Lakshmi-11th-and-12th-installment.jpg)
advertisement
ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ಯೋಜನೆಯಾಗಿರುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ತಿಂಗಳು ನಿಯಮಿತವಾಗಿ ಆ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿರುವಂತಹ ಮಹಿಳೆಯರ ಖಾತೆಗೆ ವರ್ಗಾವಣೆ ಆಗುತ್ತಲೇ ಇದೆ. ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಸಿಸ್ಟಮ್ ಮೂಲಕ ಈ ಹಣವನ್ನ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಖಾತೆಗೆ ಹಣ ಇನ್ನು ಕೂಡ ಬಂದಿಲ್ಲ ಅನ್ನುವುದಾಗಿ ಕೆಲವೊಂದು ಆರೋಪಗಳು ಕೂಡ ಕೇಳಿ ಬರ್ತಾ ಇದೆ ಅವುಗಳ ಬಗ್ಗೆ ಕೂಡ ಇವತ್ತಿನ ಈ ಲೇಖನದ ಮೂಲಕ ಹೊರಟಿದ್ದೇವೆ.
11 ಹಾಗೂ 12ನೇ ಕಂತಿನ ಬಗ್ಗೆ ಅಪ್ಡೇಟ್ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್:
ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಮತ್ತೊಂದು ಲಾಭಾ ಅಥವಾ ಉತ್ತಮ ಬೆಳವಣಿಗೆ ಏನು ಅಂತ ಅಂದ್ರೆ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಗೃಹಲಕ್ಷ್ಮಿ ಯೋಜನೆಯ ಹಣದ ವರ್ಗಾವಣೆಯ ಬಗ್ಗೆ ವಿಶೇಷವಾದ ಆಸಕ್ತಿಯನ್ನು ತೋರಿಸಿ ಅದು ಸರಿಯಾದ ಸಮಯದಲ್ಲಿ ಮಹಿಳೆಯರಿಗೆ ಖಾತೆಗೆ ವರ್ಗಾವಣೆ ಆಗೋ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.
advertisement
ಇನ್ನು ಈ ಯೋಜನೆ ಅಡಿಯಲ್ಲಿ ಕಂಡುಬರುವಂತಹ ಕೆಲವೊಂದು ಸಮಸ್ಯೆಗಳನ್ನು ಕೂಡ ಕ್ಷಿಪ್ರಗತಿಯಲ್ಲಿ ಪರಿಹಾರ ಮಾಡುವಂತಹ ಕೆಲಸವನ್ನು ಕೂಡ ಅವರಿಂದ ನಾವು ಈ ಸಂದರ್ಭದಲ್ಲಿ ನೋಡಬಹುದಾಗಿದೆ.
ಇನ್ನು ಕಳುಹಿಸಬೇಕಾಗಿದ್ದ 11 ಹಾಗೂ 12ನೇ ಕಂತಿನ ಹಣವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಸರ್ಕಾರದ ಕಡೆಯಿಂದ ವರ್ಗಾವಣೆ ಮಾಡಲಾಗಿದೆ ಎನ್ನುವಂತಹ ಅಪ್ಡೇಟ್ ಅನ್ನು ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ನೀಡಿದ್ದಾರೆ.
![](https://karnatakatimes.com/wp-content/uploads/2024/07/Gruha-Lakshmi-Money-3-300x156.jpg)
ಕೆಲವರು ಇನ್ನೂ ಕೂಡ ನಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದಾಗಿ ಹೇಳ್ತಾ ಇದ್ದಾರೆ ಅದಕ್ಕೆ ಕೂಡ ಮಾಹಿತಿಯನ್ನು ನೀಡಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸರ್ಕಾರದ ಕಡೆಯಿಂದ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಇದು ಒಂದೆರಡು ದಿನಗಳ ಕಾಲ ಲೇಟ್ ಆಗಬಹುದು ಆದರೆ ಖಂಡಿತವಾಗಿ ಹಣ ನಿಮ್ಮ ಖಾತೆಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಈ ಮೂಲಕ ಅವರು ಗೃಹಲಕ್ಷ್ಮಿ (Gruha Lakshmi) ಫಲಾನುಭವಿಗಳ ಭರವಸೆಯನ್ನು ಇನ್ನಷ್ಟು ಬಲಪಡಿಸಲು ಹೇಳಿದ್ದಾರೆ.
ಹೀಗಾಗಿ ಹಣ ವರ್ಗಾವಣೆ ಆದ್ಮೇಲೆ ಕೂಡ ಯಾಕೆ ಬರ್ತಾ ಇಲ್ಲ ಅನ್ನುವುದಾಗಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ, ಕೆಲವೊಂದು ಚಿಕ್ಕ ಪುಟ್ಟ ಸಮಸ್ಯೆಗಳಿಂದಾಗಿ ಒಂದೆರಡು ದಿನಗಳು ತಡವಾಗಬಹುದು ಆದರೆ ಹಣ ಖಂಡಿತವಾಗಿ ನಿಮ್ಮ ಖಾತೆಯನ್ನು ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಸಚಿವರೆ ಹೇಳಿರುವಾಗ ಯಾವುದೇ ಚಿಂತೆ ಮಾಡಬೇಕಾದ ಅಗತ್ಯವಿಲ್ಲ.
advertisement