Bigg Boss 10: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರಾ ಈ ಸ್ಪರ್ಧಿ?
ಜನಪ್ರಿಯ ರಿಯಾಲಿಟಿ ಶೋ ನಲ್ಲಿ ಒಂದಾದ ಬಿಗ್ ಬಾಸ್ ಮನೆ ದಿನ ದಿನ ವ್ಯಕ್ತಿಗಳ ನೈಜ ವ್ಯಕ್ತಿತ್ವವನ್ನು ಬಯಲಿಗೆಳೆಯುತ್ತಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ 10 (Bigg Boss 10) ಗ್ರ್ಯಾಂಡ್ ಓಪನಿಂಗ್ ಅನ್ನು ಪಡೆದಿದ್ದು ಸ್ಪರ್ಧೆ ಕೂಡ ಜೋರಾಗೇ ಏರ್ಪಟ್ಟಿದೆ. ಈ ಮೂಲಕ ಸ್ಪರ್ಧೆ ಆರಂಭದಲ್ಲಿ ಇದ್ದ ಸ್ಪರ್ಧಿಗಳಿಗೆ ಇದ್ದ ಜೋಶ್ ಈಗ ಮತ್ತಷ್ಟು ಬಿಗುಡಾಯಿಸುತ್ತಿದೆ. ಉತ್ತಮ ಆಟ ಪ್ರದರ್ಶಿಸುವ ಸಲುವಾಗಿ ಮಿತ್ರರು ಶತ್ರುಗಳಾಗಿದ್ದು ಇದೆ ಶತ್ತುಗಳು ಮಿತ್ರರಾದದ್ದು ಇದೆ.
ಈ ಬಾರಿಯ ಸೀಸನ್ ಆರಂಭವಾದಾಗ ಯಾರು ಈ ಸಲದ ವಿನ್ನರ್ಸ್ ಎಂಬುದೇ ಗೊಂದಲ. ಪ್ರತೀ ಬಾರಿಯಂತೆ ಎಲಿಮಿನೆಟ್ ಬಂದಾಗ ಹೆಚ್ಚು ಪ್ರಚಲಿತದಲ್ಲಿಲ್ಲದೆ ಹಾಗೂ ಸರಿಯಾಗಿ ತಮ್ಮ ಗೇಮ್ ಆಡದೆ ಬಹುಬೇಗನೆ ದೊಡ್ಮನೆಯಿಂದ ನಿರ್ಗಮಿಸಿದ್ದು ಇದೆ. ಈ ನಡುವೆ ಹೇಗಾದರೂ ತಾವು ಕೊನೆ ತನಕ ಉಳಿಯಬೇಕು ಎಂಬ ನೆಲೆಯಲ್ಲಿ ಸ್ಟ್ಯಾಟರ್ಜಿ (Stratergy) ಸಹ ಬಳಸುತ್ತಿದ್ದಾರೆ. ಕೂಗಾಡಿ ಗಲಾಟೆ ಮಾಡಿದರೆ ಕೊನೆ ತನಕ ಇರ್ತೇವೆ ಎಂಬ ಮನಸ್ಥಿತಿ ಸಹ ನಿರ್ಮಾಣ ಆಗಿದೆ ಹಾಗಾಗಿ ಬಿಗ್ ಬಾಸ್ ಮನೆ ಅಕ್ಷರಶ ರಣರಂಗವಾಗುತ್ತಿದೆ.
ವಾರಕ್ಕೆ ಒಂದು ಎಲಿಮಿನೇಟ್ ಇದ್ದು ಕಳೆದ ಬಾರಿ ಇಶಾನಿ ಮತ್ತು ಭಾಗ್ಯಶ್ರೀ ಮನೆಯಿಂದ ಹೊರಹೋದರು. ಅದೇ ರೀತಿ ಈ ಬಾರಿ ಕೂಡ ಮನೆ ಒಬ್ಬರು ಸದಸ್ಯರು ಮನೆ ಬಿಟ್ಟು ಹೋಗಬೇಕಾಗುವ ಕಾರಣ ಆ ವ್ಯಕ್ತಿ ಯಾರಾಗಬಹುದು ಎಂಬುದೇ ಅಲ್ಲಿನ ಪ್ರಶ್ನೆಯಾಗಿದೆ. ಈ ಬಾರಿ ಎರಡು ಬಣವಾಗಿ ಟೀಂ ಆಟ ಆಡಿ ಬಚಾವಾಗಿದ್ದಾರೆ. ಬಹುತೇಕ ಎಲ್ಲ ಸ್ಪರ್ಧಿಗಳು ಉತ್ತಮ ಆಟವನ್ನೇ ಆಡಿದ್ದು ಯಾರು ಹೋಗಬಹುದು ಎಂಬ ಅನುಮಾನ ಕುತೂಹಲ ಬಿಗುವಾಗುತ್ತಿದೆ.
