Gruha Lakshmi Money: ಇಲ್ಲಿಯವರಿಗೆ ಎಲ್ಲಾ ಕಂತಿನ ಗೃಹ ಲಕ್ಷ್ಮಿ ಹಣ ಪಡೆದವರಿಗೆ ಹೊಸ ಆದೇಶ! ಮುಖ್ಯವಾದ ಮಾಹಿತಿ
![](https://karnatakatimes.com/wp-content/uploads/2024/06/New-order-for-those-who-have-received-all-installments-of-Gruha-Lakshmi-Money-.jpg)
advertisement
ಮಹಿಳೆಯರು ಆರ್ಥಿಕ ವಾಗಿ ಸಬಲ ಆಗಬೇಕು,ಅವರಿಗೂ ಮೂಲಭೂತ ಅವಶ್ಯಕ ವಸ್ತು ಗಳನ್ನು ಖರೀದಿ ಮಾಡುವಂತೆ ಆಗಬೇಕು ಎಂದು ರಾಜ್ಯ ಸರಕಾರವು ಈ ಭಾರಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ ಜಾರಿ ಮಾಡಿದೆ.ಈಗಾಗಲೇ ಮಹಿಳೆಯರು ಗೃಹಲಕ್ಷ್ಮಿ ಯೋಜನೆ (Gruha Lakshmi Yojana)ಗೆ ನೊಂದಣಿ ಮಾಡುವ ಮೂಲಕ ಎರಡು ಸಾವಿರ ಹಣವನ್ನು ಪ್ರತಿ ತಿಂಗಳು ಕೂಡ ಪಡೆ ಯುತ್ತಿದ್ದಾರೆ.
ಇದುವರೆಗೆ ಹತ್ತು ಕಂತಿನ ವರೆಗೆ ಈ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆ ಯಾಗಿದೆ.ಆದರೆ ಈಗಾಗಲೇ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಮಹಿಳಾ ಫಲಾನು ಭವಿಗಳಿಗೆ ಇದೀಗ ಹೊಸ ಆದೇಶ ಒಂದು ಬಂದಿದ್ದು ಯಾವುದು ಈ ಮಾಹಿತಿ ಎಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ.
ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಜಯ ಗಳಿಸದೇ ಇದ್ದಲ್ಲಿ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗಲಿದೆ ಎನ್ನುವ ಮಾಹಿತಿ ಫಲಿತಾಂಶ ಬರುವ ಮೊದಲೇ ಸುದ್ದಿಯಾಗಿತ್ತು. ಆದರೆ ಇದೀಗ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟನೆ ಪಡಿಸಿದ್ದಾರೆ. ಇದರ ನಡುವೆ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರು ಈ ಕೆಲಸ ಕಡ್ಡಾಯ ಮಾಡಬೇಕು ಎನ್ನುವ ಅಪ್ಡೇಟ್ ಮಾಹಿತಿ ಕೂಡ ಬಂದಿದ್ದು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬರಬೇಕಾದರೆ ಈ ಕೆಲಸ ಕಡ್ಡಾಯವಾಗಿ ಮಾಡಬೇಕು.
![](https://karnatakatimes.com/wp-content/uploads/2024/06/Gruha-Lakshmi-Money-5-300x156.jpg)
advertisement
ಹೌದು ಗೃಹಲಕ್ಷ್ಮಿ ಹಣ ಬರಬೇಕಾದರೆ ಆಧಾರ್ ಅಪ್ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಆಧಾರ್ ಅಪ್ಡೇಟ್ (Aadhaar Card Update) ಮಾಡಿಸದೇ ಇದ್ದಲ್ಲಿ 10 ವರ್ಷದ ಹಿಂದಿನ ಆಧಾರ್ ರಿಜೆಕ್ಟ್ ಆಗಲಿದೆ. ಇದರಿಂದ ಯಾವ ಸರ್ಕಾರಿ ಯೋಜನೆಯ ಹಣವು ನಿಮಗೆ ಬರಲ್ಲ. ಹಾಗಾಗಿ ಈ ಆದೇಶವನ್ನು ಸರಕಾರ ನೀಡಿದೆ ಇಂದು ಆಧಾರ್ ಕಾರ್ಡ್ ಎನ್ನುವುದು ಬಹಳ ಅಗತ್ಯವಾದ ಪ್ರಮುಖ ದಾಖಲೆಕೂಡ ಆಗಿದೆ.
ರೇಷನ್ ಪಡೆದುಕೊಳ್ಳುವುದರಿಂದ ಹಿಡಿದು ಸರ್ಕಾರದ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ (Aadhaar Card) ಅಗತ್ಯವಿದೆ. ಆದರೆ ಆಧಾರ್ ಇದ್ದ ಕೂಡಲೇ ಸಾಕಾಗಲ್ಲ. ಇದನ್ನು ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ಅನ್ನು 10 ವರ್ಷಗಳಿಂದ ನವೀಕರಿಸುವುದು ಕಡ್ಡಾಯ ಎಂದು UIDAI ತಿಳಿಸಿದೆ.ಇಂದು ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಲು ಅವಕಾಶ ಕೂಡ ಇರಲಿದೆ.
![](https://karnatakatimes.com/wp-content/uploads/2024/06/Gruha-Lakshmi-Yojana-1-300x156.jpg)
ಹಾಗಾಗಿ ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಇದನ್ನು ನವೀಕರಣ ಮಾಡಿ. ಆಧಾರ್ ಕಾರ್ಡ್ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ಇರಲಿದ್ದು ಸುಲಭ ವಾಗಿ ಮಾಡಬಹುದಾಗಿದೆ.
ಅದೇ ರೀತಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣವೂ ಕೂಡ ನಿಮ್ಮ ಖಾತೆಗೆ ಬರಬೇಕಾದರೆ ಆಧಾರ್ ಕಾರ್ಡ್ ನವೀಕರಣ ಕಡ್ಡಾಯ ವಾಗಿದೆ.ಹಾಗಾಗಿ ಇಲ್ಲಿಯವರೆಗೆ ಹಣ ಜಮೆಯಾಗಿದೆ ಎಂದು ಸುಮ್ಮನೆ ಇರಬೇಡಿ, ಈ ಕೆಲಸ ಮಾಡದಿದ್ದರೆ ಬಿಡುಗಡೆ ಗೊಳ್ಳುವ ಹಣವೂ ಸ್ಥಗಿತ ಆಗಲಿದೆ. ಹಾಗಾಗಿ ಈ ಕೆಲಸ ಮೊದಲು ಮಾಡಿ.
advertisement