Kodi Mutt Swamiji: ಮುಂದಿನ ಭವಿಷ್ಯದ ಬಗ್ಗೆ ಕೋಡಿ ಮಠದ ಶ್ರೀಗಳು ಹೊಸ ಹೇಳಿಕೆ!
ನಮಗೆ ಈ ಕ್ಷಣದಲ್ಲಿ ಬದುಕು, ಜೀವನ ಇದೆ ಎಂಬುದು ತಿಳಿದಿದ್ದರೂ ಮುಂದೇನು ಆಗುತ್ತದೆ ಎಂದು ಮೊದಲೇ ತಿಳಿಯುವ ಹಂಬಲ ಇದ್ದೇ ಇರುತ್ತದೆ. ಬದುಕು ನೀರಿನ ಮೇಲಿನ ಗುಳ್ಳೆಯಂತಿದ್ದು ಯಾವಾಗ ಏನು ಬೇಕಾದರೂ ಆಗಬಹುದು. ಜೀವನದಲ್ಲಿ ಎಲ್ಲವೂ ಒಳ್ಳೆ ರೀತಿ ಆಗಬೇಕೆಂದು ನಾವೆಷ್ಟು ಅಂದುಕೊಂಡರು ಕೆಡುಕು ಬರದಿದ್ದರೆ ಒಳಿತಿನ ಸವಿ ಅರ್ಥಹೀನ ಎಂಬಂತೆ ಕೆಟ್ಟದ್ದು ಕೂಡ ಆಗಾಗ ನಡೆಯುತ್ತಲಿರುತ್ತದೆ. ಹಾಗಾಗಿ ಈ ಒಳಿತು ಕೆಡುಕನ್ನು ಮೊದಲೇ ತಿಳಿಯುವ ಸಲುವಾಗಿ ಜಾತಕ, ಭವಿಷ್ಯ ನುಡಿಯುವವರ ಮೊರೆ ಹೊಗ್ಗಲಾಗುತ್ತದೆ.
ಇಂದು ನಿತ್ಯ ಭವಿಷ್ಯ ಹೇಳುವ ಅದೆಷ್ಟೊ ಜ್ಯೋತಿಷ್ಯರನ್ನು ನಾವು ಕಾಣಬಹುದು, ಟಿವಿ ಚಾನೆಲ್ ನಲ್ಲಿಯೂ ಬೆಳ್ಳಂಬೆಳಗ್ಗೆ ಇವರದ್ದೇ ಕಾರು ಬಾರು ಆದರೆ ಎಲ್ಲ ಭವಿಷ್ಯ ನುಡಿಯುವವರ ಮಾತು ಅಷ್ಟು ನಿಜ ಆಗದ ಇರಲು ಬಹುದು ಹಾಗಿದ್ದರೂ ಅನೇಕ ವರ್ಷದಿಂದ ಕರ್ನಾಟಕದಲ್ಲಿ ಭವಿಷ್ಯ ನುಡಿಯುವ ವಿಚಾರಕ್ಕೆ ಕೋಡಿ ಮಠದ ಶ್ರೀಗಳು ಪ್ರಸಿದ್ಧಿ ಪಡೆದಿದ್ದು ಅವರು ನುಡಿದ ಭವಿಷ್ಯ ವಾಣಿ ಬಹುತೇಕ ನಿಜವಾಗಿದೆ. ಇದೀಗ ಮತ್ತೊಂದು ವಿಚಾರದ ಬಗ್ಗೆ ಅವರು ಭವಿಷ್ಯ ನುಡಿದಿದ್ದು ಸದ್ಯ ರಾಜ್ಯ ಮಟ್ಟದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ.
