Karnataka Times
Trending Stories, Viral News, Gossips & Everything in Kannada

Chanakya Niti: ಮನೆಯಲ್ಲಿ ಈ ಐದು ಚಿಹ್ನೆಗಳು ಕಾಣಿಸಿದರೆ ಶ್ರೀಮಂತನು ಬಡವನಾಗುತ್ತಾನೆ, ಎಚ್ಚರಿಕೆಯಿಂದ ಇರಿ!

advertisement

ಆಚಾರ್ಯ ಚಾಣಕ್ಯನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಮ್ಮ ದೇಶ ಕಂಡ ಅತ್ಯಂತ ಅದ್ಭುತ ಅರ್ಥಶಾಸ್ತ್ರಜ್ಞರಲ್ಲಿ ಆಚಾರ್ಯ ಚಾಣಕ್ಯ ಮುಂಚೂಣಿಯಲ್ಲಿ ಇರುತ್ತಾರೆ. ಚಾಣಕ್ಯನ ಪ್ರತಿಯೊಂದು ನೀತಿಗಳು (Chanakya Niti) ಕೂಡ ಬಹಳ ಸಮಯೋಚಿತವಾಗಿರುತ್ತವೆ. ಶತ ಶತಮಾನಗಳ ಹಿಂದೆ ಆಚಾರ್ಯ ಚಾಣಕ್ಯ ಹೇಳಿದ ಪ್ರತಿಯೊಂದು ವಿಷಯಗಳು ಈಗಿನ ಕಾಲಕ್ಕೂ ಕೂಡ ಅನ್ವಯವಾಗುತ್ತವೆ.

ಚಾಣಕ್ಯ ಮಹಾನ್ ಬುದ್ಧಿವಂತ ಎನಿಸಿಕೊಂಡವನು. ಚಾಣಕ್ಯ ಹೇಳುವ ಪ್ರಕಾರ ನಿಮ್ಮ ಮನೆಯಲ್ಲಿ ಇಂತಹ ಕೆಲವು ಚಿಹ್ನೆಗಳು ಕಾಣಿಸಿದರೆ ಬಡತನ ನಿಮ್ಮ ಮನೆಯತ್ತ ಧಾವಿಸುತ್ತಿದೆ ಎಂದು ಅರ್ಥ. ಇಂತಹ ಚಿಹ್ನೆಗಳು ಮನೆಯಲ್ಲಿ ಕಾಣಿಸಿಕೊಂಡರೆ ಶ್ರೀಮಂತನೂ ಕೂಡ ಕೆಲವು ದಿನಗಳಲ್ಲಿಯೇ ಬಡವನಾಗಬಹುದು ಹಾಗಾದ್ರೆ ಅಂತಹ ಚಿಹ್ನೆಗಳು ಯಾವವು ಹಾಗೂ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ನೋಡೋಣ.

