Jasprit Bumrah: ನಿವೃತ್ತಿಯ ಬಗ್ಗೆ ತನ್ನ ಅಂತಿಮ ನಿರ್ಧಾರ ಬಿಸಿಸಿಐಗೆ ತಿಳಿಸಿದ ಬುಮ್ರಾ! ಈ ಕ್ಷಣದ ಅಪ್ಡೇಟ್
![](https://karnatakatimes.com/wp-content/uploads/2024/07/Jasprit-Bumrah-told-BCCI-his-final-decision-about-retirement.jpg)
advertisement
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅದರಲ್ಲೂ ವಿಶೇಷವಾಗಿ ಟಿ20 ಫಾರ್ಮಟ್ ನಲ್ಲಿ ನಿವೃತ್ತಿಯ ಪರ್ವ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಈ ಬಾರಿ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ (T20 World Cup) ಗೆದ್ದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ ಪ್ರಮುಖ ಬ್ಯಾಟ್ಸ್ ಮ್ಯಾನ್ ಆಗಿರುವಂತಹ ವಿರಾಟ್ ಕೊಹ್ಲಿ (Virat Kohli) ಹಾಗೂ ಸೂಪರ್ ಸ್ಟಾರ್ ರೌಂಡರ್ ಆಗಿರುವಂತಹ ರವೀಂದ್ರ ಜಡೇಜಾ ಮೂವರು ಕೂಡ ನಿವೃತ್ತಿಯನ್ನು ಪಡೆದುಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.
ಭವಿಷ್ಯದಲ್ಲಿ ಟಿ20 ವಿಶ್ವಕಪ್ (T20 World Cup) ಅಥವಾ ಟಿ20 ಫಾರ್ಮ್ಯಾಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಯಾವ ರೀತಿಯಲ್ಲಿ ಸಿದ್ಧಗೊಳ್ಳಲಿದೆ ನಾಯಕ ಯಾರಾಗಬಹುದು ಈಗಾಗಲೇ ನಿವೃತ್ತಿಯನ್ನು ಪಡೆದುಕೊಂಡಿರುವಂತಹ ಆಟಗಾರರ ಸ್ಥಾನವನ್ನು ಯಾರು ತುಂಬ ಬಲ್ಲರು ಎನ್ನುವಂತಹ ಲೆಕ್ಕಾಚಾರಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ಹೇಳಬಹುದಾಗಿದೆ.
ಅದರಲ್ಲಿ ವಿಶೇಷವಾಗಿ ಭಾರತ ಕ್ರಿಕೆಟ್ ತಂಡ ಮುಂದಿನ ದಿನಗಳಲ್ಲಿ ಈ ಒಬ್ಬ ಆಟಗಾರರ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ ಎಂಬುದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ. ಹೌದು ನಾವ್ ಮಾತಾಡ್ತಿರೋದು ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ರವರ ಬಗ್ಗೆ.
advertisement
ನಿವೃತ್ತಿಯ ಬಗ್ಗೆ ಜಸ್ಪ್ರೀತ್ ಬುಮ್ರಾ ಹೇಳಿದ್ದೇನು ಗೊತ್ತಾ?
![](https://karnatakatimes.com/wp-content/uploads/2024/07/Jasprit-Bumrah-1-300x156.jpg)
ಜಸ್ಪ್ರೀತ್ ಬುಮ್ರಾ (Jasprit Bumrah) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಇರುವಂತಹ ಅತ್ಯಂತ ಪ್ರಮುಖ ಆಟಗಾರ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಇವರ ಬಗ್ಗೆ ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ಹೊಂದಬಹುದು ಎನ್ನುವ ರೀತಿಯಲ್ಲಿ ಅಥವಾ ನೆಕ್ಸ್ಟ್ ನಿವೃತ್ತಿಯಾಗುವಂತಹ ಆಟಗಾರ ಇವರೇ ಅಂತ ಹೇಳೋ ರೀತಿಯಲ್ಲಿ ಮಾತುಕತೆಗಳು ಚರ್ಚೆಗಳು ನಡೆಯುತ್ತವೆ. ಇದರ ಬಗ್ಗೆ ಈಗ ಖುದ್ದಾಗಿ ಜಸ್ಪ್ರೀತ್ ಬುಮ್ರಾ (Jasprit Bumrah) ರವರೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸದ್ಯದ ಮಟ್ಟಿಗೆ ಖಂಡಿತವಾಗಿ ನಾನು ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ ಯಾಕೆಂದರೆ ನಾನು ಕ್ರಿಕೆಟ್ ಆಡೋದು ಇನ್ನು ತುಂಬಾ ವರ್ಷ ಇದೆ ಅನ್ನೋ ರೀತಿಯಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಹೇಳಿಕೊಂಡಿದ್ದಾರೆ. ಈ ಮೂಲಕ ಅವರ ನಿವೃತ್ತಿಯ ಬಗ್ಗೆ ಇರುವಂತಹ ಎಲ್ಲಾ ವದಂತಿಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಎಂದು ಹೇಳಬಹುದಾಗಿತ್ತು ಈ ಬಗ್ಗೆ ಇನ್ನು ಮುಂದೆ ಯಾವುದೇ ಚರ್ಚ್ ನಡೆಯಬೇಕಾದ ಅಗತ್ಯ ಇಲ್ಲ ಅನ್ನೋದನ್ನ ಕ್ರಿಕೆಟ್ ವಲಯಗಳು ತಿಳಿದುಕೊಳ್ಳಬೇಕಾಗಿದೆ.
advertisement