ನಿಜ ಸಂತ:
ರಾಜ್ಯದ ಸಾಮಾಜಿಕ, ಆರ್ಥಿಕ,ರಾಜಕೀಯ ಎಂಬ ಹಲವು ಆಯಾಮದಲ್ಲಿ ಒಳಿತು ಕೆಡುಕಿನ ಬಗ್ಗೆ ಕೋಡಿ ಮಠದ ಶ್ರೀಗಳು (Kodi Mutt Swamiji) ಭವಿಷ್ಯ ನುಡಿದಿದ್ದು ಅವುಗಳು ಎಲ್ಲ ಬಹುತೇಕ ನಿಜ ಆಗಿದೆ ಎಂದು ಹೇಳಬಹುದು. ಈ ಬಾರಿ ಕರ್ನಾಟಕದ ಚುನಾವಣೆಯ ವೇಳೆಯಲ್ಲಿ ಸ್ಪಷ್ಟ ಬಹುಮತದಿಂದ ಏಕಸರಕಾರ ಆಡಳಿತ ಜಾರಿಗೆ ಬರುತ್ತದೆ ಎಂದು ಹೇಳಿದ್ದರು ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸ್ಪಷ್ಟ ಬಹುಮತದೊಂದಿಗೆ ಗೆದ್ದು ಬಂದಿದೆ. ಈಗ ಮತ್ತೊಂದು ವಿಚಾರವಾಗಿ ಕೋಡಿ ಮಠದ ಶ್ರೀಗಳು (Kodi Mutt Swamiji) ಹೇಳಿಕೆ ನೀಡಿದ್ದಾರೆ.
ನಿಜ ಆಯ್ತು:
ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಯವರು ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಸ್ಫೋಟ ಆಗುತ್ತೆ ಎಂದು ಹೇಳಿದ್ದರು ಅದೆ ರೀತಿ ಇತ್ತೀಚೆಗಷ್ಟೇ ರಾಮೇಶ್ವರಂ ಕೆಫೆ ನಲ್ಲಿ ಭಾರೀ ಸ್ಫೋಟ ಆಗಿ ಅವರು ನುಡಿದ ಭವಿಷ್ಯ ನಿಜ ಆಗಿತ್ತು. 2024ರ ಆರಂಭದಲ್ಲೇ ಅನೇಕ ವಿಚಾರದ ಬಗ್ಗೆ ಹೇಳಿದ್ದು ಜಗತ್ತಿನಲ್ಲಿ ಬಾಂಬ್ ಸ್ಫೋಟ, ಮತಾಂದರತೆ ಹೆಚ್ಚಾಗಲಿದೆ, ಧಾರ್ಮಿಕ ಮುಖಂಡರು , ದೊಡ್ಡ ಸ್ಥಾನದವರು ಮರಣ ಹೊಂದುತ್ತಾರೆ, ಒಂದೆರೆಡು ಸಂಗತಿಗಳು ಜನರಿಹೆ ಭೀಕರ ಅನುಭವ ನೀಡಲಿದೆ ಎಂದು ಹೇಳಿದ್ದರು.
ಮುಂದಿನ ರಾಜಕೀಯ ಯಾರಿಗೆ?
ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಅಧಿಕಾರ ಸಿಗುತ್ತದೆ ಎಂದು ಕೋಡಿ ಮಠದ ಶ್ರೀಗಳು ತಿಳಿಸಲಿಲ್ಲ. ಹಾಗಿದ್ದರೂ ಯುಗಾದಿ ಬಳಿಕ ಇದಕ್ಕೆ ಉತ್ತರ ನೀಡುವುದಾಗಿ ಹೇಳಿದ್ದರು. ಜಾಗತಿಕ ಮಟ್ಟದಲ್ಲಿ ಮಳೆ, ಬೆಳೆ, ರಾಜಕೀಯ ಇತ್ಯಾದಿ ವಿಷಯಗಳ ಬಗ್ಗೆ ಕೂಡ ಮಾತಾಡುವುದಾಗಿ ಅವರು ತಿಳಿಸಿದ್ದು ಏನಾಗುತ್ತದೆ ಎಂದು ಕಾದು ನೋಡಬೇಕು.