  1. ಹಾಗೆ ಎಲ್ಲರ ಮನೆಯಲ್ಲಿಯೂ ತುಳಸಿ ಗಿಡ ಇರುವುದು ಸಾಮಾನ್ಯ ತುಳಸಿ ಗಿಡ ಎಲ್ಲಿಯವರೆಗೂ ಮನೆಯಲ್ಲಿ ಹಸುರಾಗಿರುತ್ತದೆಯೋ ಅಲ್ಲಿಯವರೆಗೂ ಮನೆಯಲ್ಲಿ ಶ್ರೇಯಸ್ಸು ತುಂಬಿರುತ್ತದೆ. ಆದರೆ ಮನೆಯ ಅಂಗಳದಲ್ಲಿ ಇರುವ ತುಳಸಿ ಗಿಡ ಒಣಗಲು ಆರಂಭವಾದರೆ ಅದು ಬಡತನದ ಸಂಕೇತ ಎಂದು ಚಾಣಕ್ಯ ಹೇಳುತ್ತಾರೆ.
  2. ಸದಾ ಮನೆಯಲ್ಲಿ ಶಾಂತಿ ಇದ್ದು ಒಂದೇ ಸಲ ಜಗಳ ಮನಸ್ತಾಪಗಳು ಆರಂಭವಾದರೆ ಆಗಲು ಬಡತನ ನಿಮ್ಮ ಮನೆಯನ್ನು ಹುಡುಕಿಕೊಂಡು ಬರುತ್ತಿದೆ ಎಂದು ಅರ್ಥ ಅಥವಾ ನಕರಾತ್ಮಕ ಶಕ್ತಿ ನಿಮ್ಮ ಮನೆಯನ್ನು ಆವರಿಸಿದೆ ಎಂದು ಅರ್ಥ ಇಂತಹ ಸಂದರ್ಭದಲ್ಲಿ ಜಾಗರೂಕತೆಯಿಂದ ಇರಿ ಎಂದು ಚಾಣಕ್ಯ ಹೇಳುತ್ತಾರೆ.
  3. ಇನ್ನು ಬಡತನವನ್ನು ತೋರಿಸುವಂತ ಮತ್ತೊಂದು ಚಿಹ್ನೆ ಮನೆಯಲ್ಲಿ ಹೆಂಗಸರು ಅಥವಾ ಹಿರಿಯರನ್ನು ಅಗೌರವದಿಂದ ಕಾಣುವುದು. ಅಂತಹ ಸ್ಥಿತಿ ನಿಮ್ಮ ಮನೆಯಲ್ಲಿ ನಿರ್ಮಾಣವಾಗುತ್ತಿದ್ದರೆ ತಕ್ಷಣ ಅದನ್ನು ಸರಿಪಡಿಸಿಕೊಳ್ಳಿ ಇಲ್ಲವಾದರೆ ದಾರಿದ್ರ್ಯ ನಿಮ್ಮ ಮನೆಯನ್ನು ಆವರಿಸಬಹುದು.
  4. ಮನೆಯಲ್ಲಿ ಇರುವ ದೇವರನ್ನು ಪೂಜಿಸದೇ ಇರುವುದು ದೇವರ ಮನೆಯನ್ನು ಸ್ವಚ್ಛಗೊಳಿಸದೆ ಇರುವುದು ಕೂಡ ಬಡತನದ ಸಂಕೇತವಾಗಿದೆ ಈ ರೀತಿ ನೀವು ಅಶುದ್ಧತೆಯಿಂದ ಇದ್ದರೆ ಲಕ್ಷ್ಮಿ ತನಗೆ ಮನೆಯಿಂದ ಹೊರಟು ಹೋಗುತ್ತಾಳೆ ಹಾಗೂ ಬಡತನವನ್ನು ನಿಮ್ಮ ಮನೆಯಲ್ಲಿ ಇರುವಂತೆ ಮಾಡುತ್ತಾಳೆ ಎಂದು ಚಾಣಕ್ಯ ಹೇಳುತ್ತಾರೆ.
  5. ಮನೆಯಲ್ಲಿ ವಾಸ್ತುವಿಗೆ ವಿರುದ್ಧವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಇಡುವುದು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಕೂಡ ದಾರಿದ್ರ್ಯದ ಸಂಕೇತವಾಗಿದೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆಯನ್ನು ಆವರಿಸುತ್ತದೆ ಹಾಗೂ ಧನಾತ್ಮಕ ಶಕ್ತಿ ಮರೆಯಾಗಿ ಶಾಶ್ವತವಾಗಿ ಬಡತನವು ಕೂಡ ಮನೆಗೆ ಕಾಲಿಡುತ್ತದೆ.

advertisement

ಇದಕ್ಕೆ ಪರಿಹಾರ ಏನು?

ಮೇಲೆ ಹೇಳಿದ ಯಾವುದೇ ಲಕ್ಷಣಗಳು ಮನೆಯಲ್ಲಿ ಕಾಣಿಸಿದ್ರೆ ತಕ್ಷಣ ನೀವು ಎಚ್ಚೆತ್ತುಕೊಳ್ಳಬೇಕು. ಎಲ್ಲ ತಪ್ಪುಗಳನ್ನು ನೋಡಿಕೊಂಡು ಸುಮ್ಮನೆ ಇರುವ ಅಭ್ಯಾಸ ಮಾಡಿಕೊಂಡರೆ ಅದರಿಂದ ಮುಂದೆ ನೀವು ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಈಗ ಏನಾದರೂ ಬಡತನ ಸ್ಥಿತಿಗೆ ನೀವು ತೆರಳಿದರೆ ತಕ್ಷಣ ಬೆಳಿಗ್ಗೆ ಮತ್ತು ಸಂಜೆ ಲಕ್ಷ್ಮಿ ಆರಾಧನೆ ಮಾಡುವುದನ್ನು ಬಿಡಬೇಡಿ ಸಂಜೆ ದೇವರ ಮುಂದೆ ದೀಪ ಹಚ್ಚಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲು “ಓಂ ಶ್ರೀಂ ಹಿ ಕ್ಲೀಂ ಶ್ರೀ ಸಿದ್ಧ ಲಕ್ಷ್ಮಯೇ ನಮಃ” ಎನ್ನುವ ಮಂತ್ರವನ್ನು ಪಠಣೆ ಮಾಡಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ಮತ್ತೆ ನಿಮ್ಮ ಮನೆಗೆ ಆಗಮಿಸುತ್ತಾಳೆ ಎಂದು ಚಾಣಕ್ಯ ತನ್ನ ನೀತಿ ಪಾಠದಲ್ಲಿ ತಿಳಿಸಿದ್ದಾರೆ.

advertisement

Leave A Reply

Your email address will not be published.