Transgender: ನಿಮಗೂ ಆರ್ಥಿಕ ಸಮಸ್ಯೆ ಇದ್ಯಾ, ಹಾಗಾದ್ರೆ ತ್ರಿಲಿಂಗಿಗಳಿಗೆ ಈ ವಸ್ತುವನ್ನು ದಾನ ಮಾಡಿ ರಾತ್ರೋರಾತ್ರಿ ಶ್ರೀಮಂತರಾಗುತ್ತೀರಿ!
![](https://karnatakatimes.com/wp-content/uploads/2023/12/By-Donating-this-item-to-Transgender-will-become-rich-overnight.jpg)
advertisement
ಸಾಮಾನ್ಯವಾಗಿ ಕೆಲವು ಕಡೆ ಇದೊಂದು ಪದ್ಧತಿ ಚಾಲ್ತಿಯಲ್ಲಿ ಇದೆ ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯ ನಡೆಯುವ ಮೊದಲು ಮದುವೆ ಅಥವಾ ಇನ್ನಿತರ ಕಾರ್ಯಗಳು ನಡೆಯುವಾಗ, ಮನೆಯಲ್ಲಿ ಒಂದು ಹುಟ್ಟು ಸಂಭವಿಸಿದಾಗ ತ್ರಿಲಿಂಗಿಗಳು (Transgender) ಅಥವಾ ಮಂಗಳಮುಖಿಯರನ್ನ ಮನೆಗೆ ಕರೆಸಿ ಅವರಿಂದ ಆಶೀರ್ವಾದ ತೆಗೆದುಕೊಳ್ಳಲಾಗುತ್ತೆ. ಆಶೀರ್ವಾದ ಮಾಡಿದರೆ ಎಂಥವರಾದರೂ ಉದ್ಧಾರ ಆಗುತ್ತಾರೆ ಎಲ್ಲರಿಗೂ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆ ಸಾಕಷ್ಟು ಕಡೆ ಚಾಲ್ತಿಯಲ್ಲಿ ಇದೆ.
ಒಂದು ವೇಳೆ ಮಂಗಳಮುಖಿಯರು ಕೋಪ ಮಾಡಿಕೊಂಡು ಹಾಳಾಗಲಿ ಎಂದು ಶಪಿಸಿದರೆ ಆ ವ್ಯಕ್ತಿ ಸಂಪೂರ್ಣವಾಗಿ ನಾಶವಾಗುತ್ತಾನೆ ಎಂದು ಹೇಳಲಾಗುತ್ತೆ. ಹಾಗಾಗಿ ಮಂಗಳಮುಖಿಯರನ್ನ ಯಾರು ಎದುರು ಹಾಕಿಕೊಳ್ಳದೆ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಇನ್ನು ನೀವು ಮನೆಯಲ್ಲಿ ಬಡತನ ಇದ್ದರೆ ಅದರ ನಿವಾರಣೆಗಾಗಿ ಈ ಕೆಲವು ವಸ್ತುಗಳನ್ನು ಮಂಗಳಮುಖಿಯರಿಗೆ ದಾನ ಮಾಡಿದ್ರೆ ಮನೆಯಲ್ಲಿ ಸದಾ ಹಣ ತುಂಬಿ ತುಳುಕಾಡುತ್ತೆ ಎಂದು ಹೇಳಲಾಗುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಮಾಡಿದ್ರೆ ಒಳ್ಳೆಯದು ನೋಡೋಣ.
ಅಕ್ಕಿ ದಾನ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಗೆ (Transgender) ಅಕ್ಕಿ (Rice) ದಾನ ಮಾಡುವುದು ಬಹಳ ಒಳ್ಳೆಯದು ಬುಧವಾರದ ದಿನ ಅನ್ನ ಅಥವಾ ಅಕ್ಕಿಯನ್ನು ದಾನ ಮಾಡಿದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಐಶ್ವರ್ಯದ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತೆ.
advertisement
Drum or Dholak ದಾನ ಮಾಡುವುದು!
