ಅನ್ನದಾತ ರೈತರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ! ಖಾತೆಗೆ ಇಷ್ಟು ಹಣ ಬರಲಿದೆ
ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ.ಅದೇ ರೀತಿ ವಿವಿಧ ಸೌಲಭ್ಯ ಗಳನ್ನು ಜಾರಿಗೆ ತರುವಲ್ಲಿ ಚಿಂತನೆ ಕೂಡ ನಡೆಸಿದೆ. ರೈತರು ಕೃಷಿಯಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಲು ಕೃಷಿ ಕರಿಗೆ ತರಭೇತಿ, ಕೃಷಿ ಬೀಜ ವಿತರಣೆ, ಕೃಷಿ ಸಲಕರಣೆ ವಿತರಣೆ ಇತ್ಯಾದಿ ಸೌಲಭ್ಯ ವನ್ನು ಒದಗಿಸುತ್ತಾ ಮತ್ತಷ್ಟು ಪ್ರೇರೇಪಣೆ ನೀಡುತ್ತ ಬಂದಿದೆ. ಅದೇ ರೀತಿ ಕೇಂದ್ರ ಸರಕಾರ ಕೂಡ ರೈತರಿಗಾಗಿ ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದ್ದು ಇದೀಗ ಹೊಸದಾದ ಯೋಜನೆಯ ಬಗ್ಗೆ ಆಪ್ಡೆಟ್ ಮಾಹಿತಿ ಯೊಂದು ನೀಡಿದೆ.
Kisan Ashirwad Scheme:
ರೈತರಿಗಾಗಿ ಕೇಂದ್ರ ಸರಕಾರವು ಕಿಸಾನ್ ಆಶಿರ್ವಾದ್ ಯೋಜನೆ (Kisan Ashirwad Scheme) ಯನ್ನು ಜಾರಿಗೆ ತಂದಿದ್ದು ಕೃಷಿಕರನ್ನು ಮತ್ತಷ್ಟು ಬೆಂಬಲಿಸುತ್ತಿದೆ .ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯ ಸೌಲಭ್ಯ ವಿತರಣೆ ಮಾಡುತ್ತದೆ. ಸಾಕಷ್ಟು ರೈತರಿಗೆ ಈ ಯೋಜನೆ ಸಹಕಾರಿ ಯಾಗಿದೆ.
ಯಾರಿಗೆ ಈ ಯೋಜನೆ:
ಐದು ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿದ್ದ ರೈತರಿಗೆ ವಾರ್ಷಿಕವಾಗಿ 25 ಸಾವಿರ ರೂಪಾಯಿ ಮೊತ್ತ ನೀಡಲಾಗುತ್ತದೆ. ರೈತರಿಗೆ ತಮ್ಮ ಕೃಷಿ ಭೂಮಿ ಮೇಲೆ ನೀಡಲಾಗುವಂತ ಸೌಲಭ್ಯ ಇದಾಗಿದ್ದು ಇದರಿಂದ ಆರ್ಥಿಕ ಬೆಂಬಲ ಸಿಕ್ಕಂತೆ ಆಗಿದೆ. ಪ್ರತೀ ಎಕರೆಗೆ 5000 ರೂಪಾಯಿ ನಂತೆ 5 ಎಕರೆ ಮತ್ತು ಅದಕ್ಕಿಂತ ಕಡಿಮೆ ಹೊಂದಿರುವ ಕೃಷಿ ಭೂಮಿ ಇರುವ ರೈತರ ಖಾತೆಗೆ ಈ ಹಣ ಜಮೆ ಮಾಡಲಾಗುತ್ತದೆ.
ಝಾರ್ಕಂಡ್ ನಲ್ಲಿ ಹೆಚ್ಚು ಪ್ರಸಿದ್ಧಿ:
ಈ ಕಿಸಾನ್ ಆಶಿರ್ವಾದ್ ಯೋಜನೆ (Kisan Ashirwad Scheme) ಯು ಝರ್ಕಂಡ್ ನಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದು ಇಲ್ಲಿ ಈ ಯೋಜನೆ ಬಹಳಷ್ಟು ವಿಸ್ತರಣೆ ಆಗಿದೆ. ಇಲ್ಲಿ 5000 ಮೊತ್ತ ಒಂದು ಎಕರೆಗೆ , 10,000 2 ಎಕರೆಗೆ 15,000 3 ಎಕರೆಗೆ, 20,000 4 ಎಕರೆಗೆ ಹಾಗೂ 25000 5 ಎಕರೆಗೆ ನೀಡಲಾಗುತ್ತದೆ.
ಈ ದಾಖಲೆಗಳು ಬೇಕು:
- ರೈತರ ಪಹಣಿ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ಮಾಹಿತಿ
- ವಿಳಾಸದ ಪುರಾವೆ
- ಆದಾಯ ಪ್ರಮಾಣ ಪತ್ರ ಇತ್ಯಾದಿ
ಅರ್ಜಿ ಹಾಕಿ:
ಕಿಸಾನ್ ಆಶೀರ್ವಾದ್ ಯೋಜನೆಗೆ (Kisan Ashirwad Scheme) ಅರ್ಜಿ ಹಾಕಲು ರೈತರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಅಥವಾ https://mmkay.jharhand.gov.in/ ಇಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.