LPG Cylinder: ಕೇಂದ್ರ ಸರ್ಕಾರದಿಂದ LPG ಗ್ಯಾಸ್ ಬಳಕೆದಾರರಿಗೆ ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ
![](https://karnatakatimes.com/wp-content/uploads/2024/06/Good-news-for-LPG-Cylinder-users-from-Central-Govt.jpg)
advertisement
ಭಾರತದ ಪ್ರತಿ ಮನೆಗಳಲ್ಲಿಯೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳ ಬಳಕೆಯಾಗುತ್ತಿದೆ ಬಡ ಹಾಗೂ ಮಧ್ಯಮ ವರ್ಗದ ಜನರ ಮನೆಯಲ್ಲಿಯೂ ಸರ್ಕಾರ ಬಿಡುಗಡೆ ಮಾಡಿರುವ ಉಜ್ವಲ ಯೋಜನೆಯಿಂದಾಗಿ ಗ್ಯಾಸ್ ಸಂಪರ್ಕವಿದೆ (Gas Connection). ಹೀಗೆ ಕೋಟ್ಯಾಂತರ ಗ್ರಾಹಕರು ಉಪಯೋಗಿಸುತ್ತಿರುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG Cylinder) ಗಳ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಕಾಣುತ್ತಲಿರುತ್ತದೆ. ಅದರಲ್ಲೂ ಕಳೆದ ಕೆಲವು ತಿಂಗಳಿಂದ ಎಪಿಜಿ ಸಿಲಿಂಡರ್ ಗಳ ಬೆಲೆ ದುಬಾರಿಯಾಗಿರುವ ಕಾರಣ ಜನರು ಸರ್ಕಾರಕ್ಕೆ ಬೆಲೆಯನ್ನು ಕಡಿಮೆ ಮಾಡುವಂತ ಕೇಳಿಕೊಂಡಿದ್ದರು. ಇದೀಗ ಚುನಾವಣೆ ಮುಗಿದ ಬಳಿಕ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಎಲ್ಪಿಜಿ ಸಿಲಿಂಡರ್ಗಳ ಪ್ರಸ್ತುತ ಪರಿಸ್ಥಿತಿ:
![](https://karnatakatimes.com/wp-content/uploads/2024/06/Ujjwala-Scheme-300x156.jpg)
ಸದ್ಯದ ದಿನಮಾನಗಳಲ್ಲಿ ಉಜ್ವಲ ಯೋಜನೆಯಲ್ಲದ ಎಲ್ ಪಿ ಜಿ ಸಿಲಿಂಡರ್ ಗಳು ದೇಶದಾದ್ಯಂತ ಬರೋಬ್ಬರಿ 900 ರೂಪಾಯಿ ಹಣವನ್ನು ದಾಟಿದೆ ಅದರಂತೆ ಉಜ್ವಲ ಯೋಜನೆಯ (Ujjwala Scheme) ಸೌಲಭ್ಯ ಪಡೆದುಕೊಂಡು ಸಿಲಿಂಡರ್ ಖರೀದಿ ಮಾಡುತ್ತಿರುವ ಗ್ರಾಹಕರು ಸರಾಸರಿ 600 ರೂಪಾಯಿ ಹಣವನ್ನು ನೀಡಿ ಎಲ್ಪಿಜಿ ಸಿಲಿಂಡರ್ (LPG Cylinder) ಗಳನ್ನು ಖರೀದಿಸುತ್ತಿದ್ದಾರೆ. ಈ ಬೆಲೆಯು ದೇಶದ ಬಹುತೇಕ ರಾಜ್ಯಗಳಲ್ಲಿ ಒಂದೇ ರೀತಿ ಇದ್ದು, ಕೆಲ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾತ್ರ ಕಾಣಬಹುದು.
advertisement
ಸರ್ಕಾರದಿಂದ ಎಲ್ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ:
![](https://karnatakatimes.com/wp-content/uploads/2024/06/LPG-Cylinder-Subsidy-1-300x156.jpg)
ಚುನಾವಣೆ ಮುಗಿದು ಸತತ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆ ಮನೆಯಲ್ಲಿಯೂ ಬಳಸಲಾಗುತ್ತಿರುವ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ನೂರು ರೂಪಾಯಿ ಹಣವನ್ನು ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಮುಂದಿನ ತಿಂಗಳು 900 ಹಣವನ್ನು ಪಾವತಿಸಿ ಪಡೆದುಕೊಳ್ಳುತ್ತಿದ್ದ ಗ್ರಾಹಕರು ಕೇವಲ 800 ಖರೀದಿಸಬಹುದು.
ಎಲ್ಪಿಜಿ ಮೇಲಿನ ಸಬ್ಸಿಡಿ ಹಣವನ್ನು ಹೆಚ್ಚಿಸುವ ಸಾಧ್ಯತೆ:
ಕೇವಲ ಬೆಲೆಯನ್ನು ಏರಿಕೆ ಮಾಡುವುದಲ್ಲದೆ ಬಡ ಅಥವಾ ಉಜ್ವಲ ಯೋಜನೆಯಿಂದ ದೊರಕುತ್ತಿರುವ ಎಲ್ಪಿಜಿ ಸಿಲಿಂಡರ್ಗಳ ಮೇಲಿನ ಸಬ್ಸಿಡಿ ಹಣವನ್ನು ಏರಿಕೆ ಮಾಡುವ ಭರವಸೆಯನ್ನು ಮೋದಿ ಸರ್ಕಾರ ನೀಡಿದೆ. ಇದರಿಂದ ಅತಿ ಕೆಳ ಮಟ್ಟದ ಅರ್ಥಿಕ ಪರಿಸ್ಥಿತಿ (Low Financial Situation) ಯನ್ನು ಹೊಂದಿರುವ ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ (Middle Class Consumers) ಬಹಳ ಉಪಯೋಗವಾಗಲಿದೆ. ಹೀಗೆ ಸಾಮಾನ್ಯ ಜನರ ಅನುಕೂಲತೆಗೆ ತಕ್ಕನಾದ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಾ ಜನರ ಹಿತ ಶಕ್ತಿಯತ್ತ ಕೇಂದ್ರ ಸರ್ಕಾರವು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.
advertisement