ಈ ಬಾರಿ ನಾಮಿನೇಶನ್ ನಲ್ಲಿ ನಮೃತಾ (Namrata), ಸ್ನೇಹಿತ್ (Snehith), ವಿನಯ್ (Vinay), ತುಕಾಲಿ ಸಂತೋಷ್ (Tukali santosh), ಸಂಗೀತಾ (Sangeetha), ತನಿಶಾ (Tanisha), ಸಿರಿ (Siri), ನೀತು (Neetu) ಅವರು ಡೇಂಜರ್ ಜೋನ್ ನಲ್ಲಿದ್ದಾರೆ. ಹಾಗಾಗಿ ಯಾರು ಮನೆಯಿಂದ ಹೊರ ಹೋಗಬಹುದು ಎಂಬುದು ದೊಡ್ಡ ಮಟ್ಟಿನ ಕುತೂಹಲ ಸೃಷ್ಟಿ ಮಾಡಿದೆ. ಈ ಬಾರಿ ಸಂಗೀತಾ ಅವರು ಕಾರ್ತಿಕ್ ನಡುವೆ ಮುನಿಸಿಕೊಂಡು ವಿನಯ್ ಜೋತೆ ಕ್ಲೋಸ್ ಆಗಿದ್ದಾರೆ ಇನ್ನೊಂದೆಡೆ ಮೈಕಲ್ ಸಾಫ್ಟ್ ಗೇಮ್ ಆಡಿ ನೇರ ನುಡಿಯ ಮೂಲಕ ಹೈಲೈಟ್ ಆಗಿದ್ದಾರೆ. ಕಾರ್ತಿಕ್ ಮತ್ತು ತುಕಾಲಿ ನಡುವೆ ಕ್ಯಾಪ್ಟನ್ಸಿ ಜಗಳವಂತೂ ದೊಡ್ಡ ಮಟ್ಟಿಗೆ ನಡೆದಿದ್ದು ಕಾರ್ತಿಕ್ ಸೇಫ್ ಕೂಡ ಆಗಿದ್ದಾರೆ.
ಇವರು ಹೋಗೋ ಸಾಧ್ಯತೆ
ಈ ವಾರ ಬಿಗ್ ಬಾಸ್ ಮನೆಯಿಂದ ಸಿರಿ, ನಮೃತಾ, ಸ್ನೇಹಿತ್ ಅವರಲ್ಲಿ ಒಬ್ಬರೂ ಹೋಗೋ ಸಾಧ್ಯತೆ ಬಹಳ ಇದೆ. ಅದರಲ್ಲಿಯೂ ರಂಗೋಲಿ ಧಾರವಾಹಿ ಖ್ಯಾತಿಯ ಸಿರಿ ಅವರು ಬಹುತೇಕ ಎಲಿಮಿನೆಟ್ ಆಗೋದು ಪಕ್ಕ ಎಂದು ಹೇಳಲಾಗುತ್ತಿದೆ. ಆದರೆ ನೀತು ಕೂಡ ಹೋಗೋ ಚಾನ್ಸ್ ಇದೆ ಎಂದು ಕೆಲ ವೀಕ್ಷಕರು ಅಭಿಪ್ರಾಯಿಸಿದ್ದು ಇಬ್ಬರಲ್ಲಿ ಒಬ್ಬರು ಪಕ್ಕ ಹೋಗ್ತಾರೆ ಎಂಬ ಬಗ್ಗೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಸ್ಪರ್ಧೆ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.