ಮಂಗಳಮುಖಿಯರಿಗೆ (Transgender) ಡೋಲಕ್ ದಾನ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಂಕಷ್ಟವೂ ಇರುವುದಿಲ್ಲ. ಎಲ್ಲಾ ಹಣಕಾಸಿನ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ವ್ಯಾಪಾರದಲ್ಲಿ ಉತ್ತಮ ಲಾಭ ಕಾಣುತ್ತೀರಿ ಎಂದು ಹೇಳಲಾಗುತ್ತದೆ.
ಬಟ್ಟೆಗಳನ್ನು ದಾನ ಮಾಡುವುದು!
ಬುಧವಾರ ಯಾವುದೇ ಮಂಗಳಮುಖಿಯರಿಗೆ ಬಟ್ಟೆ (Clothes) ಅಥವಾ ವಸ್ತ್ರದಾನ ಮಾಡುವುದು ಬಹಳ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಇರುವ ಆರ್ಥಿಕ ಬಿಕ್ಕಟ್ಟನ್ನು ಹೋಗಿಸಲು ಬುಧವಾರದ ದಿನ ತಪ್ಪದೇ ಮಂಗಳಮುಖಿಯರಿಗೆ ಬಟ್ಟೆ ದಾನ ಮಾಡಬೇಕು ಆದರೆ ಹೀಗೆ ದಾನ ಮಾಡಬೇಕಾದರೆ ಹರಿದ ಅಥವಾ ಹಾಳಾದ ಬಟ್ಟೆಯನ್ನು ದಾನ ಮಾಡಬಾರದು ಅದರ ಬದಲು ಸರಿಯಾಗಿರುವಂತಹ ಅಥವಾ ಹೊಸ ಬಟ್ಟೆ ದಾನ ಮಾಡಬೇಕು ಎಂದು ಹೇಳಲಾಗುತ್ತದೆ.
ನಾಣ್ಯಗಳನ್ನು ದಾನ ಮಾಡುವುದು!
ಆರ್ಥಿಕ ಸಮಸ್ಯೆ ತುಂಬಾನೇ ಕಾಡುತ್ತಿದೆ ಎಷ್ಟೇ ದುಡಿದರೂ ಕೈಯಲ್ಲಿ ಹಣ ಇರುವುದಿಲ್ಲ ಎಂದು ಬೇಸರವಾಗುತ್ತಿದೆಯೇ? ಹಾಗಾದ್ರೆ ಚಿಂತೆ ಬೇಡ ಯಾವುದೇ ರೀತಿಯ ಪೂಜೆಯ ಸಮಯದಲ್ಲಿ ವೀಳ್ಯದ ಎಲೆಯ ಮೇಲೆ ಒಂದೇ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಮಂಗಳಮುಖಿಯರಿಗೆ ಕೊಡಬೇಕು ನಂತರ ಆ ಒಂದು ರೂಪಾಯಿ ನಾಣ್ಯವನ್ನು ಅವರಿಂದ ಹಿಂತಿರುಗಿಸಿ ಪಡೆಯಬೇಕು ಈ ರೀತಿ ಮಾಡಿದರೆ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಎಷ್ಟು ಬೇಕಾದರೂ ನಾಣ್ಯವನ್ನು ದಾನ ಮಾಡಿ ಆದ್ರೆ ಮಂಗಳಮುಖಿಯರಿಂದ ಒಂದು ನಾಣ್ಯವನ್ನು ಹಿಂತಿರುಗಿ ಪಡೆಯಲು ಮರೆಯಬೇಡಿ ಈ ರೀತಿ ಮಾಡುವುದರಿಂದ ಮನೆಯಲ್ಲಿ ಝಣ ಝಣ ಕಾಂಚಾಣ ಸದಾ ಇರುತ್ತದೆ ಹೊರತು ಬಡತನ ಇರುವುದಿಲ್ಲ.
